ಟಗರು ಸವಾಲು ಗೆದ್ದ ಚರಣ್‌ರಾಜ್‌


Team Udayavani, Jun 3, 2018, 11:51 AM IST

tagaru.jpg

ಶಿವರಾಜಕುಮಾರ್‌ ಅವರ “ಟಗರು’ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇಂದು ಚಿತ್ರತಂಡ ಸಂತೋಷ್‌ ಚಿತ್ರಮಂದಿರದಲ್ಲಿ ಶತದಿನವನ್ನು ಸಂಭ್ರಮಿಸುತ್ತಿದೆ. ಚಿತ್ರದ ಗೆಲುವಿನಲ್ಲಿ ಹಾಡುಗಳ ಪಾತ್ರ ಕೂಡಾ ಮಹತ್ವದ್ದಾಗಿದೆ. “ಟಗರು’ ಚಿತ್ರದ ಹಾಡುಗಳು ಇನ್ನಿಲ್ಲದಂತೆ ಹಿಟ್‌ ಆಗಿದ್ದು ನಿಮಗೆ ಗೊತ್ತೇ ಇದೆ. ಚಿತ್ರಕ್ಕೆ ಸಂಗೀತ ನೀಡಿದವರು ಚರಣ್‌ರಾಜ್‌.  

ಚರಣ್‌ರಾಜ್‌ಗೂ “ಟಗರು’ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಆದರೆ, ಈ ಚಿತ್ರಕ್ಕೆ ಸಂಗೀತ ನೀಡೋದು ಒಂದು ಸವಾಲಿನ ಕೆಲಸವಾಗಿತ್ತಂತೆ. “ಟಗರು ಚಿತ್ರ ನನಗೆ ಒಳ್ಳೆಯ ಅನುಭವ ನೀಡಿತು. ಸೂರಿಯವರೊಂದಿಗೆ ಕೆಲಸ ಮಾಡಿದ ಕ್ಷಣಗಳು ಕೂಡಾ ಅದ್ಭುತ. ಅವರ ಆಲೋಚನೆಗಳು, ಸಂಗೀತದ ಬಗೆಗಿನ ಅವರ ಪ್ರೀತಿ, ಅವರು ಬೆಂಬಲಿಸುವ ರೀತಿಯಿಂದ ಒಳ್ಳೆಯ ಹಾಡುಗಳನ್ನು ನೀಡಲು ಸಾಧ್ಯವಾಯಿತು’ ಎಂದು “ಟಗರು’ ಕ್ಷಣಗಳನ್ನು ಮೆಲುಕು ಹಾಕುತ್ತಾರೆ ಚರಣ್‌ರಾಜ್‌.

ಮೊದಲೇ ಹೇಳಿದಂತೆ “ಟಗರು’ ಒಂದು ಸವಾಲಿನ ಕೆಲಸ ಎನ್ನಲು ಚರಣ್‌ರಾಜ್‌ ಮರೆಯುವುದಿಲ್ಲ. “ಸಾಮಾನ್ಯವಾಗಿ ಒಂದು ಸಂದರ್ಭ ಹೇಳಿ, ಅದಕ್ಕೆ ಹಾಡು ಮಾಡಲು ಹೇಳುತ್ತಾರೆ. ಆದರೆ, ಸೂರಿಯವರ ಶೈಲಿ ತುಂಬಾ ವಿಭಿನ್ನ. ಅವರು ಸಿಚುವೇಶನ್‌ ಹೇಳುತ್ತಿರಲಿಲ್ಲ. ಅದರ ಬದಲಾಗಿ ಮನುಷ್ಯ ಭಾವನೆಗಳನ್ನು ಹೇಳಿ, ಅದಕ್ಕೆ ಟ್ಯೂನ್‌ ಮಾಡಲು ಹೇಳುತ್ತಿದ್ದರು.

ಕೋಪ, ಪ್ರೀತಿ, ಬೇಸರ … ಹೀಗೆ ಭಾವನೆಗಳನ್ನು ಹೇಳುತ್ತಿದ್ದರು. ನಿಜಕ್ಕೂ ಅದೊಂದು ಸವಾಲಿನ ಕೆಲಸವಾಗಿತ್ತು. ಕಂಪೋಸ್‌ ಸಮಯದಲ್ಲಿ ಸೂರಿ ಹಾಗೂ ಜಯಂತ್‌ ಕಾಯ್ಕಿಣಿ ಇಬ್ಬರೂ ಜೊತೆಗೇ ಇರುತ್ತಿದ್ದರು. ಇಬ್ಬರು ದಿಗ್ಗಜರ ಮಧ್ಯೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು’ ಎಂದು ಖುಷಿಯಿಂದ ಹೇಳುತ್ತಾರೆ ಚರಣ್‌. ಚರಣ್‌ರಾಜ್‌ ಎಂದರೆ ತುಂಬಾ ಸಾಫ್ಟ್. ಅವರ ಗುಣಕ್ಕೆ ತಕ್ಕಂತೆ ಅವರ ಸಂಗೀತ ಕೂಡಾ ಹೆಚ್ಚು ಮೆಲೋಡಿಯಾಗಿರುತ್ತದೆ,

ಮಾಸ್‌ ಸಾಂಗ್‌ಗಳನ್ನು ಅವರು ಮಾಡೋದಿಲ್ಲ ಎಂಬ ಭಾವನೆ ಅನೇಕರಲ್ಲಿತ್ತಂತೆ. ಆದರೆ, “ಟಗರು’ ಮೂಲಕ ಆ ಬ್ರಾಂಡ್‌ನಿಂದ ಹೊರಬಂದರಂತೆ. ಚರಣ್‌ರಾಜ್‌ ಕೂಡಾ ಪಕ್ಕಾ ಮಾಸ್‌, ಟಪ್ಪಾಂಗುಚ್ಚಿ ಹಾಡುಗಳನ್ನು ಮಾಡುತ್ತಾರೆಂಬುದನ್ನು “ಟಗರು’ ತೋರಿಸಿಕೊಡುವ ಮೂಲಕ ಬ್ರಾಂಡ್‌ ಆಗುವ ಅಪಾಯದಿಂದ ತಪ್ಪಿದರಂತೆ ಚರಣ್‌ರಾಜ್‌.

ಇನ್ನು, “ಟಗರು’ ಚಿತ್ರದ ಹಾಡುಗಳನ್ನು ಶಿವರಾಜಕುಮಾರ್‌ ಕೂಡಾ ಮೆಚ್ಚುವ ಜೊತೆಗೆ ಚರಣ್‌ರಾಜ್‌ ಅವರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರಂತೆ. ಇದು ಅವರ ವಿಶ್ವಾಸವನ್ನು ಮತ್ತಷ್ಟು ಹೆಚ್ಚುಗೊಳಿಸಿದ್ದು ಸುಳ್ಳಲ್ಲ. “ಟಗರು’ ನಂತರ ಅದೆಷ್ಟೋ ಸಿನಿಮಂದಿ ಚರಣ್‌ರಾಜ್‌ರಿಂದ ಸಂಗೀತ ಕೊಡಿಸಬೇಕು ಎಂದು ಪ್ರಯತ್ನಿಸಿದ್ದರು. ಆದರೆ, ಚರಣ್‌ರಾಜ್‌ ಮಾತ್ರ ಯಾರ ಕೈಗೂ ಸಿಕ್ಕಿರಲಿಲ್ಲ. ತಮ್ಮ ಪಾಡಿಗೆ ತಾವು ಒಪ್ಪಿಕೊಂಡ ಸಿನಿಮಾಗಳ ಕೆಲಸದಲ್ಲಿ ಬಿಝಿಯಾಗಿದ್ದರು.

ಹಾಗಾದರೆ ಚರಣ್‌ಗೆ ಹೆಚ್ಚು ಸಿನಿಮಾ ಮಾಡುವ ಆಸೆ ಇಲ್ಲವೇ ಎಂದು ನೀವು ಕೇಳಬಹುದು. “ನನಗೆ ನಾಲ್ಕು ದಿನಕ್ಕೊಂದರಂತೆ ಅವಕಾಶಗಳು ಬರುತ್ತಲೇ ಇರುತ್ತವೆ. ಅವಕಾಶಗಳು ಬಂತೆಂಬ ಕಾರಣಕ್ಕೆ ಎಲ್ಲವನ್ನು ಒಪ್ಪಿಕೊಂಡರೆ ಯಾವ ಸಿನಿಮಾಕ್ಕೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ ನನಗೆ ತುಂಬಾ ತುರ್ತಾಗಿ ಸಂಗೀತ ಮಾಡಿಕೊಡಲು ಬರೋದಿಲ್ಲ. ಸ್ವಲ್ಪ ತಡವಾದರೂ ನಾನು ಗುಣಮಟ್ಟದ ಹಾಡುಗಳನ್ನು ಕೊಡಬೇಕೆಂದುಕೊಂಡಿದ್ದೇನೆ’ ಎನ್ನುವುದು ಚರಣ್‌ರಾಜ್‌ ಮಾತು.

ಟಾಪ್ ನ್ಯೂಸ್

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.