ಗುರು-ಶಿಷ್ಯನ ಜೊತೆಗೆ ದಯಾಳ್
Team Udayavani, Jun 6, 2018, 11:18 AM IST
ಆ ವೇದಿಕೆಯ ವಿಶೇಷ ಎಂದರೆ ಅಲ್ಲಿ ದಯಾಳ್ ಅವರ ಗುರು ಮತ್ತು ಶಿಷ್ಯ ಇಬ್ಬರೂ ಇದ್ದಿದ್ದು. ದಯಾಳ್ ಗುರು ಯಾರು ಎಂದರೆ, ಅದು ಉಪೇಂದ್ರ. ಈ ಹಿಂದೆ ಉಪೇಂದ್ರ ಅವರು “ಎಚ್ಟುಓ’ ಚಿತ್ರ ಮಾಡಿದಾಗ, ತಮಿಳು ಸಂಭಾಷಣೆಗಳಲ್ಲಿ ದಯಾಳ್ ಅವರ ಸಹಾಯ ಪಡೆದಿದ್ದರಂತೆ.
ಆ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಯಾಳ್, ಈಗಲೂ ಉಪೇಂದ್ರ ಅವರನ್ನು ತಮ್ಮ ಗುರುಗಳು ಎಂದೇ ಭಾವಿಸಿದ್ದಾರೆ. ಇನ್ನು ದಯಾಳ್ ಅವರ ಶಿಷ್ಯ ಯಾರೆಂದರೆ ಅದು ಆರ್. ಚಂದ್ರು. ಎಸ್. ನಾರಾಯಣ್ ಅವರ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದ ಚಂದ್ರು, ಚಿತ್ರ ತಯಾರಿಕೆಯ ಪಟ್ಟು ಕಲಿಯಬೇಕು ಎಂದು ಹೋಗಿದ್ದು ದಯಾಳ್ ಬಳಿಗಂತೆ.
ದಯಾಳ್ ನಿರ್ದೇಶದ “ಸಖ-ಸಖಿ’ ಚಿತ್ರದಲ್ಲಿ ಕೆಲಸ ಮಾಡಿದ ಚಂದ್ರು ಆ ನಂತರ “ತಾಜ್ ಮಹಲ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಹಾಗಾಗಿ ಉಪೇಂದ್ರರನ್ನು ತಮ್ಮ ಗುರುಗಳು ಎಂದು ದಯಾಳ್ ಭಾವಿಸಿದರೆ, ದಯಾಳ್ ಅವರು ತಮ್ಮ ಗುರುಗಳು ಎಂದು ಚಂದ್ರು ನಂಬಿದ್ದಾರೆ. ಈ ಮೂವರೂ ಇತ್ತೀಚೆಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
ದಯಾಳ್ ನಿರ್ದೇಶನದ “ಆ ಕರಾಳ ರಾತ್ರಿ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಉಪೇಂದ್ರ ಅವರು ಬಂದಿದ್ದರು. ಇನ್ನು “ಐ ಲವ್ ಯೂ’ ಚಿತ್ರದಲ್ಲಿ ಉಪೇಂದ್ರ ಅವರನ್ನು ನಿರ್ದೇಶಿಸುತ್ತಿರುವ ಆರ್. ಚಂದ್ರು ಸಹ ಕಾರ್ಯಕ್ರಮಕ್ಕೆ ಬಂದಿದ್ದರು. ತಮ್ಮ ಗುರುವಿನ ಜೊತೆಗಿನ ಸಂಬಂಧವನ್ನು ದಯಾಳ್ ನೆನಪಿಸಿಕೊಂಡರೆ, ದಯಾಳ್ ಜೊತೆಗೆ ಕೆಲಸ ಮಾಡಿದ್ದನ್ನು ಚಂದ್ರು ಮೆಲುಕು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ
CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ