ರೇಡಿಯೋ ಜಾಕಿಯ ಹೊಸ ಮೈಲಿಗಲ್ಲು; ಕತ್ತಲ ಕಾಡಲ್ಲಿ ನೇತ್ರ ಓಡಾಟ!


Team Udayavani, Jul 2, 2018, 12:40 PM IST

netra.jpg

ಕನ್ನಡದಲ್ಲಿ ಆರ್‌ಜೆಗಳು ತೆರೆಯ ಮೇಲೆ  ಕಾಣಿಸಿಕೊಂಡಿರುವುದು ಹೊಸ ವಿಚಾರವೇನಲ್ಲ. ಹಾಗೇ ಆರ್‌ಜೆ ನೇತ್ರ ಅವರಿಗೂ ಸಿನಿಮಾ ಹೊಸದಲ್ಲ. ಆದರೀಗ ಹೊಸದೊಂದು ಮೈಲಿಗಲ್ಲಿನತ್ತ ತಮ್ಮ ಚಿತ್ತ ಹರಿಸಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಹೌದು, “ಆಟಗಾರ’ ಹಾಗೂ “ರಿಂಗ್‌ರೋಡ್‌-ಶುಭಾ’ ಚಿತ್ರದ ಬಳಿಕ “ಬಿಗ್‌ಬಾಸ್‌’ ಮನೆಗೆ ಹೋಗಿದ್ದ ಆರ್‌ಜೆ ನೇತ್ರ, ಹೊರ ಬಂದವರಿಗೆ ಸಿನಿಮಾ ಹುಡುಕಿ ಬಂದದ್ದು “6 ನೇ ಮೈಲಿ’. ಈ ಚಿತ್ರ ಈ ವಾರ ತೆರೆಗೆ ಬರುತ್ತಿದೆ.

ಈ ಕುರಿತು ಹೇಳಿಕೊಳ್ಳುವ ನೇತ್ರ, “ಕಥೆ ಮತ್ತು ಪಾತ್ರ ಕೇಳಿದಾಗ ಇಲ್ಲೊಂದು ಚಾಲೆಂಜ್‌ ಪಾತ್ರ ಇದೆ ಅಂತೆನಿಸಿತು. ಕೂಡಲೇ ಗ್ರೀನ್‌ಸಿಗ್ನಲ್‌ ಕೊಟ್ಟೆ. ಆದರೆ ಚಿತ್ರದಲ್ಲಿ ಸಂಚಾರಿ ವಿಜಯ್‌ ಇದ್ದಾರೆ ಅಂದಾಗ, ಒಂದಷ್ಟು ಭಯ ಶುರುವಾಗಿದ್ದುಂಟು. ಯಾಕೆಂದರೆ, ನಟನೆಯಲ್ಲಿ ರಾಷ್ಟ್ರಮಟ್ಟದ ಗಮನಸೆಳೆದ ಸಂಚಾರಿ ವಿಜಯ್‌ ಜೊತೆ ಹೇಗಪ್ಪಾ ಕೆಲಸ ಮಾಡೋದು, ಅವರ ಮುಂದೆ ನಾನು ಡಮ್ಮಿ ಪೀಸ್‌ ಆಗಿಬಿಡ್ತೀನಾ’ ಎಂಬ ಪ್ರಶ್ನೆ ಕಾಡಿದ್ದು ನಿಜ. ಕೊನೆಗೆ ಚಾಲೆಂಜಿಂಗ್‌ ತಗೊಂಡು ಕೆಲಸ ಮಾಡಿದಾಗಲೇ ಮಾತಿಗೂ ನಟನೆಗೂ ಎಷ್ಟೊಂದು ವ್ಯತ್ಯಾಸ ಇದೆ ಅಂತ ಗೊತ್ತಾಗಿದ್ದು ಎನ್ನುತ್ತಾರೆ ನೇತ್ರ.

ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ನನಗಿಲ್ಲಿ ಎರಡು ಶೇಡ್‌ ಪಾತ್ರವಿದೆ. ಮೊದಲರ್ಧ ಒಂದು ರೀತಿಯ ಪಾತ್ರವಿದ್ದರೆ, ದ್ವಿತಿಯಾರ್ಧದಲ್ಲಿ ಇನ್ನೊಂದು ಶೇಡ್‌ ಪಾತ್ರವಿದೆ. ಅದೊಂದು ರೀತಿಯ ಸ್ಟ್ರಾಂಗ್‌ ವುಮೆನ್‌ ಪಾತ್ರ. ತೆರೆಯ ಮೇಲೆ ನನ್ನ ಪಾತ್ರ ನೋಡಿದರೆ, ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ. ಪಾತ್ರದ ಬಗ್ಗೆ ಹೇಳುವುದಾದರೆ, ಟ್ರಕ್ಕಿಂಗ್‌ಗೆ ಹೋದಾಗ, ಕೆಲವೊಂದ ಘಟನೆಗಳು ನಡೆದು ಹೋಗುತ್ತವೆ. ಆಮೇಲೆ ಏನೆಲ್ಲಾ ಆಗಿಹೋಗುತ್ತೆ ಎನ್ನುವುದು ಕಥೆ. 

ವಿಶೇಷವೆಂದರೆ, ಸುಮಾರು 12 ದಿನಗಳ ಕಾಲ ರಾತ್ರಿಯಿಡೀ ಚಿತ್ರೀಕರಣ ನಡೆದಿದೆ. ಕೆಲವೊಮ್ಮೆ ಹಗಲು-ರಾತ್ರಿಯೂ ನಿರಂತರ ಚಿತ್ರೀಕರಣ ಮಾಡಿದ್ದುಂಟು. ರಾತ್ರಿ ಚಿತ್ರೀಕರಣ ನನಗೊಂದು ವಿಶೇಷ ಅನುಭವ ಕಟ್ಟಿಕೊಟ್ಟಿದ್ದು ಸುಳ್ಳಲ್ಲ. ಸಂಜೆ ಆಗುತ್ತಿದ್ದಂತೆಯೇ ಸಾಕಪ್ಪಾ ಕೆಲಸ ಅಂದುಕೊಳ್ಳುವ ನನಗೆ, ರಾತ್ರಿಯೆಲ್ಲಾ ಚಿತ್ರೀಕರಣದಲ್ಲಿರಬೇಕಾಗಿತ್ತು. ಅದರಲ್ಲೂ ಯಲ್ಲಾಪುರ, ಶಿರಸಿಯ ದಟ್ಟ ಕಾಡಿನ ನಡುವೆ ಓಡುವ, ಸುತ್ತಾಡುವ ದೃಶ್ಯಗಳಿದ್ದವು. ಅದೆಷ್ಟು ಮೈಲಿಗಳನ್ನು ದಾಟಿದ್ದೇವೋ ಗೊತ್ತಿಲ್ಲ. ಕತ್ತಲ ಕಾಡಲ್ಲಿ ಓಡೋದೇ ಒಂದು ಚಾಲೆಂಜ್‌ ಆಗಿತ್ತು. ಇನ್ನು, ಈ ಚಿತ್ರದಲ್ಲಿ ಸಾಕಷ್ಟು ಅನುಭವ ಆಗಿದೆ. ನಾಯಕ ಸಂಚಾರಿ ವಿಜಯ್‌ ಅವರೊಂದಿಗೆ ಒಳ್ಳೆಯ ಕೆಲಸ ಕಲಿತುಕೊಂಡೆ ಎಂದು ವಿವರ ಕೊಡುತ್ತಾರೆ ನೇತ್ರ.

ಅವರಿಗೆ ಆರ್‌ಜೆ ಮಾತು ಮುಖ್ಯವೋ, ನಟನೆ ಮುಖ್ಯವೋ ಎಂಬ ಪ್ರಶ್ನೆ ಮುಂದಿಟ್ಟಾಗ, “ಆರ್‌ಜೆ ಆಗಿ ಮೈಕ್‌ ಮುಂದೆ ಸುಲಭವಾಗಿ ಮಾತಾಡಬಹುದು. ಅಲ್ಲಿ ವಾಯ್ಸವೊಂದೇ ಪ್ರತಿಯೊಂದನ್ನು ಹೇಳುತ್ತಾ ಹೋಗುತ್ತೆ. ಆದರೆ, ಸಿನಿಮಾ ಹಾಗಲ್ಲ, ಕ್ಯಾಮೆರಾ ಮುಂದೆ ಹೇಗೆ ಇರಿ¤àವಿ, ಯಾವ ದೃಶ್ಯಕ್ಕೆ ಎಂಥಾ ಅಭಿನಯ ಕೊಡಬೇಕು ಎಂಬ ಚಾಲೆಂಜ್‌ ಇರುತ್ತೆ. ಆರ್‌ಜೆಯಾಗಿ ವಾಯ್ಸ ಬ್ಯಾಲೆನ್ಸ್‌ ಮಾಡಿದರೆ, ನಟಿಯಾಗಿ ಫೇಸ್‌, ಬಾಡಿಲಾಂಗ್ವೇಜ್‌ ಬ್ಯಾಲೆನ್ಸ್‌ ಮಾಡಬೇಕು. ಅದೊಂದು ದೊಡ್ಡ ಚಾಲೆಂಜ್‌ ಎನ್ನುವ ನೇತ್ರ, ಸಹೋದರ ರಿಷಿ ಜೊತೆ ನಟಿಸಲು ಉತ್ಸಾಹದಲ್ಲಿದ್ದಾರೆ. ಒಳ್ಳೆಯ ಕಥೆ ಬಂದರೆ ಖಂಡಿತ ನಟಿಸ್ತೀನಿ. ಸದ್ಯಕ್ಕೆ ಈ ಚಿತ್ರ ರಿಲೀಸ್‌ ಬಳಿಕ ಬೇರೊಂದು ಸಿನಿಮಾ ಕುರಿತು ಹೇಳ್ತೀನಿ ಎಂದಷ್ಟೇ ಹೇಳುತ್ತಾರೆ ನೇತ್ರ.

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.