ಡ್ರಗ್ಸ್‌ ಮಾಫಿಯಾ ಸುತ್ತ ಗೋಸಿಗ್ಯಾಂಗ್‌, ನಶೆಯಲ್ಲಿ ಹೊಸಬರು


Team Udayavani, Jul 18, 2018, 2:28 PM IST

gosigang-1.jpg

ಸಿನಿಮಾಗಳಲ್ಲಿ ಡ್ರಗ್ಸ್‌ ವಿಷಯ ಕಾಮನ್‌. ಆದರೆ, ಅದೇ ಹೈಲೆಟ್‌ ಆಗಿರುವುದಿಲ್ಲ. ಆದರೆ, ಈ ಹಿಂದೆ ಬಾಲಿವುಡ್‌ನ‌ಲ್ಲಿ “ಡ್ರಗ್ಸ್‌’ ವಿಷಯವನ್ನೇ ಕೇಂದ್ರವಾಗಿಟ್ಟುಕೊಂಡು “ಉಡ್ತಾ ಪಂಜಾಬ್‌’ ಎಂಬ ಚಿತ್ರ ಬಂದಿತ್ತು. ಅದು ಸಿಕ್ಕಾಪಟ್ಟೆ ವಿವಾದಕ್ಕೂ ಕಾರಣವಾಗಿತ್ತು. ಇತ್ತೀಚೆಗೆ ಸದನದಲ್ಲೂ ಆ ಡ್ರಗ್ಸ್‌ ವಿಷಯವೇ ಪ್ರಸ್ತಾಪವಾಗಿತ್ತು. ಎಲ್ಲಾ ಸರಿ, ಈಗ ಯಾಕೆ ಆ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಈಗ ಕನ್ನಡ ಚಿತ್ರವೊಂದರಲ್ಲೂ ಅಂಥದ್ದೊಂದು ಡ್ರಗ್ಸ್‌ ಮಾಫಿಯಾ ವಿಷಯ ಪ್ರಸ್ತಾಪವಾಗುತ್ತಿದೆ. ಹೌದು, “ಗೋಸಿ ಗ್ಯಾಂಗ್‌’ ಎಂಬ ಚಿತ್ರ ಡ್ರಗ್ಸ್‌ ಮಾಫಿಯಾ ಸುತ್ತ ಸುತ್ತುತ್ತದೆ ಎಂಬುದು ವಿಶೇಷ.

ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಯತಿರಾಜ್‌ ಜಗ್ಗೇಶ್‌ ಹಾಗು ಅಜಯ್‌ ಕಾರ್ತಿಕ್‌ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಅಜಯ್‌ ಕಾರ್ತಿಕ್‌ಗೆ ಇದು ಮೊದಲ ಸಿನಿಮಾ. ಈ ಚಿತ್ರವನ್ನು ಕೆ.ಶಿವಕುಮಾರ್‌ ನಿರ್ಮಿಸಿದ್ದಾರೆ. ರಾಜು ದೇವಸಂದ್ರ ನಿರ್ದೇಶನ ಮಾಡಿದ್ದಾರೆ. 

“ಗೋಸಿ ಗ್ಯಾಂಗ್‌’ ಅಂದಾಕ್ಷಣ, ಅದೊಂದು ಆ್ಯಕ್ಷನ್‌ ಚಿತ್ರವೋ ಅಥವಾ ಪುಡಾರಿಗಳ ಚಿತ್ರವೋ ಇರಬೇಕು ಎಂಬ ಪ್ರಶ್ನೆ ಎದುರಾಗುತ್ತೆ. ಇಲ್ಲಿ ಆ್ಯಕ್ಷನ್‌ ಇದೆ, ಪುಡಾರಿಗಳೂ ಇದ್ದಾರೆ. ಎಲ್ಲದರ ಜೊತೆಗೆ ಮುಗ್ಧ ಮನಸ್ಸುಗಳೂ ಇವೆ. ಅವೆಲ್ಲದರ ತಲ್ಲಣ ಈ ಚಿತ್ರಣದಲ್ಲಿದೆ. “ಗೋಸಿ ಗ್ಯಾಂಗ್‌’ ಅಂದರೆ, ಅದೊಂದು ಹುಡುಗರ ನಡುವಿನ ಪದ. ಪುಟಗೋಸಿ, ಗೋಸಿ ಪದಗಳು ಸಾಮಾನ್ಯವಾಗಿವೆ. ಅಂಥದ್ದೇ “ಗೋಸಿ ಗ್ಯಾಂಗ್‌’ ಎಂಬ ಪದ ಇಟ್ಟುಕೊಂಡು ಚಿತ್ರ ಮಾಡಲಾಗಿದೆ.

ಕೇವಲವಾಗಿ ಕಾಣುವ, ನೋಡುವ ಮಂದಿಗೆ “ಗೋಸಿ ಗ್ಯಾಂಗ್‌’ ಎಂಬ ಪಟ್ಟ ಸಿಗುತ್ತೆ. ಅಂಥದ್ದೇ ಕಥಾಹಂದರ ಇಲ್ಲಿದ್ದು, ಇಲ್ಲಿ ಯುವಕರು ಡ್ರಗ್ಸ್‌ ಮಾಫಿಯಾದಲ್ಲಿ ಸಿಲುಕಿ ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾರೆ. ಅಂಥದ್ದೊಂದು ಮಾಫಿಯಾ ಹೇಗೆ ನಡೆಯುತ್ತೆ, ಯಾರೆಲ್ಲಾ ಇರುತ್ತಾರೆ ಎಂಬುದು ಚಿತ್ರದ ಹೈಲೆಟ್‌. 

ಇಲ್ಲೊಂದು ಸಂದೇಶವೂ ಇದೆ. ಇದು ಯೂಥ್‌ ಚಿತ್ರವಾಗಿದ್ದರೂ  ಪ್ರೀತಿ, ಗೀತಿ ಇತ್ಯಾದಿ ಇಲ್ಲ. ಆದರೆ, ಒಂಚೂರು ಕಾಮಿಡಿಯೊಂದಿಗೆ ಅಲ್ಲಲ್ಲಿ ಕ್ರಷ್‌ ಆಗುವಂತಹ ಅಂಶಗಳು ಇಲ್ಲಿರಲಿವೆ. ಎಸ್ಸೆಸ್ಸೆಲ್ಸಿ ಪಾಸ್‌ ಆದ ಹುಡುಗರು, ಹಳ್ಳಿಯಿಂದ ಸಿಟಿಗೆ ಬಂದಾಗ, ಅವರಲ್ಲಿ ಆಗುವ ಬದಲಾವಣೆಗಳು, ಸಿಟಿ ಹುಡುಗಿಯರನ್ನು ನೋಡಿದಾಗ ಆಗುವಂತಹ ಆಕರ್ಷಣೆ ಮತ್ತು ಗೊತ್ತಿಲ್ಲದೆಯೇ ಮಾಫಿಯಾದಲ್ಲಿ ಸಿಲುಕಿಕೊಳ್ಳುವ ಸಂದರ್ಭಗಳು ಚಿತ್ರದಲ್ಲಿವೆ. ಚಿತ್ರಕ್ಕೆ ಹಾಲೇಶ್‌ ಛಾಯಾಗ್ರಹಣ ಮಾಡಿದ್ದಾರೆ. ಆರವ್‌ ಸಂಗೀತವಿದೆ. ನಾಲ್ಕು ಹಾಡುಗಳು ಚಿತ್ರದಲ್ಲಿವೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.