ಹೆಸರಲ್ಲೇನಿದೆ ಶಿವಾ?ಇದು “ವಜ್ರಮುನಿ’ ಪ್ರಸಾದ


Team Udayavani, Jul 19, 2018, 1:05 PM IST

vajrumuni108.jpg

ವಜ್ರಮುನಿಗೂ ವಜ್ರಮುನಿಗೂ ಏನು ವ್ಯತ್ಯಾಸ?”ವಜ್ರಮುನಿ’ ಕನ್ನಡ ಚಿತ್ರರಂಗ ಕಂಡ ಅದ್ಭುತ ಖಳನಟ. “ವಜ್ರಮುನಿ’ ಕನಕಪುರ ಸಮೀಪದ ಕನಕನಹಳ್ಳಿ ಗ್ರಾಮದ ವಜ್ರಮುನೇಶ್ವರ ದೇವರು. ಇಲ್ಲೊಂದು ಹೊಸಬರ ತಂಡ “ವಜ್ರಮುನಿ’ ಎಂಬ ಶೀರ್ಷಿಕೆಯಡಿ ಚಿತ್ರ ಶುರು ಮಾಡಲು ಸಜ್ಜಾಗಿದೆ. ಆದರೆ, ಖಳನಟ ವಜ್ರಮುನಿ ಅವರ ಮನೆಯವರು ಈ ಶೀರ್ಷಿಕೆ ಕೊಡುವಂತಿಲ್ಲ ಎಂದು ಮನವಿ ಮಾಡಿರುವ ಬಗ್ಗೆ ಸುದ್ದಿಯಾಗಿದ್ದೇ ತಡ, ಚಿತ್ರತಂಡ “ವಜ್ರಮುನಿ’ ಶೀರ್ಷಿಕೆಗೆ ಸ್ಪಷ್ಟನೆ ಕೊಟ್ಟಿದೆ. ಅಷ್ಟಕ್ಕೂ ಈ ತಂಡ “ವಜ್ರಮುನಿ’ ಎಂದು ಶೀರ್ಷಿಕೆ ನೋಂದಾಯಿಸಿರುವುದು ಕೃಷ್ಣೇಗೌಡ ಅವರ ಮಂಡಳಿಯಲ್ಲಿ. ಶೀರ್ಷಿಕೆಗೆ ಮಂಡಳಿ ಯಾವುದೇ ಸಮಸ್ಯೆ ಮಾಡಿಲ್ಲ. ಆದರೂ, ಶೀರ್ಷಿಕೆ ಕೊಡಬಾರದು ಅಂತ ಆ ಮನೆಯವರು ಎಲ್ಲೋ ಸುದ್ದಿ ಹಬ್ಬಿಸಿರುವುದರಿಂದ ಅದಕ್ಕೊಂದು ಉತ್ತರ ಕೊಟ್ಟಿದೆ ಚಿತ್ರತಂಡ.

ಈ ಚಿತ್ರಕ್ಕೆ ಭರತ್‌ ಚಕ್ರವರ್ತಿ ನಿರ್ದೇಶಕ. ಅವರಿಗೆ ಇದು ಮೊದಲ ಪ್ರಯತ್ನ. “ವಜ್ರಮುನಿ ಕನ್ನಡದ ಖಳನಟರು. ಅವರಿಗೂ ನಮ್ಮ ಈ “ವಜ್ರಮುನಿ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೆಸರಿಗೆ ಧಕ್ಕೆ ತರುವಂಥದ್ದಾಗಲಿ, ಅವರ ಭಾವಚಿತ್ರವಾಗಲಿ, ಅವರ ಜೀವನ ಚರಿತ್ರೆಯಾಗಲಿ ಈ ಚಿತ್ರದಲ್ಲಿರುವುದಿಲ್ಲ. “ವಜ್ರಮುನಿ’ ಎಂದರೆ, ಒಂದು ಊರಲ್ಲಿರುವ ವಜ್ರ ಮುನೇಶ್ವರ ಸ್ವಾಮಿಯ ಹೆಸರು. ಚಿತ್ರದ ನಾಯಕನ ಅಪ್ಪ, ವಜ್ರಮುನೇಶ್ವರನ ಪರಮಭಕ್ತರು. ಆ ದೇವರ ಕೃಪೆಯಿಂದ ಜನಿಸುವ ಮಗನಿಗೆ, “ವಜ್ರಮುನಿ’ ಎಂದು ನಾಮಕರಣ ಮಾಡುತ್ತಾರೆ. ಎಲ್ಲರೂ ವಜ್ರ ಅಂತ ಪ್ರೀತಿಯಿಂದ ಕರೆಯುತ್ತಾರೆ. ಇದು ಬಿಟ್ಟರೆ, ಖಳನಟ ವಜ್ರಮುನಿ ಅವರಿಗೆ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಅಂಥದ್ದೇನಾದರೂ ಇದ್ದಲ್ಲಿ, ಚಿತ್ರ ಬಿಡುಗಡೆ ಮಾಡುವುದೇ ಇಲ್ಲ’ ಎಂಬುದು ನಿರ್ದೇಶಕರ ಮಾತು.

ಇಲ್ಲೊಂದು ಸಂದೇಶವಿದೆ. ಮಾಸ್‌ ಅಂಶಗಳಿರುವ ಈ ಚಿತ್ರದಲ್ಲಿ ಮನರಂಜನೆಗೂ ಜಾಗವಿದೆ. ಕೆಟ್ಟವರು, ಒಳ್ಳೆಯವರು ನಡುವಿನ ವಿಷಯವಿದೆ. ಎರಡು ಶೇಡ್‌ ಕಥೆ ಇರುವ ಚಿತ್ರದಲ್ಲಿ ಯಾವ ಅಶ್ಲೀಲತೆಯಾಗಲಿ, ಡಬ್ಬಲ್‌ ಮೀನಿಂಗ್‌ ಡೈಲಾಗ್‌ಗಳಾಗಲಿ ಇರಲ್ಲ. ಮೂರು ಭರ್ಜರಿ ಫೈಟ್ಸ್‌, ನಾಲ್ಕು ಹಾಡುಗಳು ಚಿತ್ರದಲ್ಲಿರಲಿವೆ ಎಂಬ ವಿವರ ಕೊಡುತ್ತಾರೆ ಭರತ್‌ ಚಕ್ರವರ್ತಿ.

ಚಿತ್ರಕ್ಕೆ ರಾಜ್‌ಗೌತಮ್‌ ನಾಯಕ. ಮಂಗಳೂರು ಮೂಲದ ರಾಜ್‌ ಗೌತಮ್‌ ನಟನೆ ತರಬೇತಿ ಕಲಿತು ಒಳ್ಳೆಯ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಬಂದ ಅವಕಾಶವಿದು. ಇದಕ್ಕೂ ಮುನ್ನ, ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ರಾಜ್‌ಗೌತಮ್‌.
ಯಶವಂತ್‌ ಶೆಟ್ಟಿ ಅವರಿಗಿಲ್ಲಿ ಒಂದು ಹಳ್ಳಿಯಲ್ಲಿರುವ ರಗಡ್‌ ಹುಡುಗ ಪಾತ್ರ ಸಿಕ್ಕಿದೆ. ಈಗಾಗಲೇ “ಜ್ವಲಂತಂ’, “ಅಥರ್ವ’ ಚಿತ್ರದಲ್ಲಿ ಸೈ ಎನಿಸಿಕೊಂಡಿರುವ ಯಶವಂತ್‌ ಶೆಟ್ಟಿಗೆ ಇಲ್ಲೂ ಹೊಸ ರೀತಿಯ ಚಾಲೆಂಜಿಂಗ್‌ ಪಾತ್ರ ಸಿಕ್ಕಿದೆ.

ನಿರ್ಮಾಪಕ ಸಂಪತ್‌ ಅವರು ಮೂಲತಃ ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಟನೆ ಅವರಿಗಿಷ್ಟದ ಕ್ಷೇತ್ರ. ಹಲವು ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಅವರಿಗೆ ಈ ಕಥೆ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾಗಿದ್ದಾರೆ. ಒಳ್ಳೆಯ ಚಿತ್ರ ಮಾಡುವ ಉತ್ಸಾಹದಲ್ಲಿ ಹೊಸ ತಂಡ ಕಟ್ಟಿಕೊಂಡು ಬಂದಿದ್ದಾರೆ. ಚಿತ್ರಕ್ಕೆ ಬಕ್ಕೇಶ್‌ ಸಂಗೀತವಿದೆ. ಎಲ್‌.ಮೋಹನ್‌ ಛಾಯಾಗ್ರಹಣವಿದೆ. ಸಂತೋಷ್‌ ಮುಂದಿನ ಮನೆ ಸಂಭಾಷಣೆ ಬರೆದಿದ್ದಾರೆ. ಆಷಾಢ ಬಳಿಕ 30 ದಿನಗಳ ಕಾಲ ಮಂಡ್ಯ, ಕೊಳ್ಳೆಗಾಲ ಸುತ್ತಮುತ್ತ ಚಿತ್ರೀಕರಣ ಶುರುವಾಗಲಿದೆ. 

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.