25ನೇ ಚಿತ್ರಕ್ಕೆ ಜೋರು ತಯಾರಿ
Team Udayavani, Jul 29, 2018, 11:09 AM IST
ನೆನಪಿರಲಿ ಪ್ರೇಮ್ ಅಭಿನಯದ “ಲೈಫ್ ಜೊತೆ ಒಂದ್ ಸೆಲ್ಫಿ’ ಆಗಸ್ಟ್ನಲ್ಲಿ ತೆರೆಗೆ ಬರುತ್ತಿದೆ. ಪ್ರೇಮ್ ಅಭಿನಯದ 24 ನೇ ಚಿತ್ರವಿದು. ಅವರು ತಮ್ಮದತ್ತ ಈಗ ಚಿತ್ತ ಹರಿಸಿದ್ದಾರೆ. 25ನೇ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಇದ್ದೇ ಇರುತ್ತೆ. ಆ ನಿರೀಕ್ಷೆ ಸ್ವತಃ ಪ್ರೇಮ್ ಅವರಿಗೂ ಇದೆ. ತಮ್ಮ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ವಿಶ್ವಾಸ ಇಟ್ಟುಕೊಂಡಿದ್ದಾರೆ ಪ್ರೇಮ್.
ತಮ್ಮ ಸಿನಿಪಯಣದಲ್ಲಿ 24 ಚಿತ್ರಗಳನ್ನು ಪೂರೈಸಿ, ಸೋಲು-ಗೆಲುವು ಎರಡನ್ನೂ ಕಂಡಿರುವ ಪ್ರೇಮ್, 25ನೇ ಚಿತ್ರಕ್ಕೆ ಹೊಸ ಕಥೆಯ ಎದುರು ನೋಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ “ನೆನಪಿರಲಿ’ ಪ್ರೇಮ್, ಆಗಸ್ಟ್ 25 ರಂದು ತಮ್ಮ 25ನೇ ಚಿತ್ರವನ್ನು ಅನೌನ್ಸ್ ಮಾಡುವ ಸಾಧ್ಯತೆ ಇದೆ. ಆದರೆ, ಅವರಿಗೆ ಹೊಸತೆನಿಸುವ ಕಥೆ ಸಿಕ್ಕರೆ ಮಾತ್ರ ಆ ಘೋಷಣೆ.
ಈಗ ಪ್ರೇಮ್ ಮಾಡಿದ್ದನ್ನೇ ಮಾಡದಿರಲು ನಿರ್ಧರಿಸಿದ್ದಾರೆ. ರೆಗ್ಯುಲರ್ ಲವ್ಸ್ಟೋರಿ ಹೊರತಾಗಿ ಅವರಿಗೆ ಇನ್ನೇನೋ ಹೊಸದನ್ನು ಮಾಡುವ ಮನಸ್ಸಾಗಿದೆ. ಹಾಗಾಗಿ ಹೊಸ ಪ್ರಯೋಗವನ್ನು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ ಆ ನಿಟ್ಟಿನಲ್ಲಿ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಯಾವುದನ್ನೂ ಅಂತಿಮಗೊಳಿಸಿಲ್ಲ.
ಕನ್ನಡದಲ್ಲಿ ಈಗ ಹೊಸ ಟ್ರೆಂಡ್ ಚಿತ್ರಗಳು ಬರುತ್ತಿರುವುದರಿಂದ ಆ ರೀತಿಯ ಚಿತ್ರಗಳಲ್ಲಿ ನಟಿಸುವ ಆಸೆ ಅವರದು. ಈಗ ಅವರ ಮುಂದೆ ಒಂದಷ್ಟು ಕಥೆಗಳಿರುವುದಂತೂ ಹೌದು. ಆದರೆ, 25 ನೇ ಚಿತ್ರಕ್ಕೆ ಬೇಕಾದಂತಹ ಕಥೆ ಅವರಿಗಿನ್ನೂ ಪಕ್ಕಾ ಆಗಿಲ್ಲ. ಅದು ಓಕೆ ಎನಿಸಿದರೆ, ಅನೌನ್ಸ್ ಮಾಡಲು ರೆಡಿ. ಪ್ರೇಮ್ ಪುತ್ರ ಏಕಾಂತ್ ಕೂಡ ಅಪ್ಪನಂತೆಯೇ ಸಿನಿ ಜರ್ನಿ ಶುರುಮಾಡಿದ್ದಾನೆ.
ಈಗಾಗಲೇ “ರಾಮ ರಾಜ್ಯ’ ಎಂಬ ಚಿತ್ರದಲ್ಲಿ ನಟಿಸಿದ್ದಾನೆ. ಮಗನ ಬಗ್ಗೆ ಖುಷಿಯಿಂದ ಹೇಳಿಕೊಳ್ಳುವ ಪ್ರೇಮ್, “ಏಕಾಂತ್ಗೆ ಈ ರಂಗ ಇಷ್ಟವಾಗಿದೆ. ಅವನೇ ಜಿಮ್ನಾಸ್ಟಿಕ್, ಡ್ಯಾನ್ಸ್, ಫೈಟ್ ಕಲಿತುಕೊಂಡಿದ್ದಾನೆ. ಚಾಮರಾಜ್ ಮಾಸ್ಟರ್ ಬಳಿ ತರಬೇತಿ ಪಡೆಯುತ್ತಿದ್ದಾನೆ. ಓದುವುದರಲ್ಲೂ ಹಿಂದೆ ಬಿದ್ದಿಲ್ಲ. ಅವನ ಸೆಲ್ಫ್ ಇಂಟ್ರೆಸ್ಟ್ನಿಂದಲೇ ಮಾಡುತ್ತಿದ್ದಾನೆ’ ಎಂದು ಹೇಳಿ ಸುಮ್ಮನಾಗುತ್ತಾರೆ ಪ್ರೇಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ