ಕಾರು ಅವಘಡ : ಹಿರಿಯ ನಟ ಜೈ ಜಗದೀಶ್ ಪಾರು
Team Udayavani, Aug 18, 2018, 10:13 AM IST
ಬೆಂಗಳೂರು: ಹಿರಿಯ ನಟ ಜೈ ಜಗದೀಶ್ ಅವರು ಪ್ರಯಾಣಿಸುತ್ತಿದ್ದ ಕಾರು ಅವಘಡಕ್ಕೀಡಾದ ಘಟನೆ ಶುಕ್ರವಾರ ನಡೆದಿದೆ.
ಜೈ ಜಗದೀಶ್ ಅವರು ಬೆಂಗಳೂರಿನಿಂದ ಚನ್ನರಾಯಪಟ್ಟಣದ ಮೂಲಕ ಮಡಿಕೇರಿಯ ಸಂಬಂಧಿಕರ ಮನೆಗೆಂದು ತೆರಳುತ್ತಿದ್ದ ವೇಳೆ ಬೈಕ್ ಸವಾರ ಅಡ್ಡ ಬಂದಿದ್ದು, ಕಾರು ಜಮೀನಿಗೆ ಇಳಿದು ಜಖಂಗೊಂಡಿದೆ.
ಅದೃಷ್ಟವಷಾತ್ ಜೈಜಗದೀಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಿಗೊಳಗಾಗಿರುವ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.