ಒಂಥರಾ… ಪ್ರಚಾರದ ಕೊರತೆ
Team Udayavani, Aug 22, 2018, 11:33 AM IST
ಕಳೆದ ವಾರ “ಒಂಥರಾ ಬಣ್ಣಗಳು’ ಎಂಬ ಸಿನಿಮಾವೊಂದು ಬಿಡುಗಡೆಯಾಗಿತ್ತು. ಕಿರಣ್, ಸೋನುಗೌಡ, ಹಿತ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಚಿತ್ರದ ಬಗ್ಗೆ ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಚಿತ್ರತಂಡ ಒಂದೇ ವಾರಕ್ಕೆ ಚಿತ್ರಮಂದಿರದಿಂದ ಚಿತ್ರವನ್ನು ಹಿಂಪಡೆಯಲು ನಿರ್ಧರಿಸಿದೆ. ಈ ಮೂಲಕ ಸಿನಿಜಾತ್ರೆಯಲ್ಲಿ ಕಳೆದುಹೋಗುವ ಅಪಾಯದಿಂದ ತಪ್ಪಿಸಿಕೊಂಡಿದೆ.
ಎಲ್ಲಾ ಓಕೆ, ತಾವಾಗಿಯೇ ಸಿನಿಮಾವನ್ನು ಹಿಂಪಡೆಯಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಪ್ರಚಾರದ ಕೊರತೆ. ಚಿತ್ರದ ನಿರ್ದೇಶಕ ಸುನೀಲ್ ಭೀಮರಾವ್ ಹೇಳುವಂತೆ, ಚಿತ್ರಕ್ಕೆ ಪ್ರಚಾರದ ಕೊರತೆ ಕಾಡಿದೆಯಂತೆ. “ನಮ್ಮ ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಹೆಚ್ಚಿನ ಮಂದಿಗೆ ಸಿನಿಮಾ ತಲುಪಿಲ್ಲ. ಅದಕ್ಕೆ ಕಾರಣ ಪ್ರಚಾರದ ಕೊರತೆ.
ಒಂದು ಸಿನಿಮಾ ಜನರಿಗೆ ತಲುಪುವಷ್ಟು ಪ್ರಚಾರವನ್ನು ನಾವು ಮಾಡಿಲ್ಲ ಎಂದು ಈಗ ಅನಿಸುತ್ತಿದೆ. “ನಿಮ್ಮ ಸಿನಿಮಾ ಬಿಡುಗಡೆಯಾಗಿರೋದು ನಮಗೆ ಗೊತ್ತೇ ಆಗಲಿಲ್ಲ’ ಎಂದು ಅನೇಕರು ಹೇಳುತ್ತಿದ್ದಾರೆ. ಅದೇ ಕಾರಣದಿಂದ ಪ್ರೇಕ್ಷಕರ ಕೊರತೆ ಕೂಡಾ ಕಾಡಿದೆ. ಈ ವಾರ ಬೇರೆ ಎಂಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹೀಗಿರುವಾಗ ಒಳ್ಳೆಯ ಸಿನಿಮಾವೊಂದು ಕಳೆದು ಹೋಗಬಾರದು ಎಂಬ ಕಾರಣಕ್ಕೆ ನಾವಾಗಿಯೇ ಚಿತ್ರಮಂದಿರದಿಂದ ಚಿತ್ರವನ್ನು ವಾಪಾಸ್ ಪಡೆಯಲು ನಿರ್ಧರಿಸಿದ್ದೇವೆ.
ಮುಂದೆ ಸಿನಿಮಾ ಜನರಿಗೆ ತಲುಪಲು ಎಷ್ಟು ಪ್ರಚಾರ ಬೇಕೋ ಅಷ್ಟು ಮಾಡಿ ಬರುತ್ತೇವೆ. ಹಾಗಂತ ಯಾವಾಗ ಮತ್ತೆ ಬಿಡುಗಡೆ ಮಾಡುತ್ತೇವೋ ಗೊತ್ತಿಲ್ಲ. ಸದ್ಯ ಸಿನಿಮಾ ವಾಪಾಸ್ ಪಡೆಯುವ ನಿರ್ಧಾರವಷ್ಟೇ ಮಾಡಿದ್ದೇವೆ’ ಎನ್ನುವುದು ಸುನೀಲ್ ಮಾತು. ಅಂದಹಾಗೆ, ಮೂವರು ಯುವಕರು ಹಾಗೂ ಇಬ್ಬರು ಯುವತಿಯರು ಒಟ್ಟಾಗಿ ಜರ್ನಿ ಹೊರಡುವ ಕಥೆಯನ್ನು ಹೊಂದಿರುವ “ಒಂಥರಾ ಬಣ್ಣಗಳು’ ಸಿನಿಮಾದ ಇಡೀ ಕಥೆ ಜರ್ನಿಯಲ್ಲಿ ಸಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ