ಹುಲಿರಾಯ ನಂತರ ಶಾರ್ದೂಲ; ಅರವಿಂದ್ ಕೌಶಿಕ್ ಹೊಸ ಚಿತ್ರ
Team Udayavani, Aug 23, 2018, 3:12 PM IST
ಕಳೆದ ವರ್ಷ “ಹುಲಿರಾಯ’ ಚಿತ್ರವನ್ನು ಮಾಡಿದ್ದ ಅರವಿಂದ್ ಕೌಶಿಕ್, ಈಗ ಸದ್ದಿಲ್ಲದೆ ಒಂದು ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಅದೇ “ಶಾರ್ದೂಲ’. ಇದೊಂದು ಹಾರರ್ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಮುಗಿದಿದೆ. ಚೇತನ್ ಚಂದ್ರ, ಕೃತ್ತಿಕಾ ರವೀಂದ್ರ, ರವಿತೇಜ, ಐಶ್ವರ್ಯ ಪ್ರಸಾದ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ರೋಹಿತ್ ಎನ್ನುವವರು ನಿರ್ಮಿಸಿದ್ದಾರೆ.
“ಇದು ಹಾರರ್-ಥ್ರಿಲ್ಲರ್ ಚಿತ್ರವಾದರೂ ಇಲ್ಲಿ ಬಿಳಿ ಸೀರೆ ತೊಟ್ಟ ಹೆಂಗಸರು, ದೆವ್ವಗಳು ಕಾಣುವುದಿಲ್ಲವಂತೆ. ಮನುಷ್ಯ ತನಗೆ ಗೊತ್ತಿಲ್ಲದ ಜಾಗಕ್ಕೆ ಹೋದ ಸಂದರ್ಭದಲ್ಲಿ, ಅಲ್ಲಿನ ಪರಿಸರ ಮತ್ತು ಜನ ಅಗೋಚರವಾಗಿ ಕಾಣಿಸುತ್ತವೆ. ಅವೆಲ್ಲವೂ ಅತೀಂದ್ರಿಯ ಶಕ್ತಿಗಳು ಅಂತ ಅನಿಸೋಕೆ ಶುರುವಾಗುತ್ತದೆ. ಜೀವನದಲ್ಲಿ ನಡೆಯುವ ಅಂತಹ ಘಟನೆಗಳಿಗೆ ಚಿತ್ರ ಉತ್ತರ ಕೊಡುತ್ತದೆ. ಕಥೆಗೆ ಹೊಂದುವುದರಿಂದ ಆಗುಂಬೆ ಕಡೆ ಚಿತ್ರೀಕರಣ ಮಾಡಲಾಗಿದೆ. ಇದೊಂದು ಪ್ರಯಾಣದ ಕಥೆಯಾಗಿದ್ದು, ಕಾರು ಸಹ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ಸಾಕಷ್ಟು ಹುಡುಕಾಡಿ ಒಂದು ಬೆಂಜ್ ಕಾರು ತಂದಿದೆ’ ಎನ್ನುತ್ತಾರೆ ಅರವಿಂದ್ ಕೌಶಿಕ್.
ಈ ಚಿತ್ರಕ್ಕೆ ಚೇತನ್ ಚಂದ್ರ ಅವರನ್ನು ಅರವಿಂದ್ ಕೌಶಿಕ್ ಕರೆದಾಗ, ಚೇತನ್ ದೂಸರಾ ಯೋಚನೆಯನ್ನೇ ಮಾಡಲಿಲ್ಲವಂತೆ. ಅರವಿಂದ್ ಅವರ ಕಥೆ ಕೇಳದೆಯೇ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಚಿತ್ರ ರೂಪುಗೊಂಡಿರುವ ಬಗ್ಗೆ ಚೇತನ್ಗೆ ಖುಷಿ ಇದೆ. ಇನ್ನು ಕೃತ್ತಿಕಾಗೂ ಈ ಚಿತ್ರದಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ ಅರವಿಂದ್ ಕೌಶಿಕ್. ಇನ್ನು ಮನು ಅವರ ಛಾಯಾಗ್ರಹಣ, ಸತೀಶ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ