ಕರ್ಷಣಂಗೆ ಹೇಮಂತ ಸಂಗೀತ
Team Udayavani, Aug 29, 2018, 11:45 AM IST
“ಪ್ರೀತ್ಸೇ ಪ್ರೀತ್ಸೇ’ ಖ್ಯಾತಿಯ ಗಾಯಕ ಹೇಮಂತ್ ಕುಮಾರ್ ಇದೀಗ ಸಂಗೀತ ನಿರ್ದೇಶಕರಾಗಿದ್ದಾರೆ. ಧನಂಜಯ್ ಆತ್ರೆ ನಿರ್ಮಾಣದ ಮತ್ತು ಅಭಿನಯದ “ಕರ್ಷಣಂ’ ಎಂಬ ಚಿತ್ರಕ್ಕೆ ಹೇಮಂತ್ ನಾಲ್ಕು ಹಾಡುಗಳನ್ನು ಸಂಯೋಜಿಸುವ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ.
ತಾವು ಸಂಗೀತ ನಿರ್ದೇಶಕರಾಗಿದ್ದು ಬಹಳ ಆಕಸ್ಮಿಕ ಎಂದು ಹೇಳಿಕೊಳ್ಳುತ್ತಾರೆ ಹೇಮಂತ್. “ನಾನು ಗಾಯಕನಾಗಿ ಬಹಳ ಸಂತೋಷವಾಗಿದ್ದೆ. ಹಾಡುತ್ತಾ ಬಿಝಿಯಾಗಿದ್ದೆ. ಅದೊಂದು ದಿನ ಅಶ್ವಿನಿ ರಾಮಪ್ರಸಾದ್ ಫೋನ್ ಮಾಡಿ ಕರೆದರು. ಹೋಗಿ ಭೇಟಿ ಮಾಡಿದೆ.
ಆ ಸಂದರ್ಭದಲ್ಲಿ ಅವರು “ಕರ್ಷಣಂ’ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಕುರಿತು ಹೇಳಿದರು. ಸರಿ ಅಂತ ಹೇಳಿ, ಐದು ಟ್ಯೂನ್ ಹಾಕಿದೆ. ಅವರಿಗೆ ಇಷ್ಟವಾಯಿತು. ನಿಜಕ್ಕೂ ಹಾಡುಗಳು ಚೆನ್ನಾಗಿ ಬಂದಿವೆ. ಹಾಡುಗಳು ಹಿಟ್ ಆಗುತ್ತದೆ ಎಂತ ಸಿಕ್ಸ್ತ್ ಸೆನ್ಸ್ ಹೇಳುತ್ತಿದೆ’ ಎನ್ನುತ್ತಾರೆ ಹೇಮಂತ್ ಕುಮಾರ್.
ಕಾಕತಾಳೀಯವೆಂದರೆ, “ಪ್ರೀತ್ಸೇ’ ಚಿತ್ರದ “ಪ್ರೀತ್ಸೇ ಪ್ರೀತ್ಸೇ’ ಹಾಡಿಸುವ ಮೂಲಕ ಹೇಮಂತ್ ಅವರಿಗೆ ಗಾಯಕರಾಗಿ ಭಡ್ತಿ ಕೊಟ್ಟಿದ್ದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಈಗ ಹೇಮಂತ್ ಮೊದಲ ಬಾರಿಗೆ ಸಂಗೀತ ಸಂಯೋಜಿಸಿರುವ “ಕರ್ಷಣಂ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದೂ ಅವರೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್