ಹಳ್ಳಿ ಬಿಟ್ಟು ಪಟ್ಟಣ ಸೇರಿದವರ ನೆನಪುಗಳೇ “ಗ್ರಾಮಾಯಣ’: Watch
Team Udayavani, Sep 7, 2018, 4:17 PM IST
ವಿನಯ್ ರಾಜಕುಮಾರ್ ಅಭಿನಯದ “ಗ್ರಾಮಾಯಣ’ ಟೀಸರ್ ಬಿಡುಗಡೆಯಾಗಿದ್ದು, ಸುಮಾರು ಐದು ನಿಮಿಷ ಇರುವ ಈ ಟೀಸರ್ನ ಪ್ರಾರಂಭದಲ್ಲಿ ಹಳ್ಳಿ ಬಿಟ್ಟು ಪಟ್ಟಣ ಸೇರಿದವರ ಅಭಿಪ್ರಾಯಗಳಿವೆ. ಅಲ್ಲಿಂದ ಡಾ. ರಾಜಕುಮಾರ್ ಅವರ ಧ್ವನಿಯಲ್ಲಿ ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಪರಿಚಯಿಸಿರುವ ಕ್ಲಿಪಿಂಗ್ಸ್ ಇದೆ. ಇದಾದ ಬಳಿಕ “ಗ್ರಾಮಾಯಣ’ ಚಿತ್ರದ ಅಸಲಿ ಟೀಸರ್ ತೆರೆದು ಕೊಳ್ಳುತ್ತೆ.
ವರನಟ ರಾಜಕುಮಾರ್ ಅವರ ಹುಟ್ಟಿದ ಮನೆಯಿಂದ ನಾಯಕ ನಟ ವಿನಯ್ ಹೊರ ಬಂದು, ಕುರಿ ಮರಿಯನ್ನು ಎತ್ತಿಕೊಳ್ಳುವ ದೃಶ್ಯದೊಂದಿಗೆ ಟೀಸರ್ ಮುಕ್ತಾಯವಾಗುತ್ತದೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಐದು ನಿಮಿಷದ ದೊಡ್ಡ ಟೀಸರ್ ಬಿಡುಗಡೆಯಾದಂತೆ ಕಾಣಿಸುತ್ತೆ. ಈ ಟೀಸರ್ ಒಮ್ಮೆ ನೋಡಿದ್ರೆ ಮತ್ತೆ ಮತ್ತೇ ನೋಡಬೇಕು ಅನ್ನಿಸುತ್ತೆ. ಕಾರಣ ಅದರಲ್ಲಿರುವ ವಿಷಯಗಳು. ಅದರಲ್ಲೂ ಹಳ್ಳಿ ಬಿಟ್ಟು ಪಟ್ಟಣ ಸೇರಿರುವರ ನೆನಪುಗಳನ್ನು ಬಡಿದೆಬ್ಬಿಸುವಂತಿದೆ.
ಇನ್ನು ಚಿತ್ರವನ್ನು ದೇವನೂರು ಚಂದ್ರು ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಮನು ಶೆಡ್ಗಾರ್ ಸಂಕಲನ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ, ವಿಕ್ರಮ್ ಮೋರ್ ಸಾಹಸ ಸೇರಿದಂತೆ ಎನ್.ಎಲ್.ಎನ್ ಮೂರ್ತಿ ಅವರ ನಿರ್ಮಾಣ ಚಿತ್ರಕ್ಕಿದೆ. ತಾರಾಬಳಗದಲ್ಲಿ ವಿನಯ್ ರಾಜಕುಮಾರ್, ಅಮೃತಾ ಅಯ್ಯರ್ , ಸಂಪತ್ ಮೈತ್ರಿಯಾ, ಅಪರ್ಣಾ, ಸೀತಾ ಕೋಟೆ, ಶ್ರೀನಿವಾಸ್ ಪ್ರಭು, ಮಂಜುನಾಥ್ ಹೆಗಡೆ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಚಿತ್ರದ ಬ್ಯೂಟಿಫುಲ್ ಟೀಸರ್ ವೀಕ್ಷಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ