ಹಳ್ಳಿ ಬಿಟ್ಟು ಪಟ್ಟಣ ಸೇರಿದವರ ನೆನಪುಗಳೇ “ಗ್ರಾಮಾಯಣ’: Watch
Team Udayavani, Sep 7, 2018, 4:17 PM IST
ವಿನಯ್ ರಾಜಕುಮಾರ್ ಅಭಿನಯದ “ಗ್ರಾಮಾಯಣ’ ಟೀಸರ್ ಬಿಡುಗಡೆಯಾಗಿದ್ದು, ಸುಮಾರು ಐದು ನಿಮಿಷ ಇರುವ ಈ ಟೀಸರ್ನ ಪ್ರಾರಂಭದಲ್ಲಿ ಹಳ್ಳಿ ಬಿಟ್ಟು ಪಟ್ಟಣ ಸೇರಿದವರ ಅಭಿಪ್ರಾಯಗಳಿವೆ. ಅಲ್ಲಿಂದ ಡಾ. ರಾಜಕುಮಾರ್ ಅವರ ಧ್ವನಿಯಲ್ಲಿ ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಪರಿಚಯಿಸಿರುವ ಕ್ಲಿಪಿಂಗ್ಸ್ ಇದೆ. ಇದಾದ ಬಳಿಕ “ಗ್ರಾಮಾಯಣ’ ಚಿತ್ರದ ಅಸಲಿ ಟೀಸರ್ ತೆರೆದು ಕೊಳ್ಳುತ್ತೆ.
ವರನಟ ರಾಜಕುಮಾರ್ ಅವರ ಹುಟ್ಟಿದ ಮನೆಯಿಂದ ನಾಯಕ ನಟ ವಿನಯ್ ಹೊರ ಬಂದು, ಕುರಿ ಮರಿಯನ್ನು ಎತ್ತಿಕೊಳ್ಳುವ ದೃಶ್ಯದೊಂದಿಗೆ ಟೀಸರ್ ಮುಕ್ತಾಯವಾಗುತ್ತದೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಐದು ನಿಮಿಷದ ದೊಡ್ಡ ಟೀಸರ್ ಬಿಡುಗಡೆಯಾದಂತೆ ಕಾಣಿಸುತ್ತೆ. ಈ ಟೀಸರ್ ಒಮ್ಮೆ ನೋಡಿದ್ರೆ ಮತ್ತೆ ಮತ್ತೇ ನೋಡಬೇಕು ಅನ್ನಿಸುತ್ತೆ. ಕಾರಣ ಅದರಲ್ಲಿರುವ ವಿಷಯಗಳು. ಅದರಲ್ಲೂ ಹಳ್ಳಿ ಬಿಟ್ಟು ಪಟ್ಟಣ ಸೇರಿರುವರ ನೆನಪುಗಳನ್ನು ಬಡಿದೆಬ್ಬಿಸುವಂತಿದೆ.
ಇನ್ನು ಚಿತ್ರವನ್ನು ದೇವನೂರು ಚಂದ್ರು ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಮನು ಶೆಡ್ಗಾರ್ ಸಂಕಲನ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ, ವಿಕ್ರಮ್ ಮೋರ್ ಸಾಹಸ ಸೇರಿದಂತೆ ಎನ್.ಎಲ್.ಎನ್ ಮೂರ್ತಿ ಅವರ ನಿರ್ಮಾಣ ಚಿತ್ರಕ್ಕಿದೆ. ತಾರಾಬಳಗದಲ್ಲಿ ವಿನಯ್ ರಾಜಕುಮಾರ್, ಅಮೃತಾ ಅಯ್ಯರ್ , ಸಂಪತ್ ಮೈತ್ರಿಯಾ, ಅಪರ್ಣಾ, ಸೀತಾ ಕೋಟೆ, ಶ್ರೀನಿವಾಸ್ ಪ್ರಭು, ಮಂಜುನಾಥ್ ಹೆಗಡೆ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಚಿತ್ರದ ಬ್ಯೂಟಿಫುಲ್ ಟೀಸರ್ ವೀಕ್ಷಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ