ಹಳ್ಳಿ ಬಿಟ್ಟು ಪಟ್ಟಣ ಸೇರಿದವರ ನೆನಪುಗಳೇ “ಗ್ರಾಮಾಯಣ’: Watch
Team Udayavani, Sep 7, 2018, 4:17 PM IST
ವಿನಯ್ ರಾಜಕುಮಾರ್ ಅಭಿನಯದ “ಗ್ರಾಮಾಯಣ’ ಟೀಸರ್ ಬಿಡುಗಡೆಯಾಗಿದ್ದು, ಸುಮಾರು ಐದು ನಿಮಿಷ ಇರುವ ಈ ಟೀಸರ್ನ ಪ್ರಾರಂಭದಲ್ಲಿ ಹಳ್ಳಿ ಬಿಟ್ಟು ಪಟ್ಟಣ ಸೇರಿದವರ ಅಭಿಪ್ರಾಯಗಳಿವೆ. ಅಲ್ಲಿಂದ ಡಾ. ರಾಜಕುಮಾರ್ ಅವರ ಧ್ವನಿಯಲ್ಲಿ ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಪರಿಚಯಿಸಿರುವ ಕ್ಲಿಪಿಂಗ್ಸ್ ಇದೆ. ಇದಾದ ಬಳಿಕ “ಗ್ರಾಮಾಯಣ’ ಚಿತ್ರದ ಅಸಲಿ ಟೀಸರ್ ತೆರೆದು ಕೊಳ್ಳುತ್ತೆ.
ವರನಟ ರಾಜಕುಮಾರ್ ಅವರ ಹುಟ್ಟಿದ ಮನೆಯಿಂದ ನಾಯಕ ನಟ ವಿನಯ್ ಹೊರ ಬಂದು, ಕುರಿ ಮರಿಯನ್ನು ಎತ್ತಿಕೊಳ್ಳುವ ದೃಶ್ಯದೊಂದಿಗೆ ಟೀಸರ್ ಮುಕ್ತಾಯವಾಗುತ್ತದೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಐದು ನಿಮಿಷದ ದೊಡ್ಡ ಟೀಸರ್ ಬಿಡುಗಡೆಯಾದಂತೆ ಕಾಣಿಸುತ್ತೆ. ಈ ಟೀಸರ್ ಒಮ್ಮೆ ನೋಡಿದ್ರೆ ಮತ್ತೆ ಮತ್ತೇ ನೋಡಬೇಕು ಅನ್ನಿಸುತ್ತೆ. ಕಾರಣ ಅದರಲ್ಲಿರುವ ವಿಷಯಗಳು. ಅದರಲ್ಲೂ ಹಳ್ಳಿ ಬಿಟ್ಟು ಪಟ್ಟಣ ಸೇರಿರುವರ ನೆನಪುಗಳನ್ನು ಬಡಿದೆಬ್ಬಿಸುವಂತಿದೆ.
ಇನ್ನು ಚಿತ್ರವನ್ನು ದೇವನೂರು ಚಂದ್ರು ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಮನು ಶೆಡ್ಗಾರ್ ಸಂಕಲನ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ, ವಿಕ್ರಮ್ ಮೋರ್ ಸಾಹಸ ಸೇರಿದಂತೆ ಎನ್.ಎಲ್.ಎನ್ ಮೂರ್ತಿ ಅವರ ನಿರ್ಮಾಣ ಚಿತ್ರಕ್ಕಿದೆ. ತಾರಾಬಳಗದಲ್ಲಿ ವಿನಯ್ ರಾಜಕುಮಾರ್, ಅಮೃತಾ ಅಯ್ಯರ್ , ಸಂಪತ್ ಮೈತ್ರಿಯಾ, ಅಪರ್ಣಾ, ಸೀತಾ ಕೋಟೆ, ಶ್ರೀನಿವಾಸ್ ಪ್ರಭು, ಮಂಜುನಾಥ್ ಹೆಗಡೆ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಚಿತ್ರದ ಬ್ಯೂಟಿಫುಲ್ ಟೀಸರ್ ವೀಕ್ಷಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್