ಮಾತನಾಡದ ರಶ್ಮಿ!


Team Udayavani, Sep 9, 2018, 11:18 AM IST

duniya-rashmi-7.jpg

“ದುನಿಯಾ’ ರಶ್ಮಿ ಇಲ್ಲಿ ಮಾತಾಡುವುದಿಲ್ಲ…! ಹೀಗೆಂದಾಗ, ಒಂದಷ್ಟು ಪ್ರಶ್ನೆಗಳು ಓಡಾಡುವುದುಂಟು. ವಿಷಯ ಏನೆಂದರೆ, “ದುನಿಯಾ’ ರಶ್ಮಿ “ಕಾರ್ನಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಆ ಚಿತ್ರ ಈಗ ಬಿಡುಗಡೆಗೆ ರೆಡಿಯಾಗಿದೆ. ಇದೇ ಮೊದಲ ಬಾರಿಗೆ ರಶ್ಮಿ ಈ ಚಿತ್ರದಲ್ಲಿ ಮಾತನಾಡದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕೇವಲ ಸನ್ನೆ ಮಾಡುವ ಮೂಲಕವೇ ಇಡೀ ಚಿತ್ರದಲ್ಲಿ ನಟಿಸಿದ್ದಾರೆ.

ಎರಡು ದೃಶ್ಯ ಹೊರತುಪಡಿಸಿದರೆ, ಇಡೀ ಚಿತ್ರದುದ್ದಕ್ಕೂ ರಶ್ಮಿ ಅವರದು ಸನ್ನೆ ಮಾಡುವ ಪಾತ್ರ. ಅಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ರಶ್ಮಿ ಇಲ್ಲಿ ಮೊದಲ ಸಲ ಫೈಟ್‌ ಕೂಡ ಮಾಡಿದ್ದಾರೆ. ಅದು ಯಾರೊಂದಿಗೆ ಅನ್ನುವುದನ್ನು ತೆರೆಯ ಮೇಲೆಯೇ ನೋಡಬೇಕು. “ಕಾರ್ನಿ’ ಅಂದರೆ, ದೇವಿಯ ಆಯುಧದ ಹೆಸರು. ಸಂಹಾರಕ್ಕೆ ಬಳಸುವ ಆಯುಧಕ್ಕೆ “ಕಾರ್ನಿ’ ಎಂಬ ಹೆಸರಿದೆ. ಇದು ಸಂಸ್ಕೃತ ಪದ.

ಕಥೆಗೆ ಸೂಕ್ತವೆನಿಸಿ, ನಿರ್ದೇಶಕ ವಿನಿ (ವಿನೋದ್‌ಕುಮಾರ್‌) “ಕಾರ್ನಿ’ ಅಂತ ಹೆಸರಿಟ್ಟಿದ್ದಾರೆ.  ಹಾಗಾದರೆ, ಇಲ್ಲಿ ರಶ್ಮಿಯೇ “ಕಾರ್ನಿ’ ಅಂದುಕೊಂಡರೂ ಅಚ್ಚರಿ ಇಲ್ಲ. ಇಡೀ ಚಿತ್ರ ರಶ್ಮಿ ಅವರ ಸುತ್ತವೇ ಸಾಗಲಿದೆ. ಹಾಗಂತ, ನಾಯಕ ಇಲ್ಲವೆಂದಲ್ಲ ನಿರಂತ್‌ ಎಂಬ ಹೊಸ ಹುಡುಗ ಇಲ್ಲಿ ನಾಯಕ. ರಶ್ಮಿ ಹೇಳುವಂತೆ, “ಪ್ರೀತಿ ಕಿತಾಬು’ ಬಳಿಕ ಬಂದ ಯಾವ ಕಥೆಯೂ ಇಷ್ಟವಾಗಿಲ್ಲ. ಎರಡು ವರ್ಷ ಗ್ಯಾಪ್‌ನಲ್ಲಿದ್ದ ಅವರಿಗೆ “ಕಾರ್ನಿ’ ಇಷ್ಟವಾಗಿದ್ದು, ಕಥೆ ಮತ್ತು ಪಾತ್ರ.

ಅವರಿಗೆ ಮೊದಲ ಸಲ ಇಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ಮೇಕ್‌ ಓವರ್‌ ಚೇಂಜ್‌ ಆಗಿರಬೇಕು ಎಂಬ ಕಾರಣಕ್ಕೆ ಒಳ್ಳೆಯ ಕಥೆಗಾಗಿ ಎದುರು ನೋಡುತ್ತಿರುವಾಗ ಸಿಕ್ಕ ಕಥೆ “ಕಾರ್ನಿ’. ಅವರಿಗಿಲ್ಲಿ ಚಾಲೆಂಜ್‌ ಎನಿಸಿದ್ದು, ಸಂಭಾಷಣೆಯೇ ಇಲ್ಲದೆ, ಕೇವಲ ಸನ್ನೆಯಲ್ಲೇ ಅಭಿನಯಿಸಿ ತೋರಿಸಬೇಕಾಗಿದ್ದು. ಅದೊಂದು ಟಫ್ ಟಾಸ್ಕ್ ಎನ್ನುವ ರಶ್ಮಿ, ಆ ಪಾತ್ರಕ್ಕೆ ಸಾಕಷ್ಟು ವರ್ಕ್‌ಶಾಪ್‌ ಮಾಡಿ ಮಾಡಿದ್ದಾಗಿ ಹೇಳುತ್ತಾರೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ.

ಕನ್ನಡಕ್ಕೊಂದು ಹೊಸತನ ಕಾಣಬಹುದು. ನನಗೆ ಮೊದಲ ಸಲ ಫೈಟ್‌ ಮಾಡುವ ಅವಕಾಶವೂ ಸಿಕ್ಕಿದೆ ಎನ್ನುವ ರಶ್ಮಿ, ಹದಿನೈದು ರಾತ್ರಿಗಳನ್ನು ಭಯಾನಕ ಬಂಗಲೆಯೊಂದರಲ್ಲಿ ಈ ಚಿತ್ರಕ್ಕಾಗಿ ಕಳೆದಿದ್ದಾಗಿ ವಿವರಿಸುತ್ತಾರೆ. ಸಂಜೆ 6ಕ್ಕೆ ಚಿತ್ರೀಕರಣ ಶುರುವಾದರೆ, ಮುಂಜಾನೆ 7 ರವರೆಗೆ ಚಿತ್ರೀಕರಣ ನಡೆಯುತ್ತಿತ್ತು. ಒಂದು ಚೂರು ಕೂಡ ನಿದ್ದೆ ಮಾಡಲು ಅವಕಾಶ ಇರುತ್ತಿರಲಿಲ್ಲ.

ನಾನು “ಕಾರ್ನಿ’ ನೋಡಿದ್ದೇನೆ. ಹಾಲಿವುಡ್‌ ಶೈಲಿಯಲ್ಲೇ ಸೌಂಡ್‌ ಡಿಸೈನ್‌ ಮಾಡಲಾಗಿದೆ. ಮೇಕಿಂಗ್‌ ಕೂಡ ಹೊಸದಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ, “ಕಾರ್ನಿ’ ಹೊಸ ಇಮೇಜ್‌ ಕಲ್ಪಿಸಿಕೊಡುವ ಚಿತ್ರವಾಗಲಿದೆ ಎನ್ನುತ್ತಾರೆ. ಸದ್ಯಕ್ಕೆ ರಶ್ಮಿ ಕಥೆ ಕೇಳುತ್ತಿದ್ದಾರೆ. ಕಳೆದ ವಾರ ನಾಲ್ಕು ಕಥೆ ಕೇಳಿದ್ದು, ಅದರಲ್ಲಿ ಒಂದು ಓಕೆ ಮಾಡಿದ್ದಾರೆ. ಅದು ಇಷ್ಟರಲ್ಲೇ ಚಿತ್ರೀಕರಣ ಶುರುವಾಗಲಿದೆಯಂತೆ.

ಬಹುತೇಕ ಹೊಸ ತಂಡ ಆ ಚಿತ್ರ ಮಾಡುತ್ತಿದೆ. ಇನ್ನು, “ಕಾರ್ನಿ’ ಜೊತೆಗೆ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ರಶ್ಮಿ ಕನ್ನಡ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಕಳೆದಿದೆ. ಅವರಿಗೆ ದುನಿಯಾ ನಂತರ ಹಿಟ್‌ ಸಿನಿಮಾ ಸಿಕ್ಕಿಲ್ಲ. ಆವರೇಜ್‌ ಚಿತ್ರದಲ್ಲೇ ಕಾಣಿಸಿಕೊಂಡಿರುವ ರಶ್ಮಿಗೆ ಇನ್ನೊಂದು ಹಿಟ್‌ ಕೊಡುವ ಆಸೆ. ಅಂತಹ ಹಿಟ್‌ “ಕಾರ್ನಿ’ ಆಗಲಿ ಎಂಬ ಆಶಯ ರಶ್ಮಿ ಅವರದು.

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.