ಫೇಸ್ಬುಕ್ನಲ್ಲಿ ರಕ್ಷಿತ್ ಪತ್ರ
Team Udayavani, Sep 12, 2018, 11:44 AM IST
ಸೋಷಿಯಲ್ ಮೀಡಿಯಾದಿಂದ ಕೆಲವು ದಿನಗಳಿಂದ ದೂರವೇ ಉಳಿದಿದ್ದ ರಕ್ಷಿತ್ ಶೆಟ್ಟಿ, ಮಂಗಳವಾರ ಮತ್ತೆ ಫೇಸ್ಬುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಸ್ಪಷ್ಟನೆ. ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ತಮ್ಮ ಹಾಗೂ ರಶ್ಮಿಕಾ ನಡುವಿನ ಬ್ರೇಕಪ್ ಸುದ್ದಿಗಳ ಕುರಿತಾಗಿ ರಕ್ಷಿತ್ ಮೊದಲ ಬಾರಿಗೆ ಪ್ರತಿಕ್ರಯಿಸಿದ್ದಾರೆ. ರಶ್ಮಿಕಾ ಅವರನ್ನು ನೆಮ್ಮದಿಯಿಂದ ಇರುವುದಕ್ಕೆ ಬಿಡಿ ಎಂದು ಮನವಿ ಸಲ್ಲಿಸಿರುವ ಅವರು, ಸದ್ಯದಲ್ಲೇ ಸತ್ಯ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ರಕ್ಷಿತ್ ಮತ್ತು ರಶ್ಮಿಕಾ ಅವರ ನಡುವೆ ಬ್ರೇಕಪ್ ಆಗಿದೆ, ಇಬ್ಬರೂ ದೂರವಾಗಿದ್ದಾರೆ ಎಂಬಂತಹ ಸುದ್ದಿಗಳು ಸಾಕಷ್ಟು ಕೇಳಿ ಬರುತ್ತಿದೆ. ಆದರೆ, ಈ ಕುರಿತು ರಕ್ಷಿತ್ ಆಗಲೀ, ರಶ್ಮಿಕಾ ಆಗಲೀ ಎಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಈಗ ರಕ್ಷಿತ್ ಮೊದಲ ಬಾರಿಗೆ ಮೌನ ಮುರಿದು, ಇಡೀ ಪ್ರಕರಣದ ಕುರಿತು ಪ್ರತಿಕ್ರಯಿಸಿದ್ದಾರೆ. “ಎಲ್ಲರೂ ರಶ್ಮಿಕಾ ಕುರಿತು ತಮ್ಮದೇ ಅಭಿಪ್ರಾಯಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ವಿಷಯವಾಗಿ ನಾನು ಯಾರನ್ನೂ ದೂಷಿಸುವುದಕ್ಕೆ ಇಷ್ಟಪಡುವುದಿಲ್ಲ.
ನಾವು ನೋಡಿದ್ದು ಮತ್ತು ಕೇಳುವುದನ್ನು ಸಹಜವಾಗಿಯೇ ನಂಬುತ್ತೇವೆ. ಆದರೆ, ಅವೆಲ್ಲಾ ನಿಜವಾಗಿರಬೇಕು ಎಂಬ ನಿಯಮವಿಲ್ಲ. ನಾನು ರಶ್ಮಿಕಾ ಅವರನ್ನು ಕಳೆದ ಎರಡು ವರ್ಷಗಳಿಂದ ನೋಡುತ್ತಿದ್ದೇನೆ ಮತ್ತು ಎಲ್ಲರಿಗಿಂಥ ಚೆನ್ನಾಗಿ ಅವರನ್ನು ಬಲ್ಲೆ. ಆಕೆಯ ವ್ಯಕ್ತಿತ್ವದ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಬೇಡಿ. ಆಕೆಯನ್ನು ಶಾಂತಿಯಿಂದ ಇರಲು ಬಿಡಿ. ಇದೆಲ್ಲದಕ್ಕೂ ಸದ್ಯದಲ್ಲೇ ಒಂದು ಅಂತ್ಯ ಸಿಗಲಿದೆ. ಆಗ ನಿಮಗೇ ನಿಜಾಂಶ ಏನೆಂದು ತಿಳಿಯುತ್ತದೆ ‘ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ