ಮೌನ ಮುರಿದ ರಶ್ಮಿಕಾ; ನಾನು ತುಂಬಾ ಡಿಸ್ಟರ್ಬ್ ಆಗಿದ್ದೇನೆ
Team Udayavani, Sep 18, 2018, 10:33 AM IST
ಬೆಂಗಳೂರು : ನಟ ರಕ್ಷಿತ್ ಶೆಟ್ಟಿ ಅವರೊಂದಿಗಿನ ನಿಶ್ಚಿತಾರ್ಥ ಮುರಿದು ಬಿದ್ದ ವಿಚಾರಕ್ಕೆ ಸಂಬಂಧಿಸಿ ನಟಿ ರಶ್ಮಿಕಾ ಮಂದಣ್ಣ ಕೊನೆಗೂ ಮೌನ ಮುರಿದಿದ್ದು, ನಾನು ತುಂಬಾ ನೊಂದು ಕೊಂಡಿದ್ದೇನೆ ಎಂದು ಸಾಮಾಜಿಕ ತಾಣಗಳಲ್ಲಿ ಸೋಮವಾರ ರಾತ್ರಿ ಬರೆದುಕೊಂಡಿದ್ದಾರೆ.
”ನಾನು ಕಳೆದ ಕೆಲ ದಿನಗಳಿಂದ ಮೌನಕ್ಕೆ ಶರಣಾಗಿದ್ದೆ. ಆದರೆ ನನ್ನ ಕುರಿತಾಗಿನ ಕಥೆಗಳು, ಲೇಖನಗಳು ಮತ್ತು ಟ್ರೋಲ್ಗಳು ನನಗೆ ತುಂಬಾ ನೋವು ತಂದಿಟ್ಟಿವೆ. ನನ್ನನ್ನು ಹೇಗೆ ಚಿತ್ರೀಕರಿಸಲಾಗಿದೆ, ಪ್ರತಿಬಿಂಬಸಲಾಗಿದೆ. ಇದಕ್ಕೆ ನಾನು ಯಾರನ್ನೂ ದೂರಲು ಇಷ್ಟಪಡುವುದಿಲ್ಲ. ಯಾಕೆಂದರೆ ನೀವೆಲ್ಲಾ ಇದನ್ನೇ ನಂಬಿದ್ದೀರಿ.ನಾನಿಲ್ಲಿ ಯಾರನ್ನೂ ಅಥವಾ ಯಾವುದನ್ನೂ ಸ್ಪಷ್ಟಿಕರಿಸುತ್ತಿಲ್ಲ. ರಕ್ಷಿತ್ಗಾಗಲಿ, ನನಗಾಲಿ ಇಲ್ಲಾ ಚಿತ್ರರಂಗದಲ್ಲಿರುವ ಯಾರಿಗೂ ಈ ರೀತಿ ಆಗಬಾರದು. ಹೇಗೆ ಒಂದು ನಾಣ್ಯಕ್ಕೆ ಎರಡು ಮುಖಗಳಿವೆ ಹಾಗೆಯೇ ಪ್ರತೀ ಕಥೆಗೂ…ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ” ಎಂದು ಭಾವಾನಾತ್ಮಕವಾಗಿ ಬರೆದಿದ್ದಾರೆ.
ರಶ್ಮಿಕಾ ಅಭಿಪ್ರಾಯಕ್ಕೆ ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ.