ವೈದೇಹಿ ಅವರ ಕಾದಂಬರಿಗಳು ಚಿತ್ರವಾಯ್ತು


Team Udayavani, Sep 21, 2018, 9:32 AM IST

56.jpg

ಕನ್ನಡದಲ್ಲಿ ಅನೇಕ ನಾಟಕ ಮತ್ತು ಕಾದಂಬರಿಗಳು ಸಿನಿಮಾಗಳಾಗಿವೆ. ಆ ಸಾಲಿಗೆ ಈಗ “ಅಮ್ಮಚ್ಚಿಯೆಂಬ ನೆನಪು’ ಚಿತ್ರ ಹೊಸ ಸೇರ್ಪಡೆ. ಹೌದು, ಲೇಖಕಿ ಡಾ. ವೈದೇಹಿ ಅವರ ಮೂರು ಕಾದಂಬರಿಗಳನ್ನು ಸೇರಿಸಿಕೊಂಡು “ಅಮ್ಮಚ್ಚಿಯೆಂಬ ನೆನಪು’ ಚಿತ್ರ ಮಾಡಲಾಗಿದೆ. “ಹಕ್ಕು’, “ಅಮ್ಮಚ್ಚಿಯೆಂಬ ನೆನಪು’ ಹಾಗು “ಪುಟ್ಟಮ್ಮತ್ತೆ ಮತ್ತು ಮೊಮ್ಮಗ’ ಕಾದಂಬರಿಗಳು ಈ ಹಿಂದೆ ನಾಟಕಗಳಾಗಿ ಸುದ್ದಿಯಾಗಿದ್ದವು. ಈಗ ಈ ಮೂರು ಕಾದಂಬರಿಗಳು ಚಿತ್ರವಾಗಿವೆ. ವಿಶೇಷವೆಂದರೆ, ರಂಗಾಸಕ್ತರೆಲ್ಲರೂ ಸೇರಿಕೊಂಡು ನಾಟಕಗಳನ್ನು ಸಿನಿಮಾರೂಪಕ್ಕೆ ತಂದಿದ್ದಾರೆ. “ಎ’ ಚಿತ್ರದ ಮೂಲಕ ಕಂಠದಾನ ಕಲಾವಿದೆಯಾಗಿ ಗುರುತಿಸಿಕೊಂಡು ಇದುವರೆಗೆ ಸುಮಾರು ಐನೂರು ಚಿತ್ರಗಳಿಗೆ ಡಬ್ಬಿಂಗ್‌ ಮಾಡಿರುವ ಚಂಪಾ ಶೆಟ್ಟಿ  ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. 

ಅಂದಹಾಗೆ, ಇದು 80ರ ಕಾಲಘಟ್ಟದ ಹೆಣ್ಣು ಮಕ್ಕಳ ಕಥೆ ಹೊಂದಿದೆ. ಇಲ್ಲಿ ನಾಯಕಿ ಅಮ್ಮಚ್ಚಿ, ಸ್ವಾತಂತ್ರ್ಯವಿಲ್ಲದೆ ಅನುಭವಿಸುವ ನೋವು, ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾಳೆ. ಆ ಬಳಿಕ ಅವೆಲ್ಲವನ್ನೂ ಹೇಗೆ ಮೆಟ್ಟಿ ನಿಲ್ಲುತ್ತಾಳೆ ಎಂಬುದು ಕಥೆ. ಅಮ್ಮಚ್ಚಿ ಪಾತ್ರದಲ್ಲಿ ವೈಜಯಂತಿ ಅಡಿಗ ಕಾಣಿಸಿಕೊಂಡರೆ, ಅವರ ಗೆಳತಿ ಪಾತ್ರದಲ್ಲಿ ದಿಯಾ ಪಾಲಕ್ಕಲ್‌ ಕಾಣಿಸಿಕೊಂಡಿದ್ದಾರೆ. ಇನ್ನು, ವಿಶೇಷ ಪಾತ್ರವೊಂದರಲ್ಲಿ ರಾಜ್‌ ಬಿ. ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅವರೊಬ್ಬ ಅನಕ್ಷರಸ್ಥ ಕೃಷಿಕನಾಗಿ ತನ್ನದೇ ವಿಚಾರದಲ್ಲಿ ಗಟ್ಟಿಯಾಗಿ ಬದುಕುವ ಮತ್ತು ಸ್ತ್ರೀ ಸ್ವತಂತ್ರಕ್ಕೆ ಧಕ್ಕೆ ತರುವ ಪಾತ್ರದಲ್ಲಿ ನಟಿಸಿದ್ದಾರೆ. 

ಚಿತ್ರಕ್ಕೆ ಪ್ರಕಾಶ್‌ ಶೆಟ್ಟಿ, ವಂದನಾ ಇನಾಂದಾರ್‌, ಗೌರಮ್ಮ ಹಾಗೂ ಕಲಾ ಕದಂಬ ಆರ್ಟ್‌ ಸೆಂಟರ್‌ ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡರೆ, ನಿರ್ಮಾಣಕ್ಕೆ ಸಾಥ್‌ ಕೊಟ್ಟಿರುವ ಗೀತಾ ಸುರತ್ಕಲ್‌, ಶೃಂಗೇರಿ ರಾಮಣ್ಣ, ರಾಧಾಕೃಷ್ಣ ಉರಾಳ, ವಿಶ್ವನಾಥ ಉರಾಳ, ಚಂದ್ರಹಾಸ ಉಳ್ಳಾಲ ಇತರರು ಸಹ ನಟಿಸಿದ್ದಾರೆ.

ಈ ಚಿತ್ರದ ಮತ್ತೂಂದು ಹೊಸ ವಿಶೇಷವೆಂದರೆ, ಕುಂದಾಪುರ ಭಾಷೆಯ ಸಂಭಾಷಣೆ ಇದೆ. ವೈದೇಹಿ ಅವರ ಮಾತುಗಳು ಇಲ್ಲಿರಲಿವೆ. “ಮಫ್ತಿ’ ಖ್ಯಾತಿಯ ನವೀನ್‌ಕುಮಾರ್‌ ಛಾಯಾಗ್ರಹಣ ಮಾಡಿದರೆ, ಸಂಗೀತ ಕಟ್ಟಿ ಅವರ ಸಂಗೀತವಿದೆ. ಹರೀಶ್‌ ಕೊಮ್ಮೆ ಸಂಕಲನವಿದೆ. ಶಶಿಧರ ಅಡಪ ಅವರ ಕಲಾ ನಿರ್ದೇಶನವಿದೆ. ಅನುರಾಧ ಭಟ್‌, ಡಾ. ಶಮಿತಾ ಮಲಾ°ಡ್‌ ಇತರರು ಹಾಡಿದ್ದಾರೆ. ದಕ್ಷಿಣ ಕನ್ನಡದ ಪಡುಬಿದ್ರೆಯ ಕರ್ನಿರೆ ಗ್ರಾಮದ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ. “ಅಮ್ಮಚ್ಚಿಯೆಂಬ ನೆನಪು’ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.