52 ನೇ ಆಯ್ಕೆಯ ಹಿಂದಿನ ಗುಟ್ಟು


Team Udayavani, Sep 23, 2018, 12:22 PM IST

gauthami.jpg

ಆ ಹುಡುಗಿ ಆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮುನ್ನ 51 ಹುಡುಗಿಯರ ಆಡಿಷನ್‌ ಆಗಿತ್ತು. ಆ ಹುಡುಗಿಗೆ ನಾನೂ ಅವರ ಸಾಲಿಗೆ ಸೇರುತ್ತೇನೇನೋ ಎಂಬ ಸಣ್ಣ ಅನುಮಾನವೂ ಇತ್ತು. ಆದರೆ, ಆ ಚಿತ್ರದ ನಿರ್ದೇಶಕರು ಆ ಹುಡುಗಿಯನ್ನು ನೋಡಿ ಆಯ್ಕೆ ಮಾಡಿಬಿಟ್ಟರು. ಹಾಗೆ ಆ ಚಿತ್ರಕ್ಕೆ 51 ಹುಡುಗಿಯರ ನಂತರ 52 ನೇ ಹುಡುಗಿಯಾಗಿ ಆಯ್ಕೆಯಾದ ಹುಡುಗಿ ಹೆಸರು ಗೌತಮಿ ಜಾದವ್‌.

ಆಕೆ ನಟಿಸಿದ ಚಿತ್ರ “ಕಿನಾರೆ’. ಈ ಚಿತ್ರಕ್ಕೆ ಅಷ್ಟೊಂದು ಹುಡುಗಿಯರು ಯಾಕೆ ಆಯ್ಕೆ ಆಗಲಿಲ್ಲ ಅನ್ನೋದು ಆ ಹುಡುಗಿಗೆ ಗೊತ್ತಿಲ್ಲ. ಆದರೆ, ನಾನೇಕೆ ಆಯ್ಕೆಯಾದೆ ಅನ್ನೋದನ್ನು ಸ್ವತಃ ಗೌತಮಿ ಜಾದವ್‌ ಹೇಳಿದ್ದು ಹೀಗೆ. “ನಿಜ ಹೇಳಬೇಕೆಂದರೆ, “ಕಿನಾರೆ’ ಚಿತ್ರಕ್ಕೆ ನಾನು ನಾಯಕಿಯಾಗುವ ಮುನ್ನ 51 ಹುಡುಗಿಯರ ಆಡಿಷನ್‌ ಆಗಿತ್ತು ಅಂದರೆ ನಂಬಲಾಗಲಿಲ್ಲ. ನಾನು ಲಕ್ಕಿ ಎಂದೇ ಹೇಳಬೇಕು.

ಯಾಕೆ ಲಕ್ಕಿ ಅಂದರೆ, ಅಂಥದ್ದೊಂದು ಪಾತ್ರ ಸಾಮಾನ್ಯವಾಗಿ ನಟಿಯರಿಗೆ ಸಿಗಲ್ಲ. ಸಿಕ್ಕರೂ, ಸಾಕಷ್ಟು ಸಿನಿಮಾ ನಂತರ ಸಿಗುವಂತಹ ಪಾತ್ರವದು. ಅದೊಂದು ಅಬ್‌ನಾರ್ಮಲ್‌ ಹುಡುಗಿಯ ಪಾತ್ರ. ಯಾವುದೇ ನಟಿಗೆ ಇಂಥದ್ದೊಂದು ಪಾತ್ರ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತೆ. ಅದು ಕನಸು ಕೂಡ. ನನ್ನ ಮೊದಲ ಚಿತ್ರದಲ್ಲೇ ಆ ರೀತಿಯ ಪಾತ್ರ ಸಿಕ್ಕಿದ್ದು ಖುಷಿ ಕೊಟ್ಟಿದೆ.

ಆಡಿಷನ್‌ಗೆ ಹೋದಾಗ, ನಿರ್ದೇಶಕರು ಕಥೆಯ ಒನ್‌ಲೈನ್‌ ಹೇಳಿದರು ಖುಷಿಯಾಯ್ತು. ಆದರೆ, ನನ್ನ ಪಾತ್ರ ಬಗ್ಗೆ ಹೇಳಲೇ ಇಲ್ಲ. ಒಂದು ಪುಟದ ಡೈಲಾಗ್‌ ಶೀಟ್‌ ಕೊಟ್ಟರು. ಈ ಡೈಲಾಗ್‌ ಅನ್ನು ಮಗು ಹೇಳಿದರೆ, ಹೇಗಿರುತ್ತೆ ಎಂಬುದನ್ನು ನಟನೆ ಮಾಡಿ ತೋರಿಸಬೇಕು ಅಂತ ಹೇಳಿದ ನಿರ್ದೇಶಕರಿಗೆ, ಸ್ವಲ್ಪ ಟೈಮ್‌ ತೆಗೆದುಕೊಂಡು. ಡೈಲಾಗ್‌ ಓದಿಕೊಂಡು ಒಂದೇ ಶಾಟ್‌ನಲ್ಲಿ ಮಾಡಿ ತೋರಿಸಿದೆ.

ಆ ಬಳಿಕ ಸ್ಕ್ರೀನ್‌ ಟೆಸ್ಟ್‌ನಲ್ಲಿ ನೋಡಿದಾಗ ನನ್ನನ್ನೇ ನಂಬಲಾಗಲಿಲ್ಲ. ಅಷ್ಟೊಂದು ಚೆನ್ನಾಗಿ ನನ್ನ ನಟನೆ ಮೂಡಿ ಬಂದಿತ್ತು. ಅಲ್ಲಿಂದ ಮನೆಗೆ ಬಂದೆ. ಒಂದು ವಾರದ ಬಳಿಕ “ಕಿನಾರೆ’ ಚಿತ್ರಕ್ಕೆ ನೀನು ನಾಯಕಿಯಾಗಿ ಆಯ್ಕೆಯಾಗಿದ್ದೀಯ ಎಂಬ ಮಾತು ಕೇಳಿಬಂತು. ಅಲ್ಲಿಂದ ಆ ಪಾತ್ರಕ್ಕೆ ನಾನು ಎಂಟು ತಿಂಗಳ ವರ್ಕ್‌ಶಾಪ್‌ ನಡೆಸಿ, ಕ್ಯಾಮೆರಾ ಮುಂದೆ ನಿಂತೆ. ಈಗ ಸಿನಿಮಾ ನೋಡಿದಾಗ ಖುಷಿಯಾಗುತ್ತಿದೆ.

ಇದೆಲ್ಲದ್ದಕ್ಕೂ ನಿರ್ದೇಶಕ ದೇವರಾಜ್‌ ಪೂಜಾರಿ ಅವರು ಕೊಟ್ಟ ಅವಕಾಶದಿಂದ ಸಾಧ್ಯವಾಯ್ತು’ ಎಂದು ಹೇಳುತ್ತಾರೆ ಗೌತಮಿ ಜಾದವ್‌. ಅಂದಹಾಗೆ, ಗೌತಮಿ ನಟನೆ ಕಲಿತಿದ್ದಾರಾ? ಈ ಪ್ರಶ್ನೆಗೆ ಯಾವುದೇ ನಟನೆ ತರಬೇತಿಗೆ ಹೋಗಿಲ್ಲ ಎಂಬ ಉತ್ತರ ಅವರಿಂದ ಬರುತ್ತೆ. ನಾನು ಕಿರುತೆರೆಯಲ್ಲಿ 2012 ರಲ್ಲಿ ಪ್ರಸಾರವಾಗುತ್ತಿದ್ದ “ನಾಗಪಂಚಮಿ’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಅಲ್ಲೇ ಎಲ್ಲವನ್ನೂ ಕಲಿತೆ.

ಆದರೆ, ಸಿನಿಮಾಗೆ ಬಂದಾಗ, ಬೇರೆ ಅನುಭವವನ್ನೂ ಕಲಿಸಿತು. ಸದ್ಯಕ್ಕೆ “ಕಿನಾರೆ’ ಸೆಪ್ಟೆಂಬರ್‌ 28 ರಂದು ತೆರೆಗೆ ಬರುತ್ತಿದೆ. ನನ್ನ ಅಭಿನಯದ “ಲೂಟಿ’ ಚಿತ್ರ ಕೂಡ ಬಿಡುಗಡೆಯಾಗಬೇಕಿದೆ. ಅತ್ತ ತಮಿಳಿನಲ್ಲಿ “ಸಂತೋಷ ತಿಲಕಲಂ’ ಎಂಬ ಚಿತ್ರದಲ್ಲೂ ನಟಿಸಿದ್ದೇನೆ. ಬೆಂಗಳೂರಲ್ಲೇ ಓದಿ ಬೆಳೆದ ನಾನು, ಬಿಕಾಂ ಮುಗಿಸಿ, ಈಗ ಫ್ಯಾಷನ್‌ ಡಿಸೈನ್‌ ಕೋರ್ಸ್‌ ಮಾಡುತ್ತಿದ್ದೇನೆ.

ಒಂದಷ್ಟು ಅವಕಾಶಗಳು ಬರುತ್ತಿವೆ. ನನಗೆ “ಕಿನಾರೆ’ ಸಿನಿಮಾ ಹೊರರುವವರೆಗೆ ಯಾವ ಚಿತ್ರಕ್ಕೂ ಸಹಿ ಮಾಡಬಾರದು ಅಂದುಕೊಂಡಿದ್ದೇನೆ. ನನಗೆ ಇಂಥದ್ದೇ ಪಾತ್ರ ಬೇಕೆಂದಿಲ್ಲ. ಸಿನಿಮಾ ಅಂತ ಬಂದಾಗ ನನ್ನ ತಲೆಯಲ್ಲಿ ನಟನೆ ಮಾಡೋದಷ್ಟೇ ಇರುತ್ತೆ. ಒಟ್ಟಾರೆ, ತೂಕ ಇರುವಂತಹ ಪಾತ್ರ ಬೇಕು. ಚಾಲೆಂಜ್‌ ಆಗಿರಬೇಕು ಎಂಬುದು ಗೌತಮಿ ಮಾತು.

ಟಾಪ್ ನ್ಯೂಸ್

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.