ಚಿರು ಚಿತ್ರಕ್ಕೆ ಉದಯ್‌ಮೆಹ್ತಾ ನಿರ್ಮಾಪಕ


Team Udayavani, Oct 15, 2018, 11:36 AM IST

chiri.jpg

ಅಜೇಯ್‌ರಾವ್‌ ಅಭಿನಯದ “ಕೃಷ್ಣರುಕ್ಕು’ ಚಿತ್ರವನ್ನು ನಿರ್ಮಿಸಿದ್ದ ಉದಯ್‌ಮೆಹ್ತಾ, ಧ್ರುವಸರ್ಜಾ ಅವರಿಗೊಂದು ಚಿತ್ರ ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ಇನ್ನೇನು ಆ ಚಿತ್ರ ಇಷ್ಟರಲ್ಲೇ ಶುರುವಾಗುವ ಸಾಧ್ಯತೆಯೂ ಇದೆ. ಅದಕ್ಕೂ ಮುನ್ನ ಉದಯ್‌ಮೆಹ್ತಾ ಇನ್ನೊಂದು ಚಿತ್ರ ನಿರ್ಮಿಸುವುದಾಗಿ ಹೇಳಿಕೊಂಡಿದ್ದಾರೆ. ಅದು ಚಿರಂಜೀವಿ ಸರ್ಜಾ ಅವರಿಗೆ ಎನ್ನುವುದು ವಿಶೇಷ. ಹೌದು, ಧ್ರುವಸರ್ಜಾ ಅವರಿಗೆ ಉದಯ್‌ ಮೆಹ್ತಾ ಅವರು ಸಿನಿಮಾ ನಿರ್ಮಾಣ ಮಾಡುವುದು ಹಳೆಯ ಸುದ್ದಿ.

ಈಗ ಚಿರಂಜೀವಿ ಸರ್ಜಾ ಅವರಿಗೂ ಒಂದು ಸಿನಿಮಾ ನಿರ್ಮಾಣ ಮಾಡುತ್ತಿರುವುದು ಹೊಸ ಸುದ್ದಿ. ಈ ಕುರಿತು ಸ್ವತಃ ಮೆಹ್ತಾ ಅವರೇ ಸ್ಪಷ್ಟಪಡಿಸಿದ್ದಾರೆ. “ಕೃಷ್ಣರುಕ್ಕು’ ಚಿತ್ರದ ನಂತರ ಧ್ರುವ ಸರ್ಜಾ ಅವರಿಗೆ ಸಿನಿಮಾ ಮಾಡಬೇಕು ಅಂತ ಇಷ್ಟು ವರ್ಷ ಕಾದಿದ್ದು, ಅದಕ್ಕೊಂದು ಒಳ್ಳೆಯ ತಂಡವೂ ರೆಡಿಯಾಗಿದೆ. ಇಷ್ಟರಲ್ಲೇ ಆ ತಂಡ ಮತ್ತು ಸಿನಿಮಾ ಕುರಿತಂತೆ ವಿವರವಾಗಿ ಹೇಳುತ್ತೇನೆ.

ಇದರ ಮಧ್ಯೆ ಚಿರಂಜೀವಿ ಸರ್ಜಾ ಅವರಿಗೂ ಒಂದು ಸಿನಿಮಾ ನಿರ್ಮಿಸುತ್ತಿದ್ದೇನೆ. ಈಗಾಗಲೇ ಆ ಕುರಿತು ಮಾತುಕತೆ ಕೂಡ ನಡೆದಿದೆ. ಇಬ್ಬರು ಸಹೋದರರಿಗೆ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಪಕ್ಕಾ ಆಗಿದೆ. ಇಬ್ಬರಿಗೂ ಸ್ವಮೇಕ್‌ ಕಥೆಗಳೇ ಚಿತ್ರವಾಗುತ್ತಿವೆ. ಅದರಲ್ಲೂ ಇಲ್ಲಿನ ಯಶಸ್ವಿ ನಿರ್ದೇಶಕರುಗಳೇ ಅವರಿಬ್ಬರ ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಯಾವಾಗ, ಏನು, ಎತ್ತ ಎಂಬುದಕ್ಕಿನ್ನೂ ಸಮಯವಿದೆ. 

ಈಗ ಧ್ರುವಸರ್ಜಾ ಅವರು “ಪೊಗರು’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಅತ್ತ ಚಿರಂಜೀವಿ ಸರ್ಜಾ ಅವರು ಸಹ ಬೇರೆ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇಬ್ಬರ ಡೇಟ್‌ ನೋಡಿಕೊಂಡು ಸಿನಿಮಾ ಅನೌನ್ಸ್‌ ಮಾಡುತ್ತೇನೆ. ಎರಡೂ ಚಿತ್ರಗಳು ಸಹ ಏಕಕಾಲದಲ್ಲೇ ಚಿತ್ರೀಕರಣ ನಡೆಯಲಿವೆ ಎಂದು ಹೇಳುವ ಉದಯ್‌ ಮೆಹ್ತಾ, ಇಷ್ಟರಲ್ಲೇ ಯಾರ ಸಿನಿಮಾಗೆ ಯಾರು ನಿರ್ದೇಶಕರು, ಯಾರೆಲ್ಲಾ ತಂತ್ರಜ್ಞರು ಇರುತ್ತಾರೆ,

ಚಿತ್ರದ ಟೈಟಲ್, ಕಥೆ ಎಲ್ಲವನ್ನೂ ವಿವರಿಸುವುದಾಗಿ ಹೇಳುತ್ತಾರೆ ಉದಯ್‌ ಮೆಹ್ತಾ. ಉದಯ್‌ ಮೆಹ್ತಾ ಅವರು ಶರಣ್‌ ಅವರಿಗೆ “ರಾಜರಾಜೇಂದ್ರ’ ಚಿತ್ರ ನಿರ್ಮಿಸಿದ್ದರು. ಅದಕ್ಕೂ ಮುನ್ನ ನೀನಾಸಂ ಸತೀಶ್‌ ನಟಿಸಿದ “ಲವ್‌ ಇನ್‌ ಮಂಡ್ಯ’ ಚಿತ್ರವನ್ನೂ ನಿರ್ಮಿಸಿದ್ದರು. ಈಗ ಧ್ರುವಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರಿಬ್ಬರಿಗೂ ತಲಾ ಒಂದೊಂದು ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. 

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.