ಪುನೀತ್ ಈಗ ಯುವರತ್ನ
Team Udayavani, Nov 3, 2018, 11:12 AM IST
“ರಾಜಕುಮಾರ’ ಚಿತ್ರದ ಬಳಿಕ ಪುನೀತ್ ರಾಜಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದರಾಮ್ ಜೋಡಿ ಮತ್ತೂಂದು ಚಿತ್ರ ಮಾಡಲಿದ್ದಾರೆ ಎಂದು ಐದಾರು ತಿಂಗಳ ಹಿಂದೆಯೇ ಘೋಷಣೆಯಾಗಿತ್ತು. ಅದಾಗಲೇ, ಒಂದು ಹಿಟ್ ಚಿತ್ರ ಕೊಟ್ಟ ಈ ಜೋಡಿಯ ಎರಡನೇ ಚಿತ್ರ ಏನಿರಬಹುದು, ಅದರ ಶೀರ್ಷಿಕೆ ಏನು ಎಂಬ ಪ್ರಶ್ನೆಗಳು ಕಳೆದ ಕೆಲ ತಿಂಗಳಿನಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಅದೆಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ.
ಅಂದಹಾಗೆ, ಪುನೀತ್-ಸಂತೋಷ್ ಆನಂದರಾಮ್ ಜೋಡಿಯ ಹೊಸ ಚಿತ್ರಕ್ಕೆ “ಯುವರತ್ನ’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ “ಪರಶುರಾಮ’, “ಜ್ವಾಲಾಮುಖೀ’ ಸೇರಿದಂತೆ ಇನ್ನು ಎರಡು-ಮೂರು ಹೆಸರುಗಳು ಇಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ, ಅದೆಲ್ಲವನ್ನು ಬದಿಗಿಟ್ಟು ಚಿತ್ರತಂಡ “ಯುವರತ್ನ’ ಎಂಬ ಶೀರ್ಷಿಕೆಯನ್ನೆ ಅಂತಿಮಗೊಳಿಸಿದೆ. “ರಾಜ ಕುಮಾರ’ ಚಿತ್ರವನ್ನು ನಿರ್ಮಿಸಿದ್ದ “ಹೊಂಬಾಳೆ ಫಿಲಂಸ್’ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ಚಿತ್ರದ ಉಳಿದ ಕಲಾವಿದರು, ತಂತ್ರಜ್ಞರ ಬಗ್ಗೆ ಇನ್ನಷ್ಟೇ ಮಾಹಿತಿಗಳು ಹೊರಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು