ಯಾರಿಗೆ ಯಾರುಂಟು ನಿರೀಕ್ಷೆಯಲ್ಲಿ ಪ್ರಶಾಂತ್‌


Team Udayavani, Dec 1, 2018, 11:30 AM IST

yarige-yaruntu-28.jpg

ಒಂದು ಗ್ಯಾಪ್‌ ನಂತರ ನಿರ್ದೇಶಕ ಕಿರಣ್‌ ಗೋವಿ ಹೊಸದೊಂದು ಕಥೆ ಹಿಡಿದು, ಹೊಸತನ ಕಟ್ಟಿಕೊಂಡು ಹೊಸ ಸ್ಪರ್ಶ ನೀಡಲು ಅಣಿಯಾಗಿದ್ದಾರೆ. ಅವರಷ್ಟೇ ಅಲ್ಲ, ತುಂಬಾ ಗ್ಯಾಪ್‌ನಲ್ಲಿದ್ದ “ಒರಟ’ ಖ್ಯಾತಿಯ ನಟ ಪ್ರಶಾಂತ್‌ ಕೂಡ ಕಿರಣ್‌ ಗೋವಿ ಜೊತೆಗೂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ “ಯಾರಿಗೆ ಯಾರುಂಟು’ ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕಿರಣ್‌ಗೋವಿ ಅಂದಾಕ್ಷಣ, “ಪಯಣ’, “ಸಂಚಾರಿ’ ಮತ್ತು “ಪಾರು ವೈಫ್ ಆಫ್ ದೇವದಾಸ್‌’ ಚಿತ್ರಗಳು ನೆನಪಾಗುತ್ತವೆ.

ಆ ಚಿತ್ರಗಳ ಹಾಡುಗಳು ಇಂದಿಗೂ ಗುನುಗುವಂತಿವೆ. ಅಂತಹ ಹಾಡುಗಳನ್ನು ಕಟ್ಟಿಕೊಟ್ಟ ಕಿರಣ್‌ಗೋವಿ, ಆ ಮೂಲಕ ರೊಮ್ಯಾಂಟಿಕ್‌ ಲವ್‌ಸ್ಟೋರಿ ಹೇಳಿದ್ದರು. ಈಗ “ಯಾರಿಗೆ ಯಾರುಂಟು’ ಚಿತ್ರದ ಮೂಲಕ ರೊಮ್ಯಾಂಟಿಕ್‌ ಹಾಸ್ಯಕಥೆ  ಹೇಳಹೊರಟಿದ್ದಾರೆ. ಅಂದಹಾಗೆ, ಅವರ ಕಥೆ ಇಷ್ಟು, “ಬ್ರಹ್ಮಚಾರಿಯೊಬ್ಬನ ಬದುಕಲ್ಲಿ ಮೂವರು ಚೆಂದದ ಹುಡುಗಿಯರು ಪ್ರವೇಶಿಸುತ್ತಾರೆ. ಆಮೇಲೆ ಏನೆಲ್ಲಾ ಎಡವಟ್ಟುಗಳಾಗುತ್ತವೆ ಎಂಬುದು ಕಥೆಯ ಸಾರಾಂಶ. ಅವರ ಕಥೆಯನ್ನು ಇನ್ನೂ ಒಂದಷ್ಟು ವಿಸ್ತರಿಸುವುದಾದರೆ, ಒಬ್ಬ ಹುಡುಗಿ ಅವಳಾಗಿಯೇ ನಾಯಕನ ಬಳಿ ಬಂದು,

ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತ ಹೇಳುತ್ತಾಳ್ಳೋ, ಆ ಹುಡುಗಿಯನ್ನೇ ಮದುವೆ ಆಗುತ್ತೇನೆ. ಇಲ್ಲವಾದರೆ ಇಲ್ಲ ಎಂಬ ಮಾತು ನಾಯಕನದ್ದು. ಹಾಗಾದರೆ, ಮೂವರು ಹುಡುಗಿಯರ ಪೈಕಿ ಯಾರು ಅವನನ್ನು ಪ್ರೀತಿಸುತ್ತಾರೆ. ಆ ಮೂವರು ಅವನನ್ನು ಪ್ರೀತಿಸುತ್ತಾರಾ? ಇದು ಚಿತ್ರದ ಸಸ್ಪೆನ್ಸ್‌ ಎಂಬುದು ನಿರ್ದೇಶಕರ ಮಾತು. ಸಾಮಾನ್ಯವಾಗಿ ಹಲವು ಚಿತ್ರಗಳಲ್ಲಿ ಒಂದು ಕಥೆ ಮತ್ತು ಪಾತ್ರಗಳಿಗೆ ಹಿನ್ನೆಲೆ ಧ್ವನಿಯೊಂದು ಕೇಳಿಬರುವ ಮೂಲಕ ಚಿತ್ರವನ್ನು ನೋಡಿಸಿಕೊಂಡು ಹೋಗಲು ಕಾರಣವಾಗುತ್ತೆ. “ಯಾರಿಗೆ ಯಾರುಂಟು’ ಚಿತ್ರದಲ್ಲೂ ಅಂಥದ್ದೊಂದು ವಿಶೇಷ ಧ್ವನಿ ಇದೆ.

ಅಷ್ಟೇ ಅಲ್ಲ, ನಿರ್ದೇಶಕರು ವಿಶೇಷವಾಗಿ ಕಾರ್ಟೂನ್‌ ಒಂದನ್ನು ಸಿದ್ಧಗೊಳಿಸಿದ್ದಾರೆ. ಆ ಕಾರ್ಟೂನ್‌ಗೆ ರಂಗಣ್ಣ ಎಂದು ಹೆಸರಿಟ್ಟಿದ್ದು, ಚಿತ್ರದ ಆರಂಭದಿಂದ ಅಂತ್ಯದವರೆಗೂ ಚಿತ್ರದಲ್ಲಿ ನಡೆಯುವ ಹಲವು ಸನ್ನಿವೇಶಗಳಿಗೆ ಆ ಕಾರ್ಟೂನ್‌ ಪ್ರಮುಖ ಪಾತ್ರವಹಿಸಲಿದೆಯಂತೆ. ಹಾಗಾದರೆ, ಕಾರ್ಟೂನ್‌ ರಂಗಣ್ಣನ ಹಾವಳಿ ಹೇಗಿರುತ್ತೆ ಎಂಬ ಕುತೂಹಲಕ್ಕೆ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ “ಯಾರಿಗೆ ಯಾರುಂಟು’ ಚಿತ್ರ ನೋಡಬೇಕು ಎಂಬುದು ಕಿರಣ್‌ಗೋವಿ ಹೇಳಿಕೆ.

ಸದ್ಯಕ್ಕೆ ಚಿತ್ರದ ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು, ಚಿತ್ರತಂಡ ಖುಷಿಯಾಗಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಬಿ.ಜೆ.ಭರತ್‌ ಸಂಗೀತ ನೀಡಿದ್ದಾರೆ. ಸುಮಾರು 70 ಕ್ಕೂ ಹೆಚ್ಚು ದಿನಗಳ ಕಾಲ ತುಮಕೂರು, ದೇವರಾಯನದುರ್ಗ, ಕಳಸ, ರಾಜಸ್ಥಾನ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಕೃತಿಕಾ, ಲೇಖಾಚಂದ್ರ ಮತ್ತು ಅದಿತಿ ರಾವ್‌ ನಾಯಕಿಯರಾಗಿದ್ದಾರೆ. ಹೆಚ್‌ ಸಿ ರಂಗನಾಥ್‌ ಚಿತ್ರಕ್ಕೆ ನಿರ್ಮಾಪಕರು.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.