ಮತ್ತೆ ನಿರ್ಮಾಣಕ್ಕೆ ಭಾವನಾ; ಜಟ್ಟ ಗಿರಿರಾಜ್ ನಿರ್ದೇಶನ
Team Udayavani, Dec 10, 2018, 4:39 PM IST
ನಟಿ ಕಮ್ ನಿರ್ಮಾಪಕಿ ಭಾವನಾ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ “ನಿರುತ್ತರ’ ಎಂಬ ಚಿತ್ರ ನಿರ್ಮಾಣ ಮಾಡಿ ಸುದ್ದಿಯಾಗಿದ್ದ ಭಾವನಾ, ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಒಂದು ಸಿನಿಮಾ ನಿರ್ಮಾಣ ಮಾಡುವ ಮೂಲಕ ಪುನಃ ಸುದ್ದಿಯಾಗುತ್ತಿದ್ದಾರೆ. ಹೌದು, ಅವರೀಗ ಹೊಸ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ “ಸುರಗಿ’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರವನ್ನು ಬಿ.ಎಂ.ಗಿರಿರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಚಿತ್ರಕ್ಕೆ ಮನು ಹೆಗಡೆ ಹಾಗೂ ಧನ್ಯಾ ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
“ಸುರಗಿ’ ಎಂಬುದು ಮಲೆನಾಡಿನ ಭಾಗದಲ್ಲಿ ಬೆಳೆಯುವ ಹೂವೊಂದರ ಹೆಸರು. ಚಿತ್ರಕ್ಕೆ ಅಪ್ಪಟ ಕನ್ನಡ ಹೆಸರು ಇಡಬೇಕು ಎಂಬ ಕಾರಣಕ್ಕೆ ಈ ನಾಮಕರಣ ಮಾಡಿದ್ದಾರೆ ನಿರ್ದೇಶಕರು. ಅಂದಹಾಗೆ, ಇದೊಂದು ಗಂಡು, ಹೆಣ್ಣಿನ ಒತ್ತಡಗಳ ನಡುವೆ ಇರುವ ಕಥೆಯನ್ನು ಹೇಳಲಿದೆಯಂತೆ. ಒಂದಷ್ಟು ಮಾನಸಿಕ ಸಂಘರ್ಷಕ್ಕೆ ಸಿಲುಕಿದ ಅವರುಗಳು ಅದರಿಂದ ಹೇಗೆ ಹೊರಬರುತ್ತಾರೆ ಎಂಬ ವಿಷಯವನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗುತ್ತಿದೆ. ಗಿರಿರಾಜ್ ಅಂದಾಕ್ಷಣ, ಸೂಕ್ಷ್ಮತೆಯ ಕಥೆ ಹಿಡಿದು, ತೆರೆಯ ಮೇಲೆ ಗಂಭೀರವಾಗಿ ಹೇಳುವ ಮೂಲಕ ಅಳಿಸುತ್ತಾ ಹೋಗುತ್ತಾರೆ ಎಂಬುದು ಗೊತ್ತು. ಆದರೆ, ಈ “ಸುರಗಿ’ ಚಿತ್ರದಲ್ಲಿ ಹಾಸ್ಯವಿದೆ. ಅದರೊಂದಿಗೆ ಥ್ರಿಲ್ಲಿಂಗ್ ಅಂಶಗಳು ಇರಲಿವೆ. ಇವೆಲ್ಲದರ ಜೊತೆಯಲ್ಲಿ ಅಪ್ಪಟ ಪ್ರೀತಿಯ ಸೆಳೆತವೂ ಇಲ್ಲಿದೆಯಂತೆ.
ಈ ಹಿಂದೆ “ದೇವರ ನಾಡಲ್ಲಿ’, “ಕಾನೂರಾಯಣ’,”ದಿ ಟೆರರಿಸ್ಟ್’, ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದ ಮನು ಹೆಗಡೆ ಅವರಿಗಿಲ್ಲಿ ಹೊಸ ತರಹದ ಪಾತ್ರ ಸಿಕ್ಕಿದೆಯಂತೆ. ಇನ್ನು, ತಮಿಳು ಚಿತ್ರಗಳಲ್ಲಿ ನಟಿಸಿದ್ದ ಧನ್ಯಾ, ಈ ಹಿಂದೆ ಗಿರಿರಾಜ್ ಅವರ ವೆಬ್ ಸೀರಿಸ್ ರಕ್ತಚಂದನದಲ್ಲಿ ಕಾ ಣಿಸಿಕೊಂಡಿದ್ದರು. ಈಗ ಮತ್ತೆ ಗಿರಿರಾಜ್ ನಿರ್ದೇಶನದಲ್ಲಿ “ಸುರಗಿ’ಯಲ್ಲಿ ನಟಿಸುತ್ತಿದ್ದಾರೆ. ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು