ಕಾಡಲ್ಲಿ ಸತೀಶ್ ಸುತ್ತಾಟ
Team Udayavani, Dec 12, 2018, 4:59 PM IST
ಸ್ಯಾಂಡಲ್ವುಡ್ ನಟರು ಇತ್ತೀಚೆಗೆ ಪರಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. “ಅಯೋಗ್ಯ’ ಸಿನಿಮಾದ ಸಕ್ಸಸ್ ನಂತರ, ನೀನಾಸಂ ಸತೀಶ್ ಕಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು, “ಪಗೈವುನುಕು ಅರುಳ್ವೈ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸದ್ಯ ಇದೇ ಖುಷಿಯಲ್ಲಿರೋ ಸತೀಶ್ ನೀನಾಸಂ ಟ್ರಕ್ಕಿಂಗ್ ಅಂತ ಕಾಡು ಸುತ್ತುತ್ತಿದ್ದಾರೆ.
ಹೌದು, ಸತೀಶ್ ಸಿನಿಮಾ ಚಿತ್ರೀಕರಣಕ್ಕಾಗಿ ಕಾಡಿಗೆ ಹೋದರೋ ಅಥವಾ ಕಾಲಹರಣಕ್ಕಾಗಿ ಕಾಡಿಗೆ ಕಾಲಿಟ್ಟರೋ ಗೊತ್ತಿಲ್ಲ.! ಆದರೆ ಕಾಡಿನ ಹಚ್ಚ ಹಸಿರಿನ ತಂಪಾದ ವಾತಾವರಣದಲ್ಲಿ ನಿಂತು, “ಕಾಡಿನ ರಾಜ ಅಂದಾಗಲೆಲ್ಲ ಟೈಗರ್ ನೆನಪಾಗೋದಿಲ್ಲ, ಬದಲಿಗೆ ಟೈಗರ್ ಪ್ರಭಾಕರ್ ನೆನಪಾಗುತ್ತಾರೆ’ ಎಂದು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಾಡಿನ ರಾಜ ಅಂದಾಗೆಲ್ಲ ಟೈಗರ್ ನೆನಪಾಗಲ್ಲ ಜಾಸ್ತಿ ನೆನಪಾಗೋದು ಟೈಗರ್ ಪ್ರಭಾಕರ್… pic.twitter.com/5bBTJC2sKi
— Sathish Ninasam (@SathishNinasam) December 10, 2018
ಅಲ್ಲದೇ ಈ ಟ್ವೀಟ್ಗೆ ಸತೀಶ್ ಅಭಿಮಾನಿಗಳು ತರಹೇವಾರಿ ಕಮೆಂಟ್ಗಳನ್ನು ಮಾಡಿದ್ದಾರೆ. ಇನ್ನು ನೀನಾಸಂ ಸತೀಶ್ ಕೆರಿಯರ್ಗೆ ತುಂಬಾ ದಿನಗಳ ನಂತರ ದೊಡ್ಡದೊಂದು ತಿರುವು ಕೊಟ್ಟ ಸಿನಿಮಾ “ಅಯೋಗ್ಯ’. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡಿದ್ದಲ್ಲದೇ, ಶತದಿನೋತ್ಸವವನ್ನೂ ಆಚರಿಸಿತ್ತು.