“ಅಪ್ಪ ಐ ಲವ್ ಯೂ’ ಎಂದ ನಿಖಿಲ್
Team Udayavani, Dec 16, 2018, 5:37 PM IST
ಇಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಜನ್ಮದಿನವಾಗಿದ್ದು, 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ಮುಖಂಡರೂ ಶುಭಾಶಯವನ್ನು ಕೋರಿದ್ದಾರೆ. ಅಲ್ಲದೇ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಅಹಿತಕರ ಘಟನೆಗಳಿಂದ ನೊಂದಿರುವ ಕುಮಾರಸ್ವಾಮಿ ಅವರು, ವಿಜೃಂಭಣೆಯಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸದೇ, ಸಿಂಪಲ್ ಆಗಿ ಫ್ಯಾಮಿಲಿ ಜೊತೆ ಸಮಯ ಕಳೆದಿದ್ದಾರೆ.
ಈ ನಡುವೆ ನಿಖಿಲ್ ತಮ್ಮ ತಂದೆ ಕೈಯಿಂದ ಕೇಕ್ ಕಟ್ ಮಾಡಿಸಿದ್ದು, ಆ ಫೊಟೋಗಳನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ನಿಖಿಲ್ ತನ್ನ ಅಪ್ಪನಿಗೋಸ್ಕರ “ಸೀತಾರಾಮ ಕಲ್ಯಾಣ’ ಚಿತ್ರದ ಓ ಜಾನು… ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿಸುವ ಮೂಲಕ ಉಡುಗೊರೆಯನ್ನು ಕೊಟ್ಟಿದ್ದಾರೆ.
ಇನ್ನು ನಿಖಿಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ “ಹುಟ್ಟು ಹಬ್ಬದ ಶುಭಾಶಯಗಳು ಅಪ್ಪ, ಆ ದೇವರು ನಿಮಗೆ ಆರೋಗ್ಯ, ನೆಮ್ಮದಿ ಕೊಟ್ಟು ಕಾಪಾಡಲಿ ಮುಖ್ಯವಾಗಿ ನಮ್ಮ ನಾಡಿಗೆ ನಿಮ್ಮ ಸೇವೆ ಸಲ್ಲಿಸಲು ಆ ದೇವರು ನಿಮಗೆ ಶಕ್ತಿ ತುಂಬಲಿ ಎಂದು ಆಶಿಸುತ್ತೇನೆ. ನಿಮ್ಮ ಮಗನಾಗಿ ನಾನು ಹುಟ್ಟಿದ್ದು ನನ್ನ ಪುಣ್ಯ. ನೀವು ನನ್ನ ಜೀವನದ ನಿಜವಾದ ಹೀರೊ. ನೀವು ನನ್ನ ಪ್ರತಿ ಹೆಜ್ಜೆಗೂ ನೀಡುವ ಸಲಹೆ ನನ್ನನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮಾಡಲ್ಪಟ್ಟಿದೆ. ಹಗಲು ರಾತ್ರಿ ಎಂದು ಭಾವಿಸದೆ ನಾಡಿನ ಅಭಿವೃದ್ಧಿಗಾಗಿ,ನಿಮ್ಮ ಆರೋಗ್ಯವನ್ನು ಲೆಕ್ಕಿಸದೆ ನೀವು ಮುನ್ನುಗ್ಗುವ ರೀತಿ ನಿಜವಾಗಿಯೂ ಎಲ್ಲರೂ ಮೆಚ್ಚುವಂತದ್ದು. ಲವ್ ಯು ಅಪ್ಪ❤️ ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ