ದಾದಾ ಸ್ಮರಿಸಿದ ದರ್ಶನ್
Team Udayavani, Dec 30, 2018, 11:10 AM IST
ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ 9ನೇ ಪುಣ್ಯ ತಿಥಿ ಇಂದು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಡೆಯಿತು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ ಹೃದಯವಂತ ನಮ್ಮನ್ನೆಲ್ಲ ಅಗಲಿ ಇಂದಿಗೆ 9 ವರ್ಷ ಕಳೆದಿದೆ.
ರಾಮಾಚಾರಿಯನ್ನು ಸ್ಮರಿಸಲು ಹಲವು ಜಿಲ್ಲೆಗಳಿಂದ ಅಪಾರ ಅಭಿಮಾನಿಗಳ ದಂಡೇ ವಿಷ್ಣು ಸಮಾಧಿಯತ್ತ ಆಗಮಿಸಿತ್ತು. ಅಲ್ಲದೇ ಸ್ಯಾಂಡಲ್ವುಡ್ನ ಹಲವಾರು ತಾರಾ ಮಂದಿ ಕೋಟಿಗೊಬ್ಬನನ್ನು ಸ್ಮರಿಸಿದ್ದು, ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಷ್ಣುದಾದರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.
ಇಂದು ಅಭಿನಯ ಭಾರ್ಗವ ಸಾಹಸಸಿಂಹ ಡಾ|| ವಿಷ್ಣುವರ್ಧನ್ ರವರ ೯ನೇ ಪುಣ್ಯತಿಥಿ. ತಮ್ಮ ಹೃದಯವಂತಿಕೆ ಹಾಗೂ ಕಲಾಸೇವೆಯಿಂದ ಕೋಟ್ಯಾಂತರ ಕನ್ನಡಿಗರ ಮನಸ್ಸಲ್ಲಿ ಅಜರಾಮರವಾಗಿ ನೆಲೆಸಿರುವ ವಿಷ್ಣು ಸರ್ ಗೆ ಭಾವಪೂರ್ಣ ನಮನಗಳು.
— Darshan Thoogudeepa (@dasadarshan) December 30, 2018
ಹೌದು, ಸ್ಯಾಂಡಲ್ವುಡ್ನ ಡಿ ಬಾಸ್ ದರ್ಶನ್ ತಮ್ಮ ಟ್ವೀಟರ್ ಖಾತೆಯಲ್ಲಿ “ಇಂದು ಅಭಿನಯ ಭಾರ್ಗವ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ 9ನೇ ಪುಣ್ಯತಿಥಿ. ತಮ್ಮ ಹೃದಯವಂತಿಕೆ ಹಾಗೂ ಕಲಾಸೇವೆಯಿಂದ ಕೋಟ್ಯಾಂತರ ಕನ್ನಡಿಗರ ಮನಸ್ಸಲ್ಲಿ ಅಜರಾಮರವಾಗಿ ನೆಲೆಸಿರುವ ವಿಷ್ಣು ಸರ್ ಗೆ ಭಾವಪೂರ್ಣ ನಮನಗಳು’ ಎಂದು ಬರೆದುಕೊಂಡು ಸಾಹಸಸಿಂಹನಿಗೆ ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ