ಕೆಮಿಸ್ಟ್ರಿ ವರ್ಕೌಟ್ ಆಗುವ ನಿರೀಕ್ಷೆಯಲ್ಲಿ ಸಂಜನಾ
Team Udayavani, Feb 10, 2019, 5:47 AM IST
ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಸಂಜನಾ ಆನಂದ್ ಎಂಬ ಹುಡುಗಿಯ ಆಗಮನವಾಗಿದೆ. ಯಾರು ಈ ಸಂಜನಾ ಆನಂದ್ ಎಂಬ ಪ್ರಶ್ನೆ ಎದುರಾದರೆ, ಅದಕ್ಕೆ ಉತ್ತರ “ಕೆಮಿಸ್ಟ್ರಿ ಆಫ್ ಕರಿಯಪ್ಪ’. ಈಗಾಗಲೇ ಟ್ರೇಲರ್ ಮತ್ತು ಸಾಂಗ್ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಾಯಕಿ ಈ ಸಂಜನಾ ಆನಂದ್. ಇದು ಇವರ ಮೊದಲ ಚಿತ್ರ.
ಹಾಗೆ ನೋಡಿದರೆ, ಸಂಜನಾ ಆನಂದ್ಗೆ ಸಿನಿಮಾ ರಂಗ ಹೊಸದು. ಎಂಜಿನಿಯರಿಂಗ್ ಓದಿ, ಎರಡು ವರ್ಷ ಡೆಲ್ ಕಂಪೆನಿಯಲ್ಲಿ ಕೆಲಸ ಮಾಡಿರುವ ಸಂಜನಾಗೆ ಸಿನಿಮಾ ಅವಕಾಶ ಬಂದಿದ್ದೇ ತಡ, ಕೆಲಸ ಮಾಡುವುದಾ ಅಥವಾ ಸಿನಿಮಾ ಮಾಡುವುದಾ ಎಂಬ ಪ್ರಶ್ನೆ ಎದುರಾಗಿದ್ದು ನಿಜ. ಕೊನೆಗೆ ಕಥೆ ಮತ್ತು ಪಾತ್ರ ಚೆನ್ನಾಗಿದೆ, ಹೇಗೋ ವೀಕೆಂಡ್ನಲ್ಲಿ ಮತ್ತು ಒಂದಷ್ಟು ರಜಾ ಪಡೆದು ಸಿನಿಮಾ ಮಾಡಿದರಾಯ್ತು ಅಂತ ಈ ಚಿತ್ರ ಒಪ್ಪಿಕೊಂಡ ಸಂಜನಾ ಆನಂದ್ಗೆ, ಅದು ಸುಲಭವಾಗಲಿಲ್ಲ.
ಕೊನೆಗೆ ತನ್ನ ಕೆಲಸಕ್ಕೆ ಗುಡ್ಬೈ ಹೇಳಿ, “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಅವರಿಗೆ ಕೆಲಸ ಬಿಟ್ಟಿದ್ದಕ್ಕೂ ಖುಷಿ ಇದೆ. ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೂ ಹೆಮ್ಮೆ ಇದೆ. ಆ ಬಗ್ಗೆ ಹೇಳುವ ಸಂಜನಾ ಆನಂದ್, “ನನಗೆ ಈ ಚಿತ್ರ ಗಂಭೀರವಾಗುತ್ತಾ ಹೋಯ್ತು. ಕೆಲಸ ಬಿಟ್ಟು, ಪೂರ್ಣಪ್ರಮಾಣದಲ್ಲಿ ಇಲ್ಲಿ ಕೆಲಸ ಮಾಡಿದೆ. ಚಿತ್ರ ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ.
ನನಗೂ ಕೆಮಿಸ್ಟ್ರಿ ವರ್ಕೌಟ್ ಆಗುತ್ತೆ ಎಂಬ ಅದಮ್ಯ ವಿಶ್ವಾಸವಿದೆ. ಹಾಗೆ ನೋಡಿದರೆ, ನನಗೆ ನಟನೆ ಗೊತ್ತಿಲ್ಲ. ನಿರ್ದೇಶಕರು ವರ್ಕ್ಶಾಪ್ ನಡೆಸಿ, ಆ ನಂತರ ಕ್ಯಾಮೆರಾ ಮುಂದೆ ನಿಲ್ಲಿಸಿದರು’ ಎಂದು ವಿವರ ಕೊಡುತ್ತಾರೆ ಸಂಜನಾ. ಸಂಜನಾ ಅವರಿಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಾರೆ. ಆ ಬಗ್ಗೆ ಹೇಳುವ ಅವರು, “ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗಿ ಪಾತ್ರ. ಸಂಭಾಷಣೆ ಮತ್ತು ಬಾಡಿಲಾಂಗ್ವೇಜ್ ಬಗ್ಗೆ ಏನೇನೂ ಗೊತ್ತಿರಲಿಲ್ಲ.
ಸಿನಿಮಾ ಮಾಡುತ್ತಲೇ ಎಲ್ಲವನ್ನೂ ಕಲಿತಿದ್ದೇನೆ. ಈಗ ಧೈರ್ಯ ಬಂದಿದೆ. ಸಿನಿಮಾದಲ್ಲೇ ಗಟ್ಟಿ ನೆಲೆ ಕಾಣುವ ವಿಶ್ವಾಸವೂ ಇದೆ. ಹಾಗಂತ, ಇಲ್ಲಿ ಅಂದುಕೊಂಡಂತೆ ನಡೆಯದಿದ್ದರೂ, ಎಜುಕೇಶನ್ ಇದೆ ಪುನಃ ಯಾವುದಾದರೊಂದು ಕೆಲಸ ಮಾಡ್ತೀನಿ’ ಎನ್ನುವ ಸಂಜನಾ, ಭರತನಾಟ್ಯ ಡ್ಯಾನ್ಸರ್ ಕೂಡ ಹೌದು.
ಚಿತ್ರದಲ್ಲಿ ನಟ ತಬಲನಾಣಿ ಅವರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಅವರು, ಚಿತ್ರದಲ್ಲಿ ಎಲ್ಲವನ್ನೂ ಕಲಿಯೋಕೆ ಕಾರಣ ಅವರೂ ಒಬ್ಬರು ಎನ್ನುವುದನ್ನು ಮರೆಯಲಿಲ್ಲ. ಚಿತ್ರೀಕರಣ ವೇಳೆ ಪ್ರತಿ ಸೀನ್ ಮತ್ತು ಡೈಲಾಗ್ ಬಗ್ಗೆ ಹೇಳಿಕೊಟ್ಟು, ತಿದ್ದಿದ್ದಾರೆ ಎಂದು ತಬಲನಾಣಿ ಅವರ ಸಹಕಾರವನ್ನು ಕೊಂಡಾಡುತ್ತಾರೆ. ಸದ್ಯ ಸಂಜನಾ, ಈ ಚಿತ್ರದ ಫಲಿತಾಂಶ ಎದುರು ನೋಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಚಿತ್ರ ರುಚಿಸುತ್ತದೆ ಎಂಬ ಗ್ಯಾರಂಟಿಯನ್ನೂ ಕೊಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ
CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?