ದರ್ಶನ್‌ ಬರ್ತ್‌ಡೇಗೆ “ಡಿ 55′ ಅನೌನ್ಸ್‌…!


Team Udayavani, Feb 12, 2019, 5:46 AM IST

darshan.jpg

ನಟ ದರ್ಶನ್‌ ಅವರ ಕೈಯಲ್ಲೀಗ ಸಾಲು ಸಾಲು ಚಿತ್ರಗಳಿವೆ. ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಒಂದು ಕಡೆ “ಒಡೆಯ’, ಮತ್ತೂಂದು ಕಡೆ “ರಾಬರ್ಟ್‌’, ಇನ್ನೊಂದು ಕಡೆ “ಗಂಡುಗಲಿ ಮದಕರಿ ನಾಯಕ’ ಚಿತ್ರಗಳಿವೆ. ಈ ಮಧ್ಯೆ ಮಾ.1 ರಂದು “ಯಜಮಾನ’ ಬಿಡುಗಡೆಯಾಗುತ್ತಿದೆ. ಇನ್ನು, ಫೆಬ್ರವರಿ 16 ರಂದು ದರ್ಶನ್‌ ಅವರ ಹುಟ್ಟುಹಬ್ಬ. ಅಂದು ಅಭಿಮಾನಿಗಳಿಗೆ ದರ್ಶನ್‌ ಹೊಸ ಗಿಫ್ಟ್ ಕೊಡಲಿದ್ದಾರೆ. ಹೌದು, ದರ್ಶನ್‌ ಹುಟ್ಟು ಹಬ್ಬದಂದು ಹೊಸ ಚಿತ್ರದ ಫ‌ಸ್ಟ್‌ಲುಕ್‌ ಬರುತ್ತಿದೆ.

ಎಲ್ಲಾ ಸರಿ, ದರ್ಶನ್‌ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ “ಡಿ 55′. ಹೌದು, ದರ್ಶನ್‌ಗಾಗಿ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಅವರು ಹೊಸದೊಂದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ಈಗಾಗಲೇ ಜೋರು ತಯಾರಿ ನಡೆಸಿರುವ ನಿರ್ಮಾಪಕರು, “ಡಿ 55′ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡುವ ಮೂಲಕ ದರ್ಶನ್‌ ಬರ್ತ್‌ಡೇಗೆ ಅವರ ಅಭಿಮಾನಿಗಳ ಮೊಗದಲ್ಲಿ ಮಂದಹಾಸದ ಗೆರೆ ಮೂಡಿಸಲು ಸಜ್ಜಾಗುತ್ತಿದ್ದಾರೆ.

ಈ ಹಿಂದೆ ದರ್ಶನ್‌ ಅವರಿಗೆ “ಮೆಜೆಸ್ಟಿಕ್‌’ ಚಿತ್ರ ನಿರ್ಮಿಸಿದ್ದ ಎಂ.ಜಿ.ರಾಮಮೂರ್ತಿ, “ಧರ್ಮ’ ಚಿತ್ರವನ್ನೂ ನಿರ್ಮಿಸಿದ್ದರು. ಅದಾದ ಬಳಿಕ ಮಾಡುತ್ತಿರುವ ಮೂರನೇ ಚಿತ್ರವಿದು. ಹದಿನೈದು ವರ್ಷಗಳ ದೊಡ್ಡ ಗ್ಯಾಪ್‌ ಬಳಿಕ ಸಕ್ಸಸ್‌ ಜೋಡಿ ಮತ್ತೆ ಒಂದಾಗಿ “ಡಿ 55′ ಚಿತ್ರ ಮಾಡುತ್ತಿದೆ ಎಂಬುದು ಈ ಹೊತ್ತಿನ ವಿಶೇಷ. ಎಲ್ಲವೂ ಸರಿ, ಈ “ಡಿ 55′ ಅಂದರೇನು? ಎಲ್ಲರಿಗೂ “ಡಿ 55′ ಅಂದರೆ ದರ್ಶನ್‌ ಅವರ 55 ನೇ ಸಿನಿಮಾದ ಹೆಸರು ಎಂಬ ಪ್ರಶ್ನೆ ಇದೆ.

ಆ ಕುತೂಹಲ ಇಲ್ಲಿಯವರೆಗೆ ಹಾಗೆಯೇ ಇರುವುದು ನಿಜ. ಆದರೆ, ದರ್ಶನ್‌ ಅವರ ಹೊಸ ಚಿತ್ರಕ್ಕೆ “ಡಿ 55′ ಎಂಬ ಶೀರ್ಷಿಕೆಯೇ ಅಂತಿಮವಾಗುತ್ತಾ? ಗೊತ್ತಿಲ್ಲ. ಆದರೆ, ನಿರ್ಮಾಣ ಮಾಡಲಿರುವ ಎಂ.ಜಿ.ರಾಮಮೂರ್ತಿ ಅವರು ಸದ್ಯಕ್ಕೆ ದರ್ಶನ್‌ ಅವರಿಗೆ ಚಿತ್ರ ನಿರ್ಮಿಸಲು ತಯಾರಾಗಿದ್ದು, ಅದೊಂದು ಬಿಗ್‌ಬಜೆಟ್‌ ಚಿತ್ರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಯ ಕೈಯಲ್ಲಿರುವ ಚಿತ್ರಗಳ ಜೊತೆಗೆ “ಡಿ 55′ ಚಿತ್ರ ಶುರುವಾದರೂ ಅಚ್ಚರಿ ಇಲ್ಲ. “ಡಿ 55′ ಅನ್ನುವುದೇ ಅಷ್ಟೊಂದು ಪವರ್‌ಫ‌ುಲ್‌ ಆಗಿರುವಾಗ, ಇನ್ನು ಕಥೆ ಹೇಗಿರುತ್ತೆ ಎಂಬ ಪ್ರಶ್ನೆ ಕೂಡ ಬರುತ್ತದೆ. ಆದರೆ, ಆ ಚಿತ್ರದ ಕಥೆ ಏನು, ನಿರ್ದೇಶಕರು ಯಾರು, ಯಾರೆಲ್ಲಾ ಕಲಾವಿದರು ಇರುತ್ತಾರೆ, ತಾಂತ್ರಿಕ ವರ್ಗದಲ್ಲಿ ಯಾರೆಲ್ಲಾ ಕೆಲಸ ಮಾಡುತ್ತಾರೆ ಎಂಬುದಕ್ಕೆ “ಡಿ 55′ ಸೆಟ್ಟೇರುವವರೆಗೂ ಕಾಯಬೇಕು.

ದರ್ಶನ್‌ ಅವರಿಗೆ “ಮೆಜೆಸ್ಟಿಕ್‌’ ದೊಡ್ಡ ಯಶಸ್ಸು ತಂದುಕೊಟ್ಟಿದ್ದು ನಿಜ. ಆ ಚಿತ್ರ ನಿರ್ಮಿಸಿದ್ದ ಎಂ.ಜಿ.ರಾಮಮೂರ್ತಿ ಅವರಿಗೂ ದರ್ಶನ್‌ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇತ್ತಾದರೂ, ಅದು ಕಳೆದ ಒಂದುವರೆ ದಶಕಗಳ ಕಾಲ ಆಗಿರಲಿಲ್ಲ. ಈಗ ಅದಕ್ಕೊಂದು ಒಳ್ಳೆಯ ಸಮಯ ಬರುತ್ತಿದೆ. ಈ ಹಿಂದೆ ಎಂ.ಜಿ.ರಾಮಮೂರ್ತಿ ಅವರು ದರ್ಶನ್‌ ಅವರಿಗಾಗಿಯೇ “ಮದಗಜ’ ಎಂಬ ಶೀರ್ಷಿಕೆ ನೋಂದಣಿ ಮಾಡಿಸಿ, ಚಿತ್ರ ನಿರ್ಮಿಸಲು ರೆಡಿಯಾಗಿದ್ದರು. ಆದರೆ, ದರ್ಶನ್‌ ಅವರೇ ಸ್ವತಃ ಆ ಶೀರ್ಷಿಕೆಯನ್ನು ಶ್ರೀಮುರಳಿ ಚಿತ್ರಕ್ಕೆ ಬಿಟ್ಟುಕೊಡುವ ಮೂಲಕ ಪ್ರೀತಿ ತೋರಿದ್ದರು.

ನಿರ್ಮಾಪಕರು ದರ್ಶನ್‌ ಜೊತೆಗೆ ಸಿನಿಮಾ ಮಾಡಬೇಕು ಅಂತ ಇಷ್ಟು ವರ್ಷ ಕಾದಿದ್ದರು. ದರ್ಶನ್‌ ಬಿಜಿಯಿದ್ದ ಕಾರಣ, ಅದು ಸಾಧ್ಯವಾಗಿರಲಿಲ್ಲ. ಈಗ ‘ಡಿ 55′ ಮೂಲಕ ಈಡೇರುತ್ತಿದೆ ಎನ್ನಲಾಗಿದ್ದು, ದರ್ಶನ್‌ ಅವರ ಬರ್ತ್‌ಡೇ ದಿನ “ಡಿ 55′ ಫ‌ಸ್ಟ್‌ಲುಕ್‌ನ ಝಲಕ್‌ ಕಾಣಲಿದೆ. ಅದು ಅಭಿಮಾನಿಗಳ ಪಾಲಿಗೆ ಮತ್ತೂಂದು ಸಂತಸದ ವಿಷಯವಂತೂ ಹೌದು. ಅಂದಹಾಗೆ, “ಡಿ.55’ ದರ್ಶನ್‌ ಅವರ 55 ನೇ ಸಿನಿಮಾ. ಆದರೆ, ಇದೇ ಆ ಚಿತ್ರದ ಶೀರ್ಷಿಕೆ ಎಂಬುದಕ್ಕಿನ್ನೂ ಉತ್ತರ ಸಿಕ್ಕಿಲ್ಲ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.