ಯಾವತ್ತಿದ್ದರೂ ವಿಷ್ಣುವರ್ಧನ್‌ ಅವರೇ ಯಜಮಾನ


Team Udayavani, Feb 21, 2019, 9:41 AM IST

dharshan.jpg

ದರ್ಶನ್‌ ನಾಯಕರಾಗಿರುವ “ಯಜಮಾನ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮಾರ್ಚ್‌ 1 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ಆರಂಭವಾದ ದಿನದಿಂದ ಇಲ್ಲಿವರೆಗೆ ಅನೇಕ ಪ್ರಶ್ನೆ, ಕುತೂಹಲಗಳು ಎದ್ದಿದ್ದವು. ಚಿತ್ರದ ಟೈಟಲ್‌, ಹರಿಕೃಷ್ಣಗೆ ನಿರ್ದೇಶನದ ಕ್ರೆಡಿಟ್‌, ಟೈಟಲ್‌ ಕಾಂಟ್ರವರ್ಸಿ …. ಹೀಗೆ ಹತ್ತು ಹಲವು ಪ್ರಶ್ನೆಗಳಿದ್ದವು. ಮೊದಲ ಬಾರಿಗೆ ದರ್ಶನ್‌ ಆ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ
ಉತ್ತರಿಸಿದ್ದಾರೆ. ಅದು ಅವರ ಮಾತುಗಳಲ್ಲೇ …

* “ಯಜಮಾನ’ ಟೈಟಲ್‌ ಕುರಿತು ಒಂದಷ್ಟು ಕಾಂಟ್ರವರ್ಸಿ ಕೇಳಿಬಂತು. ಇಲ್ಲಿ ಒಂದು ವಿಚಾರ ಹೇಳಲು ಇಷ್ಟಪಡುತ್ತೇನೆ. ನಮ್ಮ ಚಿತ್ರರಂಗಕ್ಕೆ ಯಾವತ್ತಿದ್ದರೂ ವಿಷ್ಣುಸಾರ್‌ ಅವರೇ ಯಜಮಾನ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಟ್ರೇಲರ್‌ ನೋಡಿದಾಗ ಸಿನಿಮಾದ ಕಥೆಯ ಬಗ್ಗೆ ಗೊತ್ತಾಗಿರಬಹುದು. ಅದಕ್ಕಿಂತ ಹೆಚ್ಚಾಗಿ ನಾನು ಇಲ್ಲಿ ಯಜಮಾನನಾಗಿ ಕಾಣಿಸಿಕೊಂಡಿಲ್ಲ. ಅದು ಸಿನಿಮಾ ನೋಡಿದಾಗ ನಿಮಗೆ ಗೊತ್ತಾಗುತ್ತದೆ. ಕಥೆಗೆ “ಯಜಮಾನ’ ಟೈಟಲ್‌ ಸೂಕ್ತ ಎಂಬ ಕಾರಣಕ್ಕೆ ಇಟ್ಟಿದ್ದೇವೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ.

*ಯಜಮಾನ’ ಚಿತ್ರದ ನಾಲ್ಕು ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. “ಹರಿಕೃಷ್ಣ, ಅವರದ್ದೇ ನಿರ್ದೇಶನದ ಸಿನಿಮಾದ ಎಲ್ಲಾ ಹಾಡುಗಳನ್ನು ಹಿಟ್‌ ಮಾಡಿದರು. ಅದೇ ಬೇರೆ ನಿರ್ದೇಶಕರ ಸಿನಿಮಾದ ಒಂದೆರಡು ಹಾಡುಗಳಷ್ಟೇ ಹಿಟ್‌ ಆಗುತ್ತವೆ’ ಎಂದು. ಇದೇ ಪ್ರಶ್ನೆಯನ್ನು ನಾನು ಹರಿಗೆ ಕೇಳಿದೆ. ಹರಿ ತುಂಬಾ ಸೊಗಸಾಗಿ ಉತ್ತರಿಸಿದರು. “ಈ ಸಿನಿಮಾದ ಸಂಪೂರ್ಣ ವಿಚಾರ ನನಗೆ ಗೊತ್ತು. ಕಥೆಯಿಂದ ಹಿಡಿದು, ಸಿಚುವೇಶನ್‌ ಎಲ್ಲವೂ ನನಗೆ ಗೊತ್ತು. ಹಾಗಾಗಿ, ಅದಕ್ಕೆ ತಕ್ಕಂತೆ ಹಾಡು ಮಾಡಿದೆ. ಅದೇ ಬೇರೆ ಸಿನಿಮಾದ ನಿರ್ದೇಶಕರು ಚಿತ್ರದ ಸಂಪೂರ್ಣ ಕಥೆ ಹೇಳಲ್ಲ. ಸಿಚುವೇಶನ್‌ ಹೇಳಿ ಹೋಗುತ್ತಾರೆ. ಆ ಸಿಚುವೇಶನ್‌ನ ಅರ್ಥಮಾಡಿಕೊಂಡು ಹಾಡು ಕೊಡಬೇಕಾಗುತ್ತದೆ’ ಎಂದರು. ಅದು ನನಗೂ ಸರಿ ಎನಿಸಿತು. ಎಷ್ಟೋ ನಿರ್ದೇಶಕರು ಕಥೆಯನ್ನು ಕನ್ವಿನ್ಸ್‌ ಮಾಡುವಲ್ಲಿ ಎಡವುತ್ತಾರೆ.

*”ಯಜಮಾನ’ ಒಂದು ಅದ್ಭುತವಾದ ಕಥೆ. ಇವತ್ತಿನ ಸಂದರ್ಭಕ್ಕೆ ತುಂಬಾ ಹೊಂದಿಕೆಯಾಗುತ್ತದೆ. ಅಭಿಮಾನಿಗಳು ಈ ಚಿತ್ರದ ಮೇಲೆ ಏನು ನಿರೀಕ್ಷೆ ಇಟ್ಟಿದ್ದಾರೋ ಆ ನಿರೀಕ್ಷೆ ಸುಳ್ಳಾಗಲ್ಲ.

* ಇವತ್ತು “ಯಜಮಾನ’ ಚಿತ್ರದ ಹಾಡುಗಳು, ಟ್ರೇಲರ್‌ ಈ ಮಟ್ಟದಲ್ಲಿ ಹಿಟ್‌ ಆಗಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕಿ ಶೈಲಜಾ ನಾಗ್‌. ಕೆಲವು ಸಿನಿಮಾಗಳಲ್ಲಿ ಹೋಗಿ ನಟಿಸಿ ಬರುತ್ತೇವೆ. ಆದರೆ, ಶೈಲಜಾ ಮೇಡಂ ಮಾತ್ರ ಚಿತ್ರದ ಪ್ರತಿಯೊಂದು ಅಪ್‌ಡೇಟ್ಸ್‌ ಕೊಡುತ್ತಿದ್ದರು. ಏನೇ ಇದ್ದರೂ, ಹೇಳುವ ಜೊತೆಗೆ ಏನಾದರೂ ಸಲಹೆ ಇದ್ದರೆ ಕೊಡಿ ಎಂದು ಕೇಳುತ್ತಿದ್ದರು. ಚಿತ್ರದ ಹಾಡು, ಟ್ರೇಲರ್‌ ಬಿಡುಗಡೆಗೆ ಮುಂಚೆ ಅವರು ಆಡಿಯನ್ಸ್‌ಗೆ ಅದರ ಬಗ್ಗೆ ತಿಳಿಸಿ, ಅವರ ಮೈಂಡ್‌ಸೆಟ್‌ ಮಾಡುತ್ತಿದ್ದ ರೀತಿ ನನಗೆ ಇಷ್ಟವಾಯಿತು.

*ಸಿನಿಮಾದ ಬಹುತೇಕ ದೃಶ್ಯಗಳು ಸೆಟ್‌ನಲ್ಲಿ ನಡೆಯುತ್ತವೆ. ಕಲಾ ನಿರ್ದೇಶಕ ಶಶಿಧರ ಅಡಪ ಅವರ ಸೆಟ್‌ ನೋಡಿ ನಾನು ಫಿದಾ ಆಗಿ ಬಿಟ್ಟೆ. ಅಷ್ಟೊಂದು ಚೆನ್ನಾಗಿ ಸೆಟ್‌ ಹಾಕಿದ್ದಾರೆ.

“ಯಜಮಾನ’ ಚಿತ್ರದ ನಿರ್ದೇಶನದಲ್ಲಿ ಹರಿಕೃಷ್ಣ ಅವರ ಹೆಸರು ಸೇರುತ್ತಿದ್ದಂತೆ ಅನೇಕರಲ್ಲಿ ಯಾಕೆ ಎಂಬ ಪ್ರಶ್ನೆ ಇದೆ. ಈ ಸಿನಿಮಾಕ್ಕೆ ಓಂಕಾರ ಹಾಕಿದ ದಿನದಿಂದಲೂ ಹರಿಕೃಷ್ಣ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಬೇರೆ ಕೆಲಸಗಳನ್ನು ಬದಿಗಿಟ್ಟು, ರಾತ್ರಿ ಹಗಲು ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಈ ಚಿತ್ರಕ್ಕೆ ಅವರ ಪ್ರಯತ್ನ ಅಗಾಧವಾದುದು, ಅಮೋಘವಾದುದು ಮತ್ತು ತುಂಬಾ ದೊಡ್ಡದು. ಹಾಗಾಗಿ, ಇಡೀ ತಂಡ ಸೇರಿ ಚರ್ಚಿಸಿ, ಅವರಿಗೆ ಕ್ರೆಡಿಟ್‌ ಕೊಟ್ಟೆವು. 

ಟಾಪ್ ನ್ಯೂಸ್

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kushee ravi spoke about Case of Kondana

Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…

aradhana

Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್‌ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ

rishab-shetty

ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ

TDY-39

ಸಾರ್ವಜನಿಕರೇ ಆನ್‌ಲೈನ್‌ ಆಮಿಷಕ್ಕೆ ಮಾರುಹೋಗದಿರಿ

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.