ಕಿರುತೆರೆ ನಟನ ವಿರುದ್ಧ ದೂರು
Team Udayavani, Feb 22, 2019, 6:21 AM IST
ಕಿರುತೆರೆ ಕಲಾವಿದ ರಾಜೇಶ್ ಧ್ರುವ ಎಂಬುವರ ವಿರುದ್ಧ ಅವರ ಪತ್ನಿ ಬಸವನಗುಡಿ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ರಾಜೇಶ್ಧ್ರುವ 2017ರಲ್ಲಿ ಮದುವೆಯಾಗಿದ್ದು, ಕೆಲ ತಿಂಗಳಿಂದ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದರು.
ಜತೆಗೆ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೆ, ರಾಜೇಶ್ ಧ್ರುವ ಬೇರೆ ಯುವತಿಯರ ಜತೆ ಆತ್ಮೀಯತೆ ಹೊಂದಿದ್ದಾರೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ದಂಪತಿಯನ್ನು ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಹೇಳಿದರು.