ನನಗೆ ಬಾಯ್ಫ್ರೆಂಡ್ ಇಲ್ಲ – ಘಟನೆಗೂ ನನಗೂ ಸಂಬಂಧವಿಲ್ಲ
Team Udayavani, Mar 19, 2019, 5:41 AM IST
ನಟಿ ರಾಗಿಣಿಗಾಗಿ ರವಿ ಹಾಗೂ ಶಿವಪ್ರಕಾಶ್ ಎನ್ನುವವರು ಕಿತ್ತಾಡಿಕೊಂಡರಂತೆ ಎಂಬ ಸುದ್ದಿ ಕೆಲ ದಿನಗಳ ಹಿಂದೆಯಷ್ಟೇ ಜೋರಾಗಿ ಕೇಳಿಬಂದಿತ್ತು. ಜೊತೆಗೆ ರಾಗಿಣಿಯ ಬಾಯ್ಫ್ರೆಂಡ್ ಬಂದ ಗಲಾಟೆ ಮಾಡಿದನಂತೆ ಎಂಬೆಲ್ಲಾ ಸುದ್ದಿಗಳು ಓಡಾಡಿದವು. ಆದರೆ, ರಾಗಿಣಿ ಮಾತ್ರ ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಹಾಗಾದರೆ ಈ ಘಟನೆಗೂ ರಾಗಿಣಿಗೂ ಸಂಬಂಧವಿಲ್ಲವೇ ಎಂದು ನೀವು ಕೇಳಬಹುದು.
ರಾಗಿಣಿ ಮಾತ್ರ “ನನಗೂ ಆ ಘಟನೆಗೂ ಸಂಬಂಧವೇ ಇಲ್ಲ. ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ’ ಎನ್ನುತ್ತಿದ್ದಾರೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ರಾಗಿಣಿ, “ನನಗೆ ಯಾವ ಘಟನೆಯ ಬಗ್ಗೆಯೂ ಗೊತ್ತಿಲ್ಲ. ನಾನಿಲ್ಲಿ “ಗಾಂಧಿಗಿರಿ’ ಚಿತ್ರೀಕಣದಲ್ಲಿ ಬಿಝಿ ಇದ್ದೇನೆ. ಅದಕ್ಕಿಂತ ಹೆಚ್ಚಾಗಿ ನನಗೆ ಯಾವ ಬಾಯ್ಫ್ರೆಂಡ್ ಕೂಡಾ ಇಲ್ಲ.
ನಾನೊಬ್ಬಳೇ ಖುಷಿಯಾಗಿದ್ದೇನೆ’ ಎನ್ನುತ್ತಾರೆ. “ನಾನು ಆ ದಿನ ಊಟಕ್ಕೆ ಹೋಗಿದ್ದು ನಿಜ. ಆದರೆ, ನಾನು ಅವರಿಬ್ಬರ ಜೊತೆ ಹೋಗಿಲ್ಲ. ನನ್ನ ಮುಂಬೈ ಫ್ರೆಂಡ್ಸ್ ಬಂದಿದ್ದರು. ಅದೇ ರೆಸ್ಟೋರೆಂಟ್ನಲ್ಲಿ ಅವರಿಬ್ಬರು (ರವಿ-ಶಿವಪ್ರಕಾಶ್) ಇದ್ದರು. ಅವರ ಮಧ್ಯೆ ಏನೋ ವಾದ ನಡೆದು ಜಗಳವಾಗಿರಬೇಕು. ಹಾಗಂತ ಅದೇನು ಜಗಳವೆಂದು ನನಗೂ ಗೊತ್ತಿಲ್ಲ. ಅವರಿಬ್ಬರೂ ನನಗೆ ಪರಿಚಯ.
ಇಬ್ಬರು ಒಳ್ಳೆಯವರು. ಅವರ ನಡುವೆ ಏನಾಯಿತೆಂದು ನಿಜವಾಗಿಯೂ ನನಗೆ ಗೊತ್ತಿಲ್ಲ’ ಎನ್ನುವುದು ರಾಗಿಣಿ ಮಾತು. ಈ ಮೂಲಕ ತನಗೂ ಆ ಘಟನೆಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ರಾಗಿಣಿ. ಸದ್ಯ ರಾಗಿಣಿ ಪ್ರೇಮ್ ನಾಯಕರಾಗಿರುವ “ಗಾಂಧಿಗಿರಿ’ ಚಿತ್ರೀಕರಣದಲ್ಲಿ ಬಿಝಿ. ಇದಲ್ಲದೇ ಎರಡು ನಾಯಕಿಪ್ರಧಾನ ಆ್ಯಕ್ಷನ್ ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ ರಾಗಿಣಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ