ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿ ಸೆರೆ
Team Udayavani, Feb 17, 2017, 12:21 PM IST
ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಆರೋಪಿಯೊಬ್ಬನನ್ನು ಬಾಗಲಗುಂಟೆ ಪೊಲೀಸರು ಪೋಕೊ ಕಾಯ್ದೆಯಡಿ ಬಂಸಿದ್ದಾರೆ. ಬಾಗಲಗುಂಟೆ ನಿವಾಸಿ ನರ ಸಿಂಹಮೂರ್ತಿ ಅಲಿಯಾಸ್ ನಿಕ್ಕಿ (24) ಬಂತ ಆರೋಪಿ. ಬಾಲಕಿಯ ಪಕ್ಕದ ಮನೆಯಲ್ಲೇ ವಾಸವಾಗಿದ್ದ ಆರೋಪಿ ಫೆ.9ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿಯನ್ನು ಅಪಹರಿಸಿದ್ದ.
ಅಪಹರಣದ ಬಳಿಕ ಬಾಲಕಿ ಯನ್ನು ನೇರವಾಗಿ ಆಂಧ್ರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೂರು ದಿನಗಳಕಾಲ ನಿರಂತರ ವಾಗಿ ಅತ್ಯಾಚಾರ ಮಾಡಿದ್ದ. ಬಾಲಕಿ ಪೋಷಕರು ಮಗಳು ಕಾಣೆ ಯಾಗಿರುವ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನರಸಿಂಹಮೂರ್ತಿ ತಮ್ಮ ಮಗಳನ್ನು ಅಪಹರಣ ಮಾಡಿರಬಹುದು ಎಂದು ಪೊಲೀಸರ ಬಳಿ ಅನುಮಾನ ವ್ಯಕ್ತಪಡಿಸಿದ್ದರು.
ನರಸಿಂಹ ಮೂರ್ತಿ ಸಹ ನಾಮಪತ್ತೆಯಾಗಿದ್ದರಿಂದ ಆತನೇ ಅಪಹರಣ ಮಾಡಿರುವುದು ಖಚಿತಗೊಂಡಿತ್ತು. 3 ದಿನಗಳ ನಂತರ ಬಾಲಕಿಯನ್ನು ಬಾಗಲಗುಂಟೆ ಮನೆಗೆ ಕರೆ ತಂದು ಬಿಟ್ಟು ಪರಾರಿಯಾಗಿದ್ದ. ಬಾಗಲಗುಂಟೆ ಪೊಲೀಸರು ಗುರುವಾರ ಬೆಳಗ್ಗೆ ಆರೋಪಿ ನರ ಸಿಂಹಮೂರ್ತಿಯನ್ನು ಬಂಸಿದ್ದಾರೆ.
ತಾಯಿ, ಸೋದರಿಯ ನಿಂದಿಸುತ್ತಿದ್ದ ಅಣ್ಣ ಕೊಲೆ
ಬೆಂಗಳೂರು: ಪ್ರತಿ ದಿನ ತಾಯಿ ಮತ್ತು ಸಹೋದರಿಯರನ್ನು ನಿಂದಿಸುತ್ತಿದ್ದ ಅಣ್ಣನನ್ನು ತಲೆ ಮೇಲೆ ಕತ್ತು ಎತ್ತಿಹಾಕಿ ತಮ್ಮನೇ ಕೊಲೆ ಮಾಡಿರುವ ಘಟನೆ ಮಂಜುನಾಥ ನಗರದಲ್ಲಿ ನಡೆದಿದೆ. ಟ್ರಾವೆಲ್ಸ್ವೊಂದರಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ ನಗರದ ಪ್ರಕಾಶ್ ರಾವ್(58) ಕೊಲೆಯಾದ ವ್ಯಕ್ತಿ.
ಬುಧವಾರ ತಡರಾತ್ರಿ 12.30ರ ಸುಮಾರಿಗೆ ಮನೆಗೆ ಬಂದಿದ್ದ ಪ್ರಕಾಶ್ರಾವ್ ಎಂದಿನಂತೆ ತಾಯಿ ಹಾಗೂ ಸಹೋದರಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದ. ಇದರಿಂದ ಅಸಮಾಧಾನಗೊಂಡ ತಮ್ಮ ಗೋವಿಂದ ರಾವ್ ಅಣ್ಣ ಪ್ರಕಾಶ್ರಾವ್ ಜತೆ ಜಗಳಕ್ಕೆ ಇಳಿದಿದ್ದ.
ಈ ವೇಳೆ ಇಬ್ಬರ ನಡುವೆ ತಳ್ಳಾಟ, ನೂಕಾಟವಾಗಿ ಅಣ್ಣ ಪ್ರಕಾಶ್ರಾವ್ ಕೆಳಗೆ ಬಿದ್ದಿದ್ದಾನೆ. ಸಿಟ್ಟಿನಲ್ಲಿದ್ದ ಗೋವಿಂದರಾವ್ ಪ್ರಕಾಶ್ ರಾವ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಪ್ರಕಾಶ್ರಾವ್ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿ ದ್ದಾನೆ. ಪ್ರಕಾಶ್ರಾವ್ಗೆ ತಾಯಿ, ಐವರು ಸಹೋದರಿಯರು ಮತ್ತು ಗೋವಿಂದರಾವ್ ಸೇರಿದಂತೆ ಮೂವರು ಸಹೋದರರು ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!
CCB Raid: ಲೋಕ ಚುನಾವಣೆ ಹಿನ್ನೆಲೆ; ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ
Motivational: ಪಿಯುನಲ್ಲಿ 2 ಬಾರಿ ಫೇಲ್, ಯುಪಿಎಸ್ಸಿ ಪಾಸ್
Bike Theft: ಹಗಲಲ್ಲಿ ಫುಡ್ಡೆಲಿವರಿ ಕೆಲಸ, ರಾತ್ರಿ ಬೈಕ್ಗಳ ಕಳವು: ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ