ಮಳೆಗೆ ಮನೆಗಳು ಜಲಾವೃತ: ಪರದಾಟ
Team Udayavani, Oct 20, 2017, 12:02 PM IST
ಮಹದೇವಪುರ: ಸುಮಾರು 17 ವರ್ಷಗಳಿಂದ ಕೆರೆಯಂಚಿನಲ್ಲಿ ಜೀವಿಸುತ್ತಿದ್ದ 150ಕ್ಕೂ ಹೆಚ್ಚು ಬಡ ಕುಟುಂಬಗಳ ಮನೆಗಳು ಮಳೆಯಿಂದ ಸಂಪೂರ್ಣ ಜಲವೃತ್ತವಾಗಿದ್ದು ಮೂಲಭೂತ ಸೌಲಭ್ಯಗಳಿಲ್ಲದೆ ಬೀದಿ ಪಾಲಾಗಿವೆ, ಕೆರೆಯಂಚಿನಲ್ಲಿ ನೆಲೆಸಿರುವ ಹಿನ್ನೆಲೆ ಸರ್ಕಾರವೂ ಸಹ ಕೈಬಿಟ್ಟಿರುವುದು ಕಂಟಕವಾಗಿದೆ.
ಕ್ಷೇತ್ರದ ದೊಡ್ಡಬನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಬನಹಳ್ಳಿ ಕಾಲೋನಿಯು ಕೆರೆಯಂಚಿನಲ್ಲಿದ್ದು ಕಳೆದ 17 ವರ್ಷಗಳಿಂದ 300 ಕ್ಕೂ ಹೆಚ್ಚು ಬಡ ಕುಟುಂಬಗಳು ಇಲ್ಲಿ ನೆಲೆಸಿವೆ, ಆಗಸ್ಟ್ನಿಂದ ಎರಡು ತಿಂಗಳ ಕಾಲ ಸುರಿದ ಬಾರಿ ಮಳೆಗೆ ಕಾಲೋನಿಯ 150ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು ಗಂಜಿ ಕೆಂದ್ರಗಳಲ್ಲಿ ನೆಲೆಸುವಂತಹ ಸ್ಥಿತಿ ಇದೆ.
ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಹೇಳಿದ ನಂತರ ಗಂಜಿ ಕೇಂದ್ರ ನಿರ್ಮಿಸಿದೆ. ಮೂಲಸೌಲಭ್ಯವಿಲ್ಲದೆ ಜನರು ಶೌಚಾಲಯಕ್ಕೆ ಹೋಗಲೂ ಪರದಾಡುವ ಸ್ಥಿತಿಯಿದೆ. ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಸುಮಾರು 17ವರ್ಷದ ಹಿಂದೆ ಕೆರೆ ಪ್ರದೇಶವೆಂದು ತಿಳಿಯದೆ ವಾಸಿಸುತ್ತಿದ್ದೇವೆ. ಶಾಲಾ ಮಕ್ಕಳು ತಿಂಗಳಿಂದ ಶಾಲೆಗೆ ಹೋಗುವುದು ಅಸಾಧ್ಯವಾಗಿದೆ ಮಹಿಳೆಯರು, ವೃದ್ಧರಿಗೆ ತೀವ್ರ ಸಂಕಷ್ಟವಾಗಿದೆ ತಾಲೂಕು ಕಚೇರಿ ಮುಂದೆ ಸಮೂಹಿಕ ಅತ್ಮಹತ್ಯಯೇ ಒಂದೆ ಇರುವುದು ನಮ್ಮಗೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಚಿಕ್ಕಬನಹಳ್ಳಿ ಕಾಲೋನಿ ಸ್ಥಳೀಯರಾದ ವಸಂತ ಅಳಲುತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Politics: ಅಮಿತ್ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
Online Bitcoin Gambling Enterprises: An Overview to Betting with Cryptocurrency