ಮನೆಯಲ್ಲೇ ಎಣ್ಣೆ ತೆಗೆದು ಅಡುಗೆ ಮಾಡಿ
Team Udayavani, Jan 21, 2018, 11:43 AM IST
ಬೆಂಗಳೂರು: ರಿಫೈನ್ಡ್ ಆಯಿಲ್ಗಾಗಿ ಈಗ ಮಾರುಕಟ್ಟೆಗೆ ಹೋಗಬೇಕಿಲ್ಲ. ಅಡುಗೆಗೆ ಬೇಕಾದಷ್ಟು ಎಣ್ಣೆಯನ್ನು ಮನೆಯಲ್ಲೇ, ಕೆಲವೇ ನಿಮಿಷಗಳಲ್ಲಿ ಅರೆದು ತೆಗೆಯಬಹುದು! ಇದನ್ನು ಸಾಧ್ಯವಾಸಿರುವುದು “ಸೀಡ್ಸ್ ಟು ಆಯಿಲ್’ ಎಂಬ ಚಿಕ್ಕಗಾತ್ರದ ಯಂತ್ರ. ಇದರಲ್ಲಿ ಸುಮಾರು 27 ವಿಧದ ಎಣ್ಣೆಕಾಳುಗಳನ್ನು ಅರೆದು, ಎಣ್ಣೆ ತೆಗೆಯಬಹುದು.
ಅದೂ ಕೂಡ ಕೆಲವೇ ನಿಮಿಷಗಳಲ್ಲಿ. ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾವಯವ-ಸಿರಿಧಾನ್ಯಗಳ ವಾಣಿಜ್ಯ ಮೇಳದಲ್ಲಿ ಈ ಯಂತ್ರವನ್ನು ಕಾಣಬಹುದು. ಹೆಚ್ಚು-ಕಡಿಮೆ ಮಿಕ್ಸರ್ ಗೆùಂಡರ್ ಗಾತ್ರದ ಈ ವಿದ್ಯುತ್ಚಾಲಿತ ಗಾಣವನ್ನು ಎಲ್ಲಿಗಾದರೂ ಕೊಂಡೊಯ್ಯಬಹುದು.
ಒಂದು ಗಂಟೆಗೆ ಸುಮಾರು ಎರಡು ಲೀಟರ್ ಎಣ್ಣೆಯನ್ನು ಈ ಗಾಣದಿಂದ ಉತ್ಪಾದಿಸಬಹುದು. ಹೀಗೆ ಅರೆದು ತೆಗೆಯುವ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಕಣ್ಮುಂದೆಯೇ ಕಲಬೆರಕೆರಹಿತ, ಪರಿಶುದ್ಧ ಎಣ್ಣೆ ಸಿಗಲಿದೆ. ಅಷ್ಟೇ ಅಲ್ಲ, ಈ ಎಣ್ಣೆಕಾಳುಗಳ ಸಿಪ್ಪೆಯನ್ನು ನಂತರದಲ್ಲಿ “ಸ್ನ್ಯಾಕ್ಸ್’ ರೂಪದಲ್ಲಿ ಸವಿಯಬಹುದು ಎಂದು ಯಂತ್ರದ ವಿತರಕ ನಿತಿನ್ ಕೋರಾ ಮಾಹಿತಿ ನೀಡಿದರು.
ಒಮ್ಮೆಲೆ ಒಂದು ಕೆಜಿ ಎಣ್ಣೆಕಾಳು ಅರೆಯುವ ಸಾಮರ್ಥ್ಯವನ್ನು ಯಂತ್ರ ಹೊಂದಿದ್ದು, ಮೇಲೆ ಕಾಳುಗಳನ್ನು ಹಾಕಿದರೆ, ಒಂದೆಡೆ ಎಣ್ಣೆ ಮತ್ತೂಂದೆಡೆ ಸಿಪ್ಪೆ ಬರುತ್ತದೆ. ಇದರ ಬೆಲೆ 22 ಸಾವಿರ ರೂ. ಹತ್ತು ವರ್ಷಕ್ಕೊಮ್ಮೆ ಇದರ ಕ್ರಷಿಂಗ್ ಬಾರ್ ಬದಲಾಯಿಸುವುದು ಬಿಟ್ಟರೆ ನಿರ್ವಹಣೆ ಕಿರಿಕಿರಿ ಇಲ್ಲ.
ಮೂರು ತಾಸು ನಿರಂತರವಾಗಿ ಈ ಯಂತ್ರ ಚಾಲನೆಯಲ್ಲಿದ್ದರೆ, ಕೇವಲ 1 ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಒಂದು ಕೆಜಿ ಶೇಂಗಾ (ಕಡಲೆಬೀಜ) ಅರೆದರೆ, ಅರ್ಧ ಲೀ. ಎಣ್ಣೆ ಬರುತ್ತದೆ. ಸಾಮಾನ್ಯವಾಗಿ ಹೊರಗಡೆ ಗಾಣಗಳಲ್ಲಿ 3 ಕೆಜಿ ಎಣ್ಣೆ ಕಾಳು ಅರೆದರೆ, ಒಂದು ಕೆಜಿ ಎಣ್ಣೆ ಬರುತ್ತದೆ.
ಇಲ್ಲಿ ಎರಡು ಕೆಜಿ ಕಾಳಿನಲ್ಲಿ ಒಂದು ಲೀ. ಎಣ್ಣೆ ತೆಗೆಯಬಹುದು ಎಂದು ವಿವರಿಸಿದರು. ಮಾರುಕಟ್ಟೆಯಲ್ಲಿ ಯಂತ್ರಕ್ಕೆ ಭಾರೀ ಬೇಡಿಕೆಯಿದ್ದು, ಬೆಂಗಳೂರಿನಲ್ಲೇ 1,800 ಯಂತ್ರಗಳು ಮಾರಾಟವಾಗಿವೆ. ತಿಂಗಳಿಗೆ ಸರಾಸರಿ 500 ಯಂತ್ರ ಮಾರಾಟವಾಗುತ್ತಿವೆ. ಕೊಯಮತ್ತೂರು ಮೂಲದ ಕಂಪನಿ ಈ ಯಂತ್ರವನ್ನು ರೂಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ