ಮ್ಯಾನ್‌ಹೋಲ್‌ ಸ್ವಚ್ಛತೆಗೆ ತೆರಳಿದವರ ಸಾವು


Team Udayavani, Feb 14, 2018, 11:52 AM IST

blore-4.jpg

ಮಹದೇವಪುರ/ ಬೆಂಗಳೂರು: ಇತ್ತೀಚೆಗಷ್ಟೇ ಬಂಡೆಪಾಳ್ಯದ ಅಪಾರ್ಟ್‌ ಮೆಂಟ್‌ನ ಎಸ್‌ಟಿಪಿ ಸ್ವತ್ಛಗೊಳಿಸುವ ವೇಳೆ
ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಮಾಸುವ ಮುನ್ನವೇ ನಗರದ ಎಇಸಿಎಸ್‌ ಲೇಔಟ್‌ನ ವಾಣಿಜ್ಯ ಮಳಿಗೆಯೊಂದರ ಮ್ಯಾನ್‌ಹೋಲ್‌ ಸ್ವತ್ಛತೆಗೆ ಇಳಿದಿದ್ದ ರಾಯಚೂರು ಮೂಲದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದುರಂತ ನಡೆದಿದೆ.

ರಾಮು (35) ಮತ್ತು ರವಿ (27) ಮೃತರು. ಇವರು ಬಿಬಿಎಂಪಿ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದು ಮಂಗಳವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಎಇಸಿಎಸ್‌ ಲೇಔಟ್‌ ನಲ್ಲಿರುವ ವಾಣಿಜ್ಯ ಕಟ್ಟಡದ ಯವ್‌ಲೋಕ್‌ ಹೋಟೆಲ್‌ನ ಮ್ಯಾನ್‌ಹೋಲ್‌ ಸ್ವತ್ಛತೆಗೆ ಇಳಿದಿದ್ದರು. ಈ ವೇಳೆ ಉಸಿರುಗಟ್ಟಿ ಅಲ್ಲಿಯೇ ಮೃತಪಟ್ಟಿದ್ದಾರೆ.
 
ಬಳಿಕ ಸ್ಥಳೀಯರ ಮಾಹಿತಿಯಿಂದ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಗಳನ್ನು ಹೊರ ತೆಗೆದು, ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಚ್‌ಎಎಲ್‌ ಠಾಣೆ ಪೊಲೀಸರು ಹೋಟೆಲ್‌ ವ್ಯವಸ್ಥಾಪಕ ಆಯುಷ್‌ ಗುಪ್ತ ಹಾಗೂ ಕಟ್ಟಡ ನಿರ್ವಾಹಕ ವೆಂಕಟೇಶ್‌ನನ್ನು ಬಂಧಿಸಿದ್ದು, ಕರ್ತವ್ಯ ಲೋಪದ ಆರೋಪದ ಮೇಲೆ ಬಿಬಿಎಂಪಿ ಆರೋಗ್ಯಾಧಿಕಾರಿ ದೇವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಯಚೂರು ಮೂಲದ ರಾಮು, ರವಿ ಮತ್ತು ರಾಮುಲು ಸೇರಿ ನಾಲ್ವರು ಕಾರ್ಮಿಕರು ಮಹದೇವಪುರದ ರೆಯಾಂಡ್‌ ಶಾಲೆ
ಹಿಂಭಾಗದಲ್ಲಿರುವ ಕಾರ್ಮಿಕರ ಶೆಡ್‌ಗಳಲ್ಲಿ ಹತ್ತಾರು ವರ್ಷಗಳಿಂದ ಕುಟುಂಬದ ಜತೆ ವಾಸಿಸುತ್ತಿದ್ದು, ಬಿಬಿಎಂಪಿ ಗುತ್ತಿಗೆದಾರ ಬಳಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
 
ಮಂಗಳವಾರ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗಿರಲಿಲ್ಲ. ನಂತರ ಮ್ಯಾನ್‌ ಹೋಲ್‌ ಸ್ವತ್ಛತೆ ಕೆಲಸ ಇದೆ ಎಂದು ಇಬ್ಬರನ್ನೂ ಕರೆಸಲಾಗಿತ್ತು. ಪ್ರೇಮಾ ಪ್ಯಾರಡೈಸ್‌ ಕಟ್ಟಡ ನಿರ್ವಾಹಕ ವೆಂಕಟೇಶ್‌ ನಾಲ್ವರು ಕಾರ್ಮಿಕರಿಗೆ ಮ್ಯಾನ್‌ಹೋಲ್‌ ಸ್ವತ್ಛಗೊಳಿಸಲು ಸೂಚಿಸಿದ್ದ. ರವಿ ಮತ್ತು ರಾಮು ಸೇರಿ ನಾಲ್ವರು ಕಾರ್ಮಿಕರು ಮಧ್ಯಾಹ್ನ 4 ಗಂಟೆ ಸುಮಾರಿಗೆ ಹೋಟೆಲ್‌ ಯವ್‌ಲೋಕ್‌ಗೆ ಬಂದಿದ್ದಾರೆ.

ಮೊದಲಿಗೆ ರಾಮು 10 ಅಡಿ ಆಳದ ಗುಂಡಿಯೊಳಗೆ ಏಣಿ ಮೂಲಕ ಇಳಿದು ಸ್ವತ್ಛಗೊಳಿಸುತ್ತಿದ್ದು, ಗುಂಡಿಯಲ್ಲಿದ್ದ ರಾಸಾಯನಿಕ ಪದಾರ್ಥದ ವಿಷಾನಿಲದಿಂದ ಉಸಿರು ಗಟ್ಟಿದ್ದಾನೆ. ಆತನನ್ನು ರಕ್ಷಸಿಲು ಹೋದ ರವಿಯೂ ಉಸಿರುಗಟ್ಟಿ ಮೃತನಾಗಿದ್ದಾನೆ.
 
ಇದನ್ನು ಗಮನಿಸಿದ ರಾಮುಲು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೂ ದೂರು ನೀಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗೆ ಅವರು ಮೃತಪಟ್ಟಿದ್ದು, ಬಳಿಕ ಮೃತ ದೇಹಗಳನ್ನು ವೈದೇಹಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ  ಬೌರಿಂಗ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 

ಅಕ್ರಮ ಅನುಮತಿ: ಪ್ರೇಮಾ ಪ್ಯಾರಾಡೇಸ್‌ನ ನೆಲಮಳಿಗೆಯಲ್ಲಿರುವ ಪಾರ್ಕಿಂಗ್‌ ಸ್ಥಳದಲ್ಲಿ ಯವ್‌ ಲೋಕ್‌ ಎಂಬ ಹೋಟೆಲ್‌ಗೆ ಬಿಬಿಎಂಪಿ ಅಧಿಕಾರಿಗಳು ಕಾನೂನು ಬಾಹಿರವಾಗಿ ಅನುಮತಿ ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ನಿಯಮದ ಪ್ರಕಾರ ಪಾರ್ಕಿಂಗ್‌ ಸ್ಥಳದಲ್ಲಿ ಹೋಟೆಲ್‌ಗೆ ಅನುಮತಿ ನೀಡುವಂತಿಲ್ಲ. ಅಧಿಕಾರಿಗಳು ಮೊದಲ ಮಹಡಿ ಎಂದು ದಾಖಲೆ ತೋರಿಸಿ ಅನುಮತಿ ನೀಡಿದ್ದಾರೆ. 

ನೆಲಮಾಳಿಗೆಯಾದ್ದರಿಂದ ತ್ಯಾಜ್ಯ ನೀರು ಹೊರಹೋಗಲು ಯಾವುದೇ ಮಾರ್ಗವಿಲ್ಲ. ಹೀಗಾಗಿ ಹೋಟೆಲ್‌ ಮಾಲೀಕ ಅವಿನಾಶ್‌ ಗುಪ್ತ ಪಾರ್ಕಿಂಗ್‌ ಸ್ಥಳದಲ್ಲೇ 10 ಅಡಿ ಆಳದ ಗುಂಡಿ ತೆಗೆಸಿ, ಇದರಲ್ಲಿ ತುಂಬಿಕೊಳ್ಳುವ ತ್ಯಾಜ್ಯನೀರನ್ನು ಪಂಪ್‌ ಮೂಲಕ ಹೊರಕ್ಕೆ ಹಾಕಿಸುತ್ತಾರೆ. ಕಳೆದೆರಡು ದಿನಗಳಿಂದ ಈ ಗುಂಡಿಯಲ್ಲಿ ತ್ಯಾಜ್ಯ ನೀರು ಶೇಖರಣೆಗೊಂಡಿದ್ದು, ದುರ್ವಾಸನೆ ಬರುತ್ತಿತ್ತು. ಹೀಗಾಗಿ ಕಟ್ಟಡ ನಿರ್ವಾಹಕ ವೆಂಕಟೆಶ್‌ಗೆ ಸ್ವತ್ಛತೆಗೆ ಸೂಚಿಸಿದ್ದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್‌ ಅಹ್ಮದ್‌ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ವರ್ಷ ಐದು ಸಾವು ಜ.7ರಂದು ಎಚ್‌ಎಸ್‌ ಆರ್‌ ಲೇಔಟ್‌ ಬಳಿಯ ಬಂಡೆಪಾಳ್ಯದ ಸೋಮಸಂದ್ರಪಾಳ್ಯದ ಎನ್‌.ಡಿ.ಸಫ‌ಲ್‌ ಅಪಾರ್ಟ್‌ಮೆಂಟ್‌ನ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ಸ್ವತ್ಛಗೊಳಿಸುವ ಸರ್ಜಾಪುರ ಮುಖ್ಯರಸ್ತೆಯ ಕೈಗೊಂಡನಹಳ್ಳಿ ನಿವಾಸಿ  ರಾಯಣಸ್ವಾಮಿ (40), ಸೋಮಸಂದ್ರ ಪಾಳ್ಯದ ಶ್ರೀನಿವಾಸ್‌ (38) ಹಾಗೂ ಮಹದೇವ ಗೌಡ (37) ಎಂಬುವರು ಉಸಿರುಗಟ್ಟಿ ಸಾವನ್ನಪ್ಪಿ ದ್ದರು. ಇದೀಗ ಮತ್ತೆ ಮ್ಯಾನ್‌ಹೋಲ್‌ ಸ್ವತ್ಛಗೊಳಿಸಲು ತೆರಳಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಪ್ರಸಕ್ತ ವರ್ಷದಲ್ಲಿ 5 ಕಾರ್ಮಿಕರು ಸಾವನ್ನಪ್ಪಿದ್ದಾರೆ

ಯವಲೋಕ್‌ ಹೋಟೆಲ್‌ನ ತ್ಯಾಜ್ಯ ನೀರು ಸಂಗ್ರಹಣೆಯಾಗಿದ್ದ ಗುಂಡಿ ಸ್ವತ್ಛತೆಗೆ ಹೋಗಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಸಂಬಂಧ ಹೋಟೆಲ್‌ನ ವ್ಯವಸ್ಥಾಪಕ ಆಯುಷ್‌ ಗುಪ್ತ ಮತ್ತು ಕಟ್ಟಡ ನಿರ್ವಾಹಕ ವೆಂಕಟೇಶ್‌ನನ್ನು ಬಂಧಿಸಲಾಗಿದೆ. ಹಾಗೆಯೇ
ಅಕ್ರಮವಾಗಿ ಹೋಟೆಲ್‌ ನಡೆಸಲು ಅನುಮತಿ ನೀಡಿದಕ್ಕೆ ಬಿಬಿಎಂಪಿ ಆರೋಗ್ಯಾಧಿಕಾರಿ ದೇವರಾಜ್‌ ಅವರನ್ನು ವಿಚಾರಣೆಗೊಳ ಪಡಿಸಲಾಗಿದೆ. 
●ಅಬ್ದುಲ್‌ ಅಹ್ಮದ್‌ ಡಿಸಿಪಿ ವೈಟ್‌ಫೀಲ್ಡ್‌ ವಿಭಾಗ

ಮ್ಯಾನ್‌ಹೋಲ್‌ನಲ್ಲಿ ಮೃತಪಟ್ಟವರು
2008-09-ನ.14 ಯಲಹಂಕ ನ್ಯೂಟೌನ್‌ 3 ಸಾವು
2009-10-ಮೇ 9 ಪೀಣ್ಯ 2ನೇ ಹಂತ 3 ಸಾವು
2012-13-ಜುಲೈ 14 ಅರಕರೆ 2 ಸಾವು
2013-14- ಜ.18 ಕೆ.ಪಿ.ಅಗ್ರಹಾರ 2
2014-15-ಆ.30 ಮಹದೇವಪುರ 1 ಸಾವು
2014-15-ಸೆ.24 ನಾಗವಾರ 2 ಸಾವು
2015-16- ಜುಲೈ 5 ಯಲಹಂಕ 2 ಸಾವು
2015-16- ಆ.18 ಜಯಮಹಲ್‌ 2 ಸಾವು
2015-16- ಅ.19 ಗೊರಗುಂಟೆ ಪಾಳ್ಯ 2 ಸಾವು
2016-17-ಮಾ.7 ಕಗ್ಗದಾಸನಪುರ 3 ಸಾವು
ಎಸ್‌ಟಿಪಿಗೆ ಇಳಿದು ಸಾವನ್ನಪ್ಪಿದವರು
2008-09-ಹೆಣ್ಣೂರು ನ.14 2 ಸಾವು
2013-14 ಅ.25 ಪೀಣ್ಯ 2 ಸಾವು
2015-16 ಜಲೈ 5 ಎಲೆಕ್ಟ್ರಾನಿಕ್‌ ಸಿಟಿ 2 ಸಾವು
2016-17 ಅ.18 ಯಶವಂತಪುರ 2 ಸಾವು
2016-17 ನ.18 ವೈಟ್‌ಫಿಲ್ಡ್‌ 1 ಸಾವು

ಟಾಪ್ ನ್ಯೂಸ್

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.