ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನ ಬಳಕೆಗೆ ಆದ್ಯತೆ


Team Udayavani, Feb 20, 2018, 11:45 AM IST

parisara.jpg

ಬೆಂಗಳೂರು: “ದೇಶದ ಎಲೆಕ್ಟ್ರಿಕ್‌ ವಾಹನಗಳ ರಾಜಧಾನಿ’ ಎಂಬ ಹೆಗ್ಗಳಿಕೆ ಪಡೆಯಲು ರಾಜ್ಯ ಸರ್ಕಾರ ಈಗಾಗಲೇ ಎಲೆಕ್ಟ್ರಿಕ್‌ ವಾಹನ ನೀತಿ ಜಾರಿಗೊಳಿಸಿರುವ ಬೆನ್ನಲ್ಲೇ ಬೆಸ್ಕಾಂ ಕಾರ್ಪೋರೇಟ್‌ ಕಚೇರಿ ಆವರಣದಲ್ಲಿ ರಿಚಾರ್ಜ್‌ ಕೇಂದ್ರವನ್ನು ಸೋಮವಾರ ಆರಂಭಿಸಿದೆ.

ನಗರದ ಕೆ.ಆರ್‌.ವೃತ್ತದಲ್ಲಿನ ಬೆಸ್ಕಾಂ ಕಾರ್ಪೋರೇಟ್‌ ಕಚೇರಿಯಲ್ಲಿ ಎರಡು ಚಾರ್ಜಿಂಗ್‌ ಸಾಧನವಿರುವ ಕೇಂದ್ರವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಿದರು. ಕೇಂದ್ರ ಉದ್ಘಾಟನಾ ಸಮಾರಂಭದ ವೇಳೆ ಮಾತನಾಡಿದ ಅವರು, ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕೇಂದ್ರದಲ್ಲಿ ಸಾರ್ವಜನಿಕರು ತಮ್ಮ ಎಲೆಕ್ಟ್ರಿಕ್‌ ವಾಹನವನ್ನು ಕಡಿಮೆ ದರದಲ್ಲಿ ರಿಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.

ಬೆಸ್ಕಾಂ ಕಚೇರಿ ಆವರಣದಲ್ಲೇ ರಿಚಾರ್ಜ್‌ ಕೇಂದ್ರ ಆರಂಭಿಸಿರುವುದರಿಂದ ರಿಯಾಯ್ತಿ ದರದಲ್ಲಿ ಚಾರ್ಜಿಂಗ್‌ ಸೇವೆ ಸಿಗಲಿದೆ. ಇನ್ನೂ ರಿಯಾಯ್ತಿ ನೀಡುವಂತೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗವನ್ನು ಕೋರಲಾಗುವುದು ಎಂದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಬೆಸ್ಕಾಂ ವ್ಯಾಪ್ತಿಯಲ್ಲಿ ಸದ್ಯ 1,500 ಪೆಟ್ರೋಲ್‌, ಡೀಸೆಲ್‌ ಕಾರು ಬಳಸಲಾಗುತ್ತಿದೆ. ಈ ಕಾರುಗಳನ್ನು ಎಲೆಕ್ಟ್ರಿಕ್‌ ವಾಹನಗಳಿಗೆ ಬದಲಾಯಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾಮರ್ಥ್ಯ: ಸೆಮಾ ಕನೆಕ್ಟ್ ಹಾಗೂ ಆರ್‌ಆರ್‌ಟಿ ಎಲೆಕ್ಟ್ರೊ ಪವರ್‌ ಕಂಪನಿಗಳು ಎರಡು ಕಡೆ ಅಳವಡಿಸಿರುವ ಯಂತ್ರಗಳು 15 ಕೆ.ವಿ. ಸಾಮರ್ಥಯ ಹೊಂದಿವೆ. ಎಲೆಕ್ಟ್ರಿಕ್‌ ಕಾರು ನಿರಂತರ 1 ಗಂಟೆ 20 ನಿಮಿಷ ಚಾರ್ಜ್‌ ಮಾಡಿದರೆ 125 ಕಿ.ಮೀ. ಕ್ರಮಿಸಬಹುದು. ಈ ರೀತಿ ನಿತ್ಯ 20 ಕಾರು ಚಾರ್ಜ್‌ ಮಾಡಬಹುದು.

ಎಲೆಕ್ಟ್ರಿಕ್‌ ವಾಹನವಿರುವವರು ಮನೆಯಲ್ಲಿ ಚಾರ್ಜ್‌ ಮಾಡಿದರೆ ಪ್ರತಿ ಯೂನಿಟ್‌ಗೆ 6ರಿಂದ 7 ರೂ. ಭರಿಸಬೇಕಾಗುತ್ತದೆ. ಆದರೆ ಈ ಕೇಂದ್ರದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆವರೆಗೆ ಚಾರ್ಚ್‌ ಮಾಡಿಕೊಂಡರೆ ಪ್ರತಿ ಯೂನಿಟ್‌ಗೆ 4.85 ರೂ. ಹಾಗೂ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಚಾರ್ಜ್‌ ಮಾಡಿದರೆ 3.85 ರೂ. ಪಾವತಿಸಿದರೆ ಸಾಕು. ಒಂದು ಯಂತ್ರ ಅಳವಡಿಕೆಗೆ 5 ಲಕ್ಷ ರೂ. ವೆಚ್ಚವಾಗಲಿದೆ.

ಹೊರ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಕಾರು: ಬೆಸ್ಕಾಂ ಸದ್ಯ ತನ್ನ ದಿನನಿತ್ಯದ ಕಾರ್ಯ ನಿರ್ವಹಣೆ, ಸೇವೆಗೆ ಬಳಸುತ್ತಿರುವ 1,500 ಕಾರುಗಳಿಗೆ ಬದಲಾಗಿ ಎಲೆಕ್ಟ್ರಿಕ್‌ ಕಾರು ಬಳಸಲು ಗಂಭೀರ ಚಿಂತನೆ ನಡೆಸಿದೆ. ಅದರ ಭಾಗವಾಗಿ ಐದು ಕಾರು ಪಡೆಯಲಾಗಿದೆ. ಭಾಗೀರಥಿ ಕಂಪನಿಯು ಹೊರಗುತ್ತಿಗೆಯಡಿ ಎಲೆಕ್ಟ್ರಿಕ್‌ ಕಾರು ಸೇವೆ ಒದಗಿಸಲಿದೆ.

ಕೆಲವೇ ತಿಂಗಳಲ್ಲಿ 100 ಕಾರುಗಳನ್ನು ಎಲೆಕ್ಟ್ರಿಕ್‌ ಕಾರುಗಳಿಗೆ ಬದಲಾಯಿಸಲು ಸಿದ್ಧತೆ ನಡೆಸಿದೆ. ಡೀಸೆಲ್‌ ಕಾರಿನಲ್ಲಿ ಒಂದು ಕಿ.ಮೀ. ಕ್ರಮಿಸಲು 4 ರೂ. ಮೌಲ್ಯದ ಡೀಸೆಲ್‌ ಬಳಕೆಯಾಗುತ್ತದೆ. ಎಲೆಕ್ಟ್ರಿಕ್‌ ಕಾರಿನಲ್ಲಿ ಒಂದು ಕಿ.ಮೀ. ಕ್ರಮಿಸಲು ಬಳಕೆಯಾಗುವ ವಿದ್ಯುತ್‌ಗೆ 1 ರೂ. ಮಾತ್ರ ಖರ್ಚಾಗುತ್ತದೆ. 125 ಕಿ.ಮೀ. ದೂರ ಕ್ರಮಿಸಲು 75 ರೂ. ಖರ್ಚಾಗಲಿದೆ.

ಬೆಸ್ಕಾಂ ಹೊರ ಗುತ್ತಿಗೆಯಡಿ ಪಡೆಯುತ್ತಿರುವ ಐದು ಕಾರುಗಳಲ್ಲಿ ಮಹಿಳಾ ಚಾಲಕಿಯರೂ ಇದ್ದಾರೆ. ಭಾಗೀರಥಿ ಕಂಪನಿಯಲ್ಲಿ 500 ಮಹಿಳಾ ಚಾಲಕಿಯರಿದ್ದು, ಬೆಸ್ಕಾಂ ಕಂಪನಿಯ ಕಾರುಗಳ ಚಾಲನೆಗೆ 50 ಮಂದಿಗೆ ತರಬೇತಿ ನೀಡಿದೆ.

15 ವರ್ಷದಿಂದ ಕಾರು ಚಾಲಕಿಯಾಗಿದ್ದೇನೆ. ಈ ಹಿಂದೆ ಕೆಲ ಕಂಪನಿಗಳ ಟ್ಯಾಕ್ಸಿ, ಶಾಲಾ ಬಸ್‌ ಚಾಲಕಿಯಾಗಿ ಕಾರ್ಯ ನಿರ್ವಹಿಸಿದ್ದೆ. ಎಲೆಕ್ಟ್ರಿಕ್‌ ಕಾರಿನಲ್ಲಿ ಪೆಟ್ರೋಲ್‌ ಕಾರು ಚಾಲನೆಗಿಂತ ಹೆಚ್ಚು ಸುಲಭವೆನಿಸುವ ಲಕ್ಷಣಗಳಿವೆ. ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಕೆಲಸ ಮಾಡಲಿದ್ದೇನೆ 
-ಮಂಜುಳಾ, ಹೆಬ್ಟಾಳ ನಿವಾಸಿ 

ಬೆಸ್ಕಾಂನ 10 ಕಚೇರಿಯಲ್ಲಿ ಸ್ಥಾಪನೆ: ನಗರ ವ್ಯಾಪ್ತಿಯ 10 ಕಚೇರಿಗಳಲ್ಲಿ ಇದೇ ರೀತಿಯ ಚಾರ್ಜಿಂಗ್‌ ಕೇಂದ್ರ ತೆರೆಯಲು ಬೆಸ್ಕಾಂ ನಿರ್ಧರಿಸಿದೆ. ಯಲಹಂಕದ ದೊಡ್ಡಬಳ್ಳಾಪುರ ರಸ್ತೆ, ಜಾಲಹಳ್ಳಿ ಬಳಿಯ ಗೆಳೆಯರ ಬಳಗ ಲೇಔಟ್‌, ಬನಶಂಕರಿ 2ನೇ ಹಂತದ 22ನೇ ಮುಖ್ಯರಸ್ತೆ, ಕುಮಾರಸ್ವಾಮಿ ಲೇಔಟ್‌ 1ನೇ ಹಂತ, ಜೆ.ಪಿ.ನಗರ 1ನೇ ಹಂತ, ಪಾಂಡುರಂಗ ನಗರ,

ವೈಟ್‌ಫೀಲ್ಡ್‌ ಸಮೀಪದ ಇಮ್ಮಡಿಹಳ್ಳಿ, ಎಚ್‌ಎಎಲ್‌ 2ನೇ ಹಂತದ 2ನೇ ಅಡ್ಡರಸ್ತೆ, ಪಿಳ್ಳಣ್ಣ ಗಾರ್ಡನ್‌ ರಸ್ತೆ, ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ ಎರಡು ಕೇಂದ್ರ ತೆರೆಯಲು ಬೆಸ್ಕಾಂ ಸಿದ್ಧತೆ ನಡೆಸಿದೆ. ಬಿಎಂಆರ್‌ಸಿಎಲ್‌ ಹಾಗೂ ಬಿಬಿಎಂಪಿಗೆ ಸೇರಿದ ಸುಮಾರು 300 ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿಯೂ ಈ ರೀತಿಯ ಚಾರ್ಜಿಂಗ್‌ ಕೇಂದ್ರ ತೆರೆಯಲು ಚರ್ಚೆ ನಡೆದಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.