ಪೊಲೀಸರು ಒತ್ತಡಕ್ಕೆ ಮಣಿಯಬಾರದು
Team Udayavani, Feb 22, 2018, 11:09 AM IST
ಬೆಂಗಳೂರು: ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯಲ್ಲೂ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸಬಾರದು
ಎಂದು ನಿವೃತ್ತ ಐಪಿಎಸ್ ಅಧಿಕಾರಿ ಗರುಡಾಚಾರ್ ಅವರು ಸಲಹೆ ನೀಡಿದ್ದಾರೆ.
ಮಣಿಪಾಲ್ ಸೆಂಟರ್ನಲ್ಲಿ ಇರುವ “ಉದಯವಾಣಿ’ ಕಚೇರಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ಭಾರತೀಯ ದಂಡ ಸಂಹಿತೆ, ಸಿಆರ್ಪಿಸಿ, ಪೊಲೀಸ್ ಕಾಯ್ದೆ, ಪೊಲೀಸ್ ಮ್ಯಾನ್ಯುವಲ್, ಹೈಕೋರ್ಟ್,
ಸುಪ್ರೀಂ ಕೋರ್ಟ್ನ ಪ್ರಮುಖ ಆದೇಶಗಳನ್ನು ಓದಿಕೊಂಡಿರಬೇಕು. ಕಾನೂನಿನ ಅರಿವಿದ್ದಾಗ ಯಾರ ಒತ್ತಡಕ್ಕೂ ಮಣಿಯುವ ಅಗತ್ಯ ವಿರುವುದಿಲ್ಲ ಎಂದು ಹೇಳಿದರು.
ಡಿಮೋಷನ್ಗೆ ಸೂಕ್ತ ಕಾರಣ: ಹೆಚ್ಚೆಂದರೆ ವರ್ಗಾವಣೆ, ಡಿಮೋಷನ್ ಮಾಡಿಸಬಹುದು. ಇದಕ್ಕೂ ಕಾರಣ ಕೊಡಲೇಬೇಕು ಇದನ್ನರಿತು ಸೇವೆ ಸಲ್ಲಿಸಬೇಕು ಎಂದರು.
ಭಾರತ ನಂ.1: ಕಷ್ಟ ಹೇಳಿ ಬರುವವರನ್ನು ಗೌರವರಿಂದ ನೋಡುವ ಮನೋಭಾವ ಬಂದಾಗ ಭಾರತ ಪ್ರಪಂಚದಲ್ಲೇ ನಂ.1 ಆಗಲಿದೆ ಎಂದರು. ನಿವೃತ್ತ ಡಿಸಿಪಿ ರಮೇಶ್ ಬಾಬು ಉಪಸ್ಥಿತರಿದ್ದರು. ಅಪರಾಧಿಗಳಿಗೆ ಪೊಲೀಸ್ ವ್ಯವಸ್ಥೆ,
ಕಾನೂನಿನ ಹಿನ್ನೆಲೆ, ನ್ಯಾಯಾಲಯ ಹಾಗೂ ಶಿಕ್ಷೆಯ ಬಗ್ಗೆ ಅರಿವಿರುವುದಿಲ್ಲ. ಆದರೆ, ಪೊಲೀಸ್ ಅಧಿಕಾರಿಗಳಿಗೆ ಎಲ್ಲಾ
ರೀತಿಯ ಕಟ್ಟುಪಾಡುಗಳು ಇರುತ್ತದೆ. ಪರಿಸ್ಥಿತಿ ನಿರ್ವಹಣೆ, ಸೂಕ್ಷ್ಮಾತಿ ಸೂಕ್ಷ್ಮ ಪ್ರಕರಣಗಳನ್ನು ಹೇಗೆ ಭೇದಿಸುತ್ತೇವೆ
ಎನ್ನುವುದು ಮುಖ್ಯ.
ಗರುಡಾಚಾರ್, ನಿವೃತ್ತ ಐಪಿಎಸ್ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು