ಕೆಸಿಸಿ ಟಿ10 ಲೀಗ್ಗೆ ಆಟಗಾರರ ಆಯ್ಕೆ
Team Udayavani, Mar 17, 2018, 11:27 AM IST
ಬೆಂಗಳೂರು: ಸುದೀಪ್ ನೇತೃತ್ವದಲ್ಲಿ ಶುರುವಾಗಿರುವ “ಕೆಸಿಸಿ ಟಿ-10′ (ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್) ಕ್ರಿಕೆಟ್ ಲೀಗ್ಗೆ ಶುಕ್ರವಾರ ಆರು ತಂಡಗಳಿಗೆ ಆಟಗಾರರ ಆಯ್ಕೆ ಮಾಡಲಾಯಿತು. ಅರಮನೆ ಮೈದಾನದಲ್ಲಿ ಲಕ್ಕಿ ಡ್ರಾ ಮೂಲಕ ಆಟಗಾರರನ್ನು ಆಯ್ಕೆ ಮಾಡಿದ್ದು ವಿಶೇಷ.
ಆರು ತಂಡಗಳಿಗೂ ಕೆಪಿಎಲ್ ಮತ್ತು ಸಿಸಿಎಲ್ ಆಟಗಾರರನ್ನೂ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ. ಗೌತಮ್, ನಿಹಾಲ್ ಉಲ್ಲಾಳ್, ರೋಹಿತ್ ಗೌಡ, ಸ್ಟಾಲಿನ್, ಶರತ್, ರಕ್ಷಿತ್, ಕೆ.ಸಿ.ಕರಿಯಪ್ಪ, ರಿತೇಶ್ ಭಟ್ಕಳ್, ಶಬನ್ ಹೆಗ್ಡೆ, ಕಿಶೋರ್ ಕಾಮತ್, ರಜತ್ ಹೆಗಡೆ ಮತ್ತು ಪ್ರಶಾಂತ್ ಇವರು “ಕೆಸಿಸಿ ಟಿ-10′ ಲೀಗ್ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.
ಇವರೊಂದಿಗೆ ಆರು ತಂಡದಲ್ಲೂ ಒಬ್ಬೊಬ್ಬ ಸ್ಟಾರ್ ನಟರು ಆಡುತ್ತಿರುವುದು ವಿಶೇಷ. ಈ ಆರು ತಂಡಗಳಲ್ಲಿ ಪುನೀತ್ರಾಜ್ಕುಮಾರ್, ಶಿವರಾಜಕುಮಾರ್, ಸುದೀಪ್, ರಕ್ಷಿತ್ಶೆಟ್ಟಿ, ಯಶ್, ದಿಗಂತ್ ಅವರುಗಳು ಆಯ್ಕೆಯಾಗಿದ್ದಾರೆ. ಈ ಸ್ಟಾರ್ ನಟರನ್ನು ಸಹ ಲಕ್ಕಿ ಡ್ರಾ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ಕುಂಬ್ಳೆ ಅವರು ಆಯ್ಕೆ ಮಾಡಿ, ಶುಭಹಾರೈಸಿದರು.
ಈ ಕ್ರಿಕೆಟ್ಲೀಗ್ನ ಆರು ತಂಡಗಳಿಗೆ ಇಂದ್ರಜಿತ್ ಲಂಕೇಶ್, ಜಾಕ್ಮಂಜು, ನಂದಕಿಶೋರ್, ಸದಾಶಿವ ಶೆಣೈ, ಕೆ.ಪಿ.ಶ್ರೀಕಾಂತ್, ಕೃಷ್ಣ ನಾಯಕರಾಗಿದ್ದು, ಈ ತಂಡದಲ್ಲಿ ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡುತ್ತಿರುವ ಅದರಲ್ಲೂ ಕ್ರಿಕೆಟ್ನಲ್ಲಿ ಆಸಕ್ತಿ ಇರುವವರು ಆಟವಾಡಲಿದ್ದಾರೆ. ಈ ಕ್ರಿಕೆಟ್ ಲೀಗ್ಗೆ ನಡೆದ ಆಯ್ಕೆ ವೇಳೆ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಹಾಗು ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಇದೇ ವೇಳೆ ತಂಡಗಳ ಜೆರ್ಸಿ ಕೂಡ ಬಿಡುಗಡೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!