ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ನೇಣಿಗೆ ಶರಣು
Team Udayavani, Apr 6, 2018, 11:41 AM IST
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯೊಬ್ಬ ನೇಣಿಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ.
ಮಾಸ್ತಿ ಕುಮಾರ್(32) ಎಂಬಾತ ಜೈಲಿನ ಎ ಬ್ಯಾರಕ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೈದಿ. ಶಿವಮೊಗ್ಗ ಮೂಲದವನಾದ ಈತ 10 ತಿಂಗಳ ಹಿಂದೆ ಸಜಾ ಬಂದಿಯಾಗಿ ಜೈಲು ಸೇರಿದ್ದ ಎಂದು ತಿಳಿದು ಬಂದಿದೆ.
ಮಾಸ್ತಿ ಕುಮಾರ್ ಮೃತ ದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.