ಸದೃಢ ಭಾರತಕ್ಕೆ ಯೋಗ ಸಂದೇಶ
Team Udayavani, Jun 24, 2018, 11:05 AM IST
ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ರಾಜಧಾನಿ ತುಂಬೆಲ್ಲಾ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ ಮುಗಿಲು ಮುಟ್ಟಿತ್ತು. ಅಂಥದ್ದೇ ಸಂಭ್ರಮದ ವಾತಾವರಣ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಶನಿವಾರ ಮತ್ತೂಮ್ಮೆ ಕಂಡುಬಂತು.
ಅದಮ್ಯ ಚೇತನ ಸಂಸ್ಥೆ ಹಾಗೂ ಬಿಎನ್ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಶನಿವಾರ ಕಿತ್ತೂರು ರಾಣಿ ಚೆನ್ಮಮ್ಮ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಹಮ್ಮಿಕೊಳ್ಳಲಾಗಿತ್ತು. 50 ಶಾಲೆಗಳ 5 ಸಾವಿರ ವಿದ್ಯಾರ್ಥಿಗಳು ಯೋಗಾಸನ ಪ್ರದರ್ಶಿಸಿ “ಸದೃಢ ಭಾರತಕ್ಕೆ ಯೋಗ’ ಎಂಬ ಸಂದೇಶ ಸಾರಿದರು.
ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಭಾಷಾಣಕಾರ ಚಕ್ರವರ್ತಿ ಸೂಲಿಬೆಲೆ ಮತ್ತಿತರರು ಯೋಗಾಸನಗಳನ್ನು ಮಾಡಿದರು. ಪವನಮುಕ್ತಾಸನ, ಭುಜಂಗಾಸನ, ಮಕರಾಸನ, ವಕ್ರಾಸನ ಸೇರಿದಂತೆ ಒಟ್ಟು 15 ಆಸನಗಳನ್ನು ಮಾಡಿದರು. ನಾಡಿಶುದ್ಧಿ ಪ್ರಾಣಾಯಮ, ಬ್ರಾಹ್ಮರಿ ಪ್ರಾಣಾಯಮ ಕೂಡ ಮಾಡಲಾಯಿತು.
ಯೋಗಾಸನ ಪ್ರದರ್ಶನಕ್ಕೂ ಮುನ್ನ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು 60 ವರ್ಷ ದಾಟಿದ ನಂತರ ಯೋಗಾಸನ ಮಾಡುವುದಲ್ಲ. ಯೋಗ ಆರೋಗ್ಯಕ್ಕಿಂತಲೂ ವಿಸ್ತಾರವಾದುದು. ದೇಶದ ಅತಿದೊಡ್ಡ ಕಾಯಿಲೆಯಾಗಿರುವ ಖನ್ನತೆಗೂ ಯೋಗ ದಿವ್ಯಔಷಧ. ಮನಸನ್ನು ಬಲಿಷ್ಟಗೊಳಿಸಿ ಎಲ್ಲ ಅಸಾಧ್ಯಗಳನ್ನು ಸಾಧ್ಯವಾಗಿಸುವುದು ಯೋಗದ ಶಕ್ತಿ ಎಂದು ಹೇಳಿದರು.
5 ವರ್ಷಗಳ ಹಿಂದೆ ಯೋಗ ಕೇಸರೀಕರಣದ ಪ್ರತೀಕ ಎಂದು ಬುದ್ಧಿ ಜೀವಿಗಳು ಲೇವಡಿ ಮಾಡಿದ್ದರು. ಆದರೆ, ಇಂದು ಇಡೀ ವಿಶ್ವವೇ ಆರೋಗ್ಯಕ್ಕೆ ಯೋಗ ಮುಖ್ಯವೆಂದು ಒಪ್ಪಿಕೊಂಡಿದೆ ಎನ್ನುವುದಾದರೆ ಅದಕ್ಕೆ ಎಷ್ಟೊಂದು ಗೌರವವಿದೆ ಎಂಬುದು ಸಾಬೀತಾಗಿದೆ ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಜನಪ್ರಿಯಗೊಳಿಸಿದರು. ಇಂದು ವಿಶ್ವದ 176 ದೇಶಗಳು ಯೋಗವನ್ನು ಒಪ್ಪಿಕೊಂಡು ವಿಶ್ವ ಯೋಗ ದಿನ ಆಚರಿಸುತ್ತಿವೆ. ಎಲ್ಲ ಜೀವನಶೈಲಿಗಳಲ್ಲಿನ ಸಮಸ್ಯೆಗಳಿಗೂ ಯೋಗ ಪರಿಹಾರ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!