ಎಚ್ಡಿಕೆ ಅಭಿಮಾನಿ ಕಿಸೆಗೆ ಕತ್ತರಿ: ಬಂಧನ
Team Udayavani, Jul 21, 2018, 1:06 PM IST
ಶ್ರೀರಂಗಪಟ್ಟಣ: ಕೃಷ್ಣರಾಜ ಸಾಗರಕ್ಕೆ ಬಾಗಿನ ಅರ್ಪಿಸಲು ಬಂದ ಸಿಎಂ ಕುಮಾರಸ್ವಾಮಿ ಅಭಿಮಾನಿಯೊಬ್ಬನ ಕಿಸೆಯಿಂದ ಹಣ ಕದ್ದು ಆತನ ಕೈಗೇ ಸಿಕ್ಕಿಬಿದ್ದ ವ್ಯಕ್ತಿ ಪೊಲೀಸರ ಅತಿಥಿಯಾದ ಘಟನೆ ಕೆಆರ್ಎಸ್ನಲ್ಲಿ ನಡೆದಿದೆ.
ಎಚ್.ಡಿ.ಕೋಟೆಯ ಶಿವಣ್ಣ ಎಂಬ ಜೆಡಿಎಸ್ ಕಾರ್ಯಕರ್ತ ಕೆಆರ್ಎಸ್ ನಲ್ಲಿ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿ ಕುಮಾರಸ್ವಾಮಿ ನೋಡಲು ಆಗಮಿಸಿದ್ದ. ಶಿವಣ್ಣ ಯಾವುದೋ ಸ್ವಂತ ಕಾರ್ಯಮುಗಿಸಿ ಜೇಬಿನಲ್ಲಿ 10 ಸಾವಿರ ಹಣ ಇಟ್ಟುಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದ. ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರನ್ನು ನೋಡಿ ಹೋಗಲು ಆಗಮಿಸಿ ವೇಳೆ ಜನರ
ಗುಂಪಿನೊಳಗೆ ನುಸುಳಿಕೊಂಡು ಕುಮಾರಸ್ವಾಮಿ ಅವರನ್ನು ನೋಡುತ್ತಾ ನಿಂತಿದ್ದರು. ಶಿವಣ್ಣ ಜೇಬಿನಲ್ಲಿದ್ದ ಹಣ ದಪ್ಪಗೆ ಕಾಣುತ್ತಿದ್ದು, ಒಂದು ಕೈಯನ್ನು ಅದರ ಮೇಲೆ ಇಟ್ಟುಕೊಂಡೆ ಜನಜಂಗುಳಿಯಲ್ಲಿ ನಿಂತಿದ್ದ ವೇಳೆಯಲ್ಲಿ ಇದನ್ನೇ ಹೊಂಚುಹಾಕಿದ್ದ 55 ವರ್ಷದ ವ್ಯಕ್ತಿಯೊಬ್ಬ ಮೆತ್ತಗೆ ಶಿವಣ್ಣನ ಜೇಬಿಗೆ ಕೈ ಹಾಕಿ ಹಣ ಎಗರಿಸಿ ಕೈಯಲ್ಲಿ ಹಣ ಹಿಡಿದಿದ್ದಾನೆ. ತಕ್ಷಣ ಆತನ ಕೈ ಮತ್ತು ಹಣದ ಸಹಿತವೇ ಕೈ ಹಿಡಿದು ಎರಡು ಗೂಸಾ ಶಿವಣ್ಣ ಕೊಟ್ಟಿದ್ದಾನೆ. ಆತ ಅತ್ತಿತ್ತ ಓಡಿ ಹೋಗಲು ಮುಂದಾದಾಗ ಕತ್ತಿನ ಪಟ್ಟಿ ಹಿಡಿದು ಹಣ ಕಿತ್ತುಕೊಂಡು ಪೊಲೀಸರನ್ನು ಕೂಗಿದ್ದಾನೆ. ನಂತರ ಅಕ್ಕ ಪಕ್ಕದಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ