ದಾಖಲೆ ನೀಡಲು 5 ಕೋಟಿ ಆಮಿಷ


Team Udayavani, Jul 22, 2018, 10:39 AM IST

blore-1.jpg

ಬೆಂಗಳೂರು: “ಬೌರಿಂಗ್‌ ಕ್ಲಬ್‌ ಲಾಕರ್‌ಗಳಲ್ಲಿ ಹಣ ದಾಖಲೆ ಸಿಕ್ಕ ಮಾಹಿತಿ ಲಭ್ಯವಾದ ಕೂಡಲೇ ಅವಿನಾಶ್‌, ಕ್ಲಬ್‌ನ ನನ್ನ ಕಚೇರಿಗೆ ಬಂದು, ಲಾಕರ್‌ಗಳಲ್ಲಿ ಸಿಕ್ಕಿರುವ ಹಣ, ಆಭರಣ, ಆಸ್ತಿ ಪತ್ರಗಳು ತನಗೆ ಸೇರಿದ್ದು ಎಂದು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಬೇಕಾದರೆ ಹಣ, ಆಭರಣ ನೀವೇ ಇಟ್ಟುಕೊಳ್ಳಿ, ಆಸ್ತಿ ದಾಖಲೆಗಳನ್ನು ಮಾತ್ರ ವಾಪಸ್‌ ಕೊಟ್ಟುಬಿಡಿ ಎಂದು ದುಂಬಾಲು ಬಿದ್ದಿದ್ದ’ ಎಂದು ಬೌರಿಂಗ್‌ ಕ್ಲಬ್‌ ಕಾರ್ಯದರ್ಶಿ ಶ್ರೀಕಾಂತ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿನಾಶ್‌ ತನ್ನ ಬಳಿ ಬಂದು ಹಣ ಇಟ್ಟುಕೊಂಡು ಆಸ್ತಿ ದಾಖಲೆ ಪತ್ರ ಕೊಡಿ ಎಂದಿದ್ದರು. ಆದರೆ, ಕಾನೂನು ಬಾಹಿರವಾಗಿ ಮುಚ್ಚಿಟ್ಟಿದ್ದು ತಪ್ಪು, ಈಗಾಗಲೇ ಐಟಿ ಒಪ್ಪಿಸಲಾಗಿದೆ. ನಿಮ್ಮ ಬಳಿ ದಾಖಲೆಗಳಿದ್ದರೆ ಐಟಿಗೆ ಸಲ್ಲಿಸಿ ಪಡೆದುಕೊಳ್ಳಿ ಎಂದು ಹೇಳಿಕಳುಹಿಸಿದೆ ಎಂದು ಹೇಳಿದರು. 

ಐದು ಕೋಟಿ ಆಫ‌ರ್‌: ಅದೇ ರೀತಿ ಜೂನ್‌ 19ರಂದು ಸಂಜೆ ಒಬ್ಬ ಮಧ್ಯವರ್ತಿ ಬಂದು, ತನ್ನ ಹೆಸರು ಮಾರ್ಟಿನ್‌ ಎಂದು ಪರಿಚಯಿಸಿಕೊಂಡ. ಔಪಚಾರಿಕ ಮಾತಿನ ಬಳಿಕ ಆತ ನೇರವಾಗಿ “ಈಗಲೇ ಐದು ಕೋಟಿ ರೂ. ನೀಡುತ್ತೇನೆ. ಲಾಕರ್‌ನಲ್ಲಿ ದೊರೆತಿರುವ ಆಸ್ತಿ ದಾಖಲೆಗಳಲ್ಲಿ, ಒಂದೇ ಒಂದು ದಾಖಲೆ ಕೊಡಿ’ ಎಂದು ಮನವಿ ಮಾಡಿದ. “ನನಗೆ ಹಣ ಬೇಡ ಐಟಿ ಅಧಿಕಾರಿಗಳಿಗೆ ಕೊಟ್ಟು ತೆಗೆದುಕೊಂಡು ಹೋಗು, ಅಧಿಕಾರಿಗಳನ್ನು ಕರೆಯುತ್ತೇನೆ ಎಂದ ಕೂಡಲೇ ಪರಾರಿಯಾಗಿಬಿಟ್ಟ’ ಎಂದು ತಿಳಿಸಿದರು. 

ದಾಖಲೆಗಳನ್ನು ನೀಡುವಂತೆ ಅವಿನಾಶ್‌ ಹಾಗೂ ಮಧ್ಯವರ್ತಿ ಕೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಾನು ಗಮನಿಸಿದ ಹಾಗೆ ಅದರಲ್ಲಿ ನಿತೇಶ್‌ ಎಸ್ಟೇಟ್‌ನ ಫೈಲ್‌ ಒಂದಿತ್ತು. ಜತೆಗೆ ಹಾಂಗ್‌ ಕಾಂಗ್‌ ಡಾಲರ್ ಎಕ್ಸ್‌ಚೇಂಜ್‌ ಕಂಪೆನಿ ಎಂಬ ಹೆಸರಿನ ಫೈಲ್‌, ಅಲ್ಲದೆ, ಹಲವು ಬಿಲ್ಡರ್‌ಗಳ ಒಂದು ಖಾಲಿ ಚೆಕ್‌ ಬುಕ್‌ ಇತ್ತು. ಹೀಗಾಗಿ ಆಸ್ತಿ ದಾಖಲೆಗಳ ಹಿಂದೆ ಪ್ರಭಾವಿಗಳು ಇರುವ ಶಂಕೆಯನ್ನೂ ತಳ್ಳಿ ಹಾಕುವಂತಿಲ್ಲ. 

ಅಲ್ಲದೆ, ದೂರವಾಣಿ ಕರೆಗಳು ಸಾಕಷ್ಟು ಬಂದಿದ್ದು, ಹಲವು ಕರೆಗಳನ್ನು ನಾನು ಸ್ವೀಕರಿಸಿಲ್ಲ. ದೇಶದ ಪ್ರಜೆಯಾಗಿ, ಅಕ್ರಮವಾಗಿ ಸಿಕ್ಕ ಹಣವನ್ನು ನಾನು ಸರ್ಕಾರಕ್ಕೆ ಒಪ್ಪಿಸಿದ್ದೇನೆ. ಮುಂದಿನದ್ದು ತನಿಖೆ ನಡೆಯಲಿ. ತನಿಖೆಗೆ ಸಂಪೂರ್ಣ ಸಹಕಾರ ನೀಡಿ ವಿಚಾರಣೆಗೆ ಕರೆದರೆ ಬರುವುದಾಗಿ ಐಟಿ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಶ್ರೀಕಾಂತ್‌ ಹೇಳಿದರು.

ಲಾಕರ್‌ ಹೊಂದಲು ಅನುಮತಿ ಪಡೆದಿದ್ದ ನಮಗೆ ಲಾಕರ್‌ ಸಿಗುತ್ತಿರಲಿಲ್ಲ. ಹೀಗಾಗಿ ಆಡಳಿತ ಮಂಡಳಿ ಗಮನಕ್ಕೆ ತಂದು ಅನಧಿಕೃತ ಲಾಕರ್‌ ಬಳಕೆ ಮಾಡುತ್ತಿರುವವರನ್ನು ಪತ್ತೆ ಮಾಡುವಂತೆ ತಿಳಿಸಿದ್ದೆವು. ಈ ವೇಳೆ ಬ್ಯಾಡ್ಮಿಂಟನ್‌ ವಿಭಾಗದಲ್ಲಿಯೂ ಹಲವು ಅನಧಿಕೃತ ಲಾಕರ್‌ಗಳಿದ್ದು, ಜೂ.19ರಂದು ಲಾಕರ್‌ಗಳನ್ನು ಒಡೆಯುವಾಗ ಹಣ ದೊರೆತಿದೆ. 
 ಸಂದೀಪ ಸುದರ್ಶನ್‌, ಬ್ಯಾಡ್ಮಿಂಟನ್‌ ವಿಭಾಗದ ಉಸ್ತುವಾರಿ

ಕೋಟಿ ಕೋಟಿ ಹಣದ ರಹಸ್ಯಬಯಲಾಗಿದ್ದು ಹೀಗೆ..
5187 ಸದಸ್ಯರನ್ನು ಹೊಂದಿರುವ ಕ್ಲಬ್‌ನಲ್ಲಿ 672 ಲಾಕರ್‌ಗಳಿವೆ. ಬಿಲಿಯರ್ಡ್ಸ್‌, ಬ್ಯಾಡ್ಮಿಂಟನ್‌ ಸೇರಿ ಐದು ವಿಭಾಗದ ಕ್ರೀಡಾ ಪಟುಗಳಿಗೆ ಪ್ರತ್ಯೇಕವಾಗಿ ಲಾಕರ್‌ ನೀಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಅನಧಿಕೃತವಾಗಿ ಕೆಲವರು ಲಾಕರ್‌ ಬಳಸುತ್ತಿದ್ದ ಕಾರಣ, ಅನುಮತಿ ಪಡೆದಿದ್ದ ಸದಸ್ಯರಿಗೆ ಲಾಕರ್‌ ಸಿಗುತ್ತಿರಲಿಲ್ಲ. ಹೀಗಾಗಿ ಪರಿಶೀಲನೆ ನಡೆಸಿದಾಗ ಒಟ್ಟು 127 ಲಾಕರ್‌ಗಳು ಅನಧಿಕೃತವಾಗಿ ಬಳಕೆಯಾಗುತ್ತಿರುವುದು ಗೊತ್ತಾಗಿತ್ತು. ಹೀಗಾಗಿ, ಎಲ್ಲ ಸದಸ್ಯರಿಗೂ ಅನಧಿಕೃತವಾಗಿ ಲಾಕರ್‌ ಬಳಸುತ್ತಿದ್ದರೆ ತೆರವು ಮಾಡಿ ಎಂದು ನೋಟಿಸ್‌ ನೀಡಿ, ಸಂದೇಶಗಳನ್ನು ಕಳುಹಿಸಲಾಗಿತ್ತು. ಇಲ್ಲದಿದ್ದರೆ ಜು.17ರಂದು ಲಾಕರ್‌ ಒಡೆಯುವುದಾಗಿ ಡೆಡ್‌ಲೈನ್‌ ಸಹ ನೀಡಲಾಗಿತ್ತು.

ಆದರೆ, ಬಹುತೇಕರು ಪ್ರತಿಕ್ರಿಯೆ ನೀಡಲೇ ಇಲ್ಲ. ಹೀಗಾಗಿ ಜು.17ರಿಂದ ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿಯೇ ಅನಧಿಕೃತ ಲಾಕರ್‌ಗಳ ಬೀಗ ಒಡೆದು ಕಾರ್ಯಾಚರಣೆ ನಡೆಸಲಾಯಿತು. ಜೂನ್‌ 19ರಂದು ಮಧ್ಯಾಹ್ನ 1.30ರ ಸುಮಾರಿಗೆ ಬ್ಯಾಡ್ಮಿಂಟನ್‌ ವಿಭಾಗದ ನಂ.69 , 71, 79 ಲಾಕರ್‌ಗಳನ್ನು ಒಡೆದಾಗ 6 ಲೆದರ್‌ ಬ್ಯಾಗ್‌ಗಳು ಕಂಡು ಬಂದವು. ಅವುಗಳಲ್ಲಿ ಕಂತೆ ಕಂತೆ ಹಣವಿರುವ ಬಗ್ಗೆ ಅನುಮಾನ ಬಂದ ಕಾರಣ ಕೇಂದ್ರ ವಿಭಾಗದ ಡಿಸಿಪಿ ಡಾ. ಚಂದ್ರಗುಪ್ತ ಅವರಿಗೆ ಮಾಹಿತಿ ನೀಡಲಾಯಿತು. 

ಡಿಸಿಪಿ ಸೇರಿದಂತೆ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ವಿಡಿಯೋ ಚಿತ್ರೀಕರಣದ ಮೂಲಕ ಬ್ಯಾಗ್‌ ತೆರೆದಾಗ 2000 ರೂ. ಮುಖಬೆಲೆಯ 18 ಬಂಡಲ್‌ಗ‌ಳಲ್ಲಿ ಹಣ, ವಜ್ರದ ಆಭರಣ, 10ರಿಂದ 100 ಗ್ರಾಂ. ತೂಕದವರೆಗಿನ ಚಿನ್ನದ ಬಿಸ್ಕೆಟ್‌ಗಳು, ಮತ್ತೂಂದು ಬ್ಯಾಗ್‌ನಲ್ಲಿ ಸುಮಾರು 15ಕ್ಕೂ ಹೆಚ್ಚು ಆಸ್ತಿ ದಾಖಲೆಗಳು ಕಂಡು ಬಂದವು. 

ಕೂಡಲೇ ಪೊಲೀಸರು ಅನಧಿಕೃತ ಹಣ ಪತ್ತೆ ಆಗಿರುವುದರಿಂದ ಐಟಿಗೆ ಮಾಹಿತಿ ನೀಡಲಾಯಿತು. ಜೂನ್‌ 20ರಂದು ಉನ್ನತ ಅಧಿಕಾರಿಗಳ ಐಟಿ ತಂಡ, ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಆಗಮಿಸಿ, ಹಣ, ಆಭರಣ, ಆಸ್ತಿ ಪತ್ರಗಳನ್ನು ಜಫಿ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿದೆ ಎಂದು ಪ್ರಕರಣ ಕುರಿತು ಕ್ಲಬ್‌ ಕಾರ್ಯದರ್ಶಿ ಶ್ರೀಕಾಂತ್‌ ವಿವರಿಸಿದರು.

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.