ಅಧಿಕಾರಿಗಳಿಂದ ಸಭೆಗೆ ಸುಳ್ಳು ಮಾಹಿತಿ: ಪದ್ಮನಾಭ ರೆಡ್ಡಿ ಆರೋಪ
Team Udayavani, Aug 14, 2018, 4:54 PM IST
ಇತ್ತೀಚೆಗೆ ಹೈಕೋರ್ಟ್ ವಿಚಾರಣೆ ವೇಳೆ ಪಾಲಿಕೆಯ ಅಧಿಕಾರಿಗಳು ನಗರದಲ್ಲಿ 10 ಸಾವಿರಕ್ಕೂ ಹೆಚ್ಚಿನ ಜಾಹೀರಾತು ಫಲಕಗಳಿವೆ ಎಂದಿದ್ದಾರೆ. ಆದರೆ, ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಅಧಿಕಾರಿಗಳು ನಗರದಲ್ಲಿ 3,166 ಜಾಹೀರಾತು ಫಲಕಗಳಿವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.
ಪಾಲಿಕೆಯ ಅಧಿಕಾರಿಗಳು 2008-09ನೇ ಸಾಲಿನಲ್ಲಿ 1,963 ಜಾಹೀರಾತು ಫಲಕಗಳಿಂದ 18.93 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದ್ದು, 2009-10ನೇ ಸಾಲಿನಲ್ಲಿ 18.24 ಕೋಟಿ ರೂ. ತೆರಿಗೆ ಸಂಗ್ರಹಿಸಿದ್ದಾರೆ. ಆದರೆ, ಮುಂದಿನ 2015ರವರೆಗೆ ವರ್ಷಕ್ಕೆ ಕೇವಲ 10 ಕೋಟಿಯಂತೆ ಮೂರು ವರ್ಷಕ್ಕೆ 31 ಕೋಟಿ ರೂ. ಸಂಗ್ರಹವಾಗಿದ್ದು, ಉಳಿದ ಬಾಕಿ ಶುಲ್ಕ ಎಲ್ಲಿಗೆ ಹೋಗಿದೆ? ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಷಿಕ 192 ಕೋಟಿ ರೂ. ಜಾಹೀರಾತು ಶುಲ್ಕ ಸಂಗ್ರಹಿಸಲು ಅವಕಾಶವಿದ್ದರೂ, ಅಧಿಕಾರಿಗಳ ಬೇಜವಾಬ್ದಾರಿಯಿಂದ ನಷ್ಟ ಅನುಭವಿಸುವಂತಾಗಿದೆ ಎಂದರು.
ಜಾಹೀರಾತು ವಿಭಾಗದಿಂದ ಪಾಲಿಕೆಗೆ 2 ಸಾವಿರ ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಆರೋಪದ ಮೇಲೆ 2016ರ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಜತೆಗೆ ಕೇವಲ 1 ಸಾವಿರ ಜಾಹಿರಾತು ಫಲಕಗಳಿಗೆ 300 ಕೋಟಿ ರೂ. ಡಿಮ್ಯಾಂಡ್ ನೋಟಿಸ್ ನೀಡಲಾಗಿತ್ತು. ಸಿಐಡಿ ತನಿಖೆ ಸ್ಥಿತಿಗತಿ ಹಾಗೂ ಬಾಕಿ ಶುಲ್ಕ ಯಾವಾಗ ವಸೂಲಿ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಪಾಲಿಕೆಯಿಂದ ಜಾಹೀರಾತು ಫಲಕಗಳನ್ನು ಬುಡಸಮೇತ ತೆರವುಗೊಳಿಸಲು 2016ರಲ್ಲಿ ಅಧಿಕಾರಿಗಳು 63 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಆದರೆ, ಅನಧಿಕೃತ ಜಾಹೀರಾತು ಫಲಕಗಳಿಂದ ಸಂಗ್ರಹಿಸುವ ದಂಡ ಕೇವಲ 2.66 ಲಕ್ಷ ರೂ. ಆಗಿದೆ. ಜತೆಗೆ ತೆರವುಗೊಳಿಸಿದ ಜಾಹೀರಾತು ಫಲಕಗಳನ್ನು ಹರಾಜಿನಲ್ಲಿ 12.33 ಲಕ್ಷಕ್ಕೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಇದರಲ್ಲಿಯೂ ಅವ್ಯವಹಾರ ನಡೆದಿದೆ ಎಂದು ಪದ್ಮನಾಭರೆಡ್ಡಿ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ