ಬಾಳೆ ಎಲೆ ಬಳಸಬೇಡಿ: ಪಾಲಿಕೆ ವಿಚಿತ್ರ ಮನವಿ!


Team Udayavani, Sep 22, 2018, 1:15 PM IST

bale-ele.jpg

ಬೆಂಗಳೂರು: “ಘನತ್ಯಾಜ್ಯ ವಿಲೇವಾರಿ ಸರಳೀಕರಿಸುವ ದೃಷ್ಟಿಯಿಂದ ಬಾಳೆ ಎಲೆ ಬದಲಿಗೆ ಸ್ಟೀಲ್‌ ಪ್ಲೇಟ್‌ಗಳನ್ನೇ ಬಳಸಿ’. ಇದು ಬಿಬಿಎಂಪಿ ತನ್ನ ವ್ಯಾಪ್ತಿಯ ಹೋಟೆಲ್‌, ಕಲ್ಯಾಣ ಮಂಟಪದ ಮಾಲೀಕರಿಗೆ ನೀಡಿರುವ ಮನವಿ.

ಬಾಳೆ ಎಲೆ ಊಟಕ್ಕೆಂದೇ ಸಾಕಷ್ಟು ಮಂದಿ ಹೋಟೆಲ್‌ಗ‌ಳನ್ನು ಹುಡುಕಿ ಹೋಗುತ್ತಾರೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಕಲ್ಯಾಣ ಮಂಟಪದಲ್ಲಿ ಬಾಳೆಎಲೆ ಮೇಲೆ ಊಟ ಬಡಿಸುವುದು ವಾಡಿಕೆ. ಆದರೆ, ಬಾಳೆ ಎಲೆ ವಿಲೇವಾರಿ ಬಿಬಿಎಂಪಿಗೆ ತಲೆನೋವಾಗಿದೆ.

ಆ ಹಿನ್ನೆಲೆಯಲ್ಲಿ ಇನ್ನು ಮುಂದೆ ಬಾಳೆ ಎಲೆ ಬದಲಿಗೆ ಸ್ಟೀಲ್‌ ಪ್ಲೇಟ್‌ ಬಳಸುವಂತೆ ನಗರದ ಬಹುತೇಕ ಕಲ್ಯಾಣ ಮಂಟಪ ಮಾಲೀಕರಿಗೆ ಬಿಬಿಎಂಪಿ ಮನವಿ ಮಾಡಿದೆ. ಹಾಗೇ ಕೆಲವು ಹೋಟೆಲ್‌ಗ‌ಳಿಗೂ ಸೂಚನೆ ನೀಡಿದೆ. ಇದರಿಂದಾಗಿ ಹೋಟೆಲ್‌ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರು ತಬ್ಬಿಬ್ಟಾಗಿದ್ದಾರೆ. ವಿಲೇವಾರಿ ಕಷ್ಟ ಎನ್ನುವ ಕಾರಣಕ್ಕೆ ಬಾಳೆ ಎಲೆ ಬಳಸಬೇಡಿ ಎಂದು ಮನವಿ ಮಾಡುವ ಬಿಬಿಎಂಪಿ ನಿರ್ಧಾರಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ.

ಪ್ಲಾಸ್ಟಿಕ್‌ ನಿಷೇಧದ ಮಾದರಿಯಲ್ಲೇ ಬಾಳೆಎಲೆ ನಿಷೇಧಕ್ಕೂ ಪೂರ್ವಯೋಜಿತ ಎಂಬಂತೆ ಹೋಟೆಲ್‌ ಮತ್ತು ಕಲ್ಯಾಣ ಮಂಟಪಗಳಿಗೆ ಬಿಬಿಎಂಪಿ ರೀತಿ ಮನವಿ ಮಾಡಿದೆ ಎಂದು ಕೆಲವರು ಆರೋಪಿಸಿದ್ದಾರೆ. ಊಟ ಅಥವಾ ತಿಂಡಿ ಸೇವನೆಗೆ ಬಳಸುವ ಬಾಳೆಎಲೆ ಕೊಳೆಯುವ ವಸ್ತುವಾಗಿರುವುರಿಂದ ಗೊಬ್ಬರವಾಗಿ ಪರಿವರ್ತಿಸಿ ಬಳಸಲು ಸಾಧ್ಯವಿದೆ.

ಆದರೆ, ಬಿಬಿಎಂಪಿಯ ಜೈವಿಕ ಅನಿಲ ಉತ್ಪಾದನಾ ಘಟಕದಲ್ಲಿ ಆಹಾರ ತ್ಯಾಜ್ಯದ ಜತೆಗೆ ಬಾಳೆ ಎಲೆಯ ಸಂಸ್ಕರಣೆ ಸವಾಲೆನಿಸಿದೆ. ಆಹಾರ ತ್ಯಾಜ್ಯಕ್ಕೆ ಹೋಲಿಸದರೆ ಬಾಳೆಎಲೆ ತ್ಯಾಜ್ಯ ಸಂಸ್ಕರಣೆ ವಿಳಂಬ. ಹಾಗಾಗಿ ಘಟಕಗಳಲ್ಲಿ ಸಂಸ್ಕರಣೆ ತಡವಾಗುತ್ತಿರುವ ಕಾರಣ, ಪಾಲಿಕೆ ಹೀಗೆ ಮನವಿ ಮಾಡಿದೆ. ಜತೆಗೆ ಬಾಳೆ ಎಲೆ ಬಳಕೆಯಿಂದ ತ್ಯಾಜ್ಯದ ಪ್ರಮಾಣ ಹೆಚ್ಚಾಗಲಿದ್ದು, ಸಾಗಣೆಗೂ ಹೆಚ್ಚು ವೆಚ್ಚವಾಗುತ್ತಿದೆ ಎನ್ನುತ್ತವೆ ಬಿಬಿಎಂಪಿ ಮೂಲಗಳು.

ರಾಜ್ಯದಲ್ಲಿ ಪ್ಲಾಸ್ಟಿಕ್‌ ಲೋಟ ಮತ್ತು ಪ್ಲೇಟ್‌ ಬಳಕೆ ಸಂಪೂರ್ಣ ನಿಷೇಧವಿದೆ. ಕೆಲವೆಡೆ ಕಾಗದದ ತಟ್ಟೆ, ಲೋಟ ಬಳಸಲಾಗುತ್ತಿದೆ. ಹಲವೆಡೆ ಬಾಳೆ ಎಲೆ ಬಳಕೆ ಇದೆ. ಹೀಗಿರುವಾಗ ಬಾಳೆ ಎಲೆ ಬದಲಿಗೆ ಸ್ಟೀಲ್‌ ಪ್ಲೇಟ್‌ ಬಳಸುವಂತೆ ಪಾಲಿಕೆ ಹೇಳುತ್ತಿರುವುದು ಆತಂಕ ಮೂಡಿಸುತ್ತಿದೆ. ತಟ್ಟೆಗಳನ್ನು ಬಳಸಿದರೆ ಪದೇ ಪದೇ ತೊಳೆಯಬೇಕು.

ಹೆಚ್ಚಿನ ನೀರು ಬೇಕಾಗುತ್ತದೆ. ಜತೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು. ಆಹಾರ ತ್ಯಾಜ್ಯವನ್ನು ಬಾಳೆ ಎಲೆ ಇಲ್ಲದಿದ್ದರೆ ಆಹಾರ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಾಗಿಸುವ ವ್ಯವಸ್ಥೆ ಮಾಡಬೇಕು. ಒಟ್ಟಾರೆ ಪಾಲಿಕೆ ಮನವಿ ವಿಚಿತ್ರವೆನಿಸಿದೆ ಎಂದು ಹೋಟೆಲ್‌ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮನವಿಯಷ್ಟೇ; ಕಡ್ಡಾಯವಲ್ಲ: ತ್ಯಾಜ್ಯ ಸಂಸ್ಕರಣಾ ಜೈವಿಕ ಅನಿಲ ಘಟಕಗಳಲ್ಲಿ ಬಾಳೆ ಎಲೆ ಸಂಸ್ಕರಣೆ ಕಷ್ಟಕರವೆನಿಸಿದ ಹಿನ್ನೆಲೆಯಲ್ಲಿ ಬಾಳೆ ಎಲೆ ಬಳಕೆ ಕಡಿಮೆ ಮಾಡಲು ಕೋರಿದ್ದೇವೆ. ಬಾಳೆ ಎಲೆ ಬಳಸಲೇಬಾರದು ಎಂದು ಕಡ್ಡಾಯ ಮಾಡಿಲ್ಲ.

ಕೆಲವು ಸಂಸ್ಥೆಗಳು ಸ್ಟೀಲ್‌ ಪ್ಲೇಟ್‌ಗಳನ್ನು ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡುತ್ತವೆ. ಕಲ್ಯಾಣ ಮಂಟಪಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ವಿಭಾಗದ ವೈದ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಾಳೆ ಎಲೆಯನ್ನು ಶೇ.100ರಷ್ಟು ಸಾವಯವ ಗೊಬ್ಬರವಾಗಿ ಪರಿವರ್ತಿಸಲು ಅವಕಾಶವಿದೆ. ಹಾಗಿದ್ದರೂ ವಿಲೇವಾರಿ ಸಮಸ್ಯೆ ನೆಪ ಹೇಳಿ ಪಾಲಿಕೆ ಈ ರೀತಿಯ ಸೂಚನೆ ನೀಡುವುದು ಸರಿಯಲ್ಲ. ಹೋಟೆಲ್‌ಗ‌ಳಲ್ಲಿ ಬಾಳೆ ಎಲೆ ನಿಷೇಧ ಅಸಾಧ್ಯ.
-ಸುಬ್ರಹ್ಮಣ್ಯ ಹೊಳ್ಳ, ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ

ಹೋಟೆಲ್‌ಗ‌ಳು ಹಾಗೂ ಕಲ್ಯಾಣ ಮಂಟಪಗಳಿಗೆ ಪ್ಲಾಸ್ಟಿಕ್‌ ಬದಲಿಗೆ ಬಾಳೆಎಲೆ ಬಳಸುವಂತೆ ಮನವಿ ಮಾಡಲಾಗಿದೆ. ಇನ್ನು ಕಲ್ಯಾಣ ಮಂಟಪಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಳೆ ಎಲೆ ಬಳಸುವುದರಿಂದ ಸಾಕಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹೀಗಾಗಿ ಸ್ಟೀಲ್‌ ಪ್ಲೇಟ್‌ಗಳ ಬಳಕೆಗೆ ಸಲಹೆ ನೀಡಲಾಗಿದೆ.
-ಸಫ್ರಾಜ್‌ ಖಾನ್‌, ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ

* ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.