ಕೊಲೆ ಬೆದರಿಕೆ: ಪಾನಿಪೂರಿ ಕಿಟ್ಟಿ ವಿರುದ್ಧ ಎಫ್ಐಆರ್
Team Udayavani, Sep 26, 2018, 12:42 PM IST
ಬೆಂಗಳೂರು: ಪೊಲೀಸರ ಮತ್ತು ಮಾಧ್ಯಮಗಳ ಎದುರೇ ನಟ ದುನಿಯಾ ವಿಜಯ್ಗೆ ಡಿಚ್ಚಿ ಹೊಡೆದಿದ್ದ ಆತನ ಸ್ನೇಹಿತ ಪಾನಿಪೂರಿ ಕಿಟ್ಟಿ ವಿರುದ್ಧ ಕೊಲೆ ಬೆದರಿಕೆ ಆರೋಪದ ಪ್ರಕರಣ ದಾಖಲಾಗಿದೆ.
“ಪುತ್ರ ಸಾಮ್ರಾಟ್ ಹಾಗೂ ನನಗೆ ಪಾನಿಪೂರಿ ಕಿಟ್ಟಿ ಹಾಗೂ ಮಾರುತಿಗೌಡ ಕೊಲೆ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿ ಸೆ.22ರಂದು ನಟ ವಿಜಯ್ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ಸೆ.23ರಂದು ನಡೆದ “ಅಮೆಚೂರ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್, ಮಿಸ್ಟರ್ ಬೆಂಗಳೂರು -2018′ ಸ್ಪರ್ಧೆಯ ಕಾರ್ಯಕ್ರಮ ಮುಗಿಸಿಕೊಂಡು ಮಗ ಸಾಮ್ರಾಟ್ ಜೊತೆ ಬರುತ್ತಿದ್ದಾಗ ಹಿಂದಿನಿಂದ ಮಾರುತಿಗೌಡ, ಸಾಮ್ರಾಟ್ನನ್ನು ಉದ್ದೇಶಿಸಿ “ಏನೋ ನಿನ್ನದು ಜಾಸ್ತಿ ಆಯಿತು.
ಈ ವಯಸ್ಸಿಗೆ ಸಿನಿಮಾದ ಡೈಲಾಗ್ ಹೊಡೆದುಕೊಂಡು ಮೆರಿತ್ತಿದ್ದೀಯಾ, ನಿಮ್ಮ ಅಪ್ಪನನ್ನು ಮಗಿಸಿಬಿಡುತ್ತೇನೆ ಎಂದಿದ್ದಾನೆ. ಇದನ್ನು ಕೇಳಿಸಿಕೊಂಡ ಅಭಿಮಾನಿಗಳು ಆತನ ಜತೆ ಜಗಳ ತೆಗೆದಿದ್ದು ಜೋರು ಜಗಳ ನಡೆದಿದೆ’, ಎಂದು ವಿಜಯ್ ದೂರಿನಲ್ಲಿ ಆರೋಪಿಸಿದ್ದಾರೆ.
ಗುಂಪಿನಲ್ಲಿ ಸಿಲುಕಿಕೊಂಡ ಮಾರುತಿಗೌಡನನ್ನು ಬಿಡಿಸಿಕೊಂಡು ಕಾರಿಗೆ ಹತ್ತಿಸಿಕೊಂಡು ಮನೆಗೆ ಬಿಡಲು ತೆರಳುತ್ತಿದ್ದಾಗಲೇ, ಆತನ ಚಿಕ್ಕಪ್ಪ ದೂರವಾಣಿ ಕರೆ ಮಾಡಿ, ಕೂಡಲೇ ಅಂಬೇಡ್ಕರ್ ಭವನಕ್ಕೆ ಬರದಿದ್ದರೆ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದಾರೆ.
ಬಳಿಕ ಹೈಗ್ರೌಂಡ್ಸ್ ಠಾಣೆಯ ಬಳಿ ಬಂದಾಗಲೂ, ಕಿಟ್ಟಿ ಹಾಗೂ ಆತನ ಸಹಚರರು ನನ್ನ ರೇಂಜ್ ರೋವರ್ ಕಾರಿನ ಗಾಜು ಒಡೆದು ಹಾಕಿದ್ದು ಬೆದರಿಕೆ ಹಾಕಿದ್ದಾರೆ. ಜತೆಗೆ ಗುಂಪಿನಲ್ಲಿದ್ದ ಒಬ್ಬ ಚಾಕು ತೆಗೆದುಕೊಂಡು ತಿವಿಯಲು ಬಂದಿದ್ದ ಎಂದು ವಿಜಯ್ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ಡಿಚ್ಚಿ ಹೊಡೆದಿದ್ದ ಕಿಟ್ಟಿ!: ಹೈಗ್ರೌಂಡ್ಸ್ ಠಾಣೆಯ ಬಳಿ ಪೊಲೀಸರ ಸಮ್ಮುಖದಲ್ಲಿಯೇ ಪಾನಿಪೂರಿ ಕಿಟ್ಟಿ, ವಿಜಯ್ಗೆ ಡಿಚ್ಚಿ ಹೊಡೆದಿದ್ದರು. ವಿಜಯ್ ಹಾಗೂ ಕಿಟ್ಟಿ ಬೆಂಬಲಿಗರಿಂದ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ವಿಜಯ್ ಕೂಡ ಅಂದೇ ದೂರು ನೀಡಿದ್ದರೂ, ಪೊಲೀಸರು ಎನ್ಸಿಆರ್ ( ಅಸಂಜ್ಞೆಯ) ಪ್ರಕರಣ ದಾಖಲಿಸಿ ಸುಮ್ಮನಾಗಿದ್ದರು.
ವಿಜಯ್ ಜಾಮೀನು ಭವಿಷ್ಯ ಇಂದು ನಿರ್ಧಾರ!: ಜಿಮ್ ತರಬೇತುದಾರ ಮಾರುತಿಗೌಡನ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ವಿಜಯ್ ಸಲ್ಲಿಸಿರುವ ಜಾಮೀನು ಅರ್ಜಿಯ ಆದೇಶ ಇಂದು ಹೊರಬೀಳಲಿದೆ. ಆರೋಪಿಗಳಾದ ವಿಜಯ್, ಪ್ರಸಾದ್, ಮಣಿ, ಪ್ರಸಾದ್ರ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ 8ನೇ ಎಸಿಎಂಎಂ ನ್ಯಾಯಾಲಯ ಬುಧವಾರಕ್ಕೆ ತೀರ್ಪು ಕಾಯ್ದಿರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್