ಸಾವಿರಾರು ವಜ್ರದ ಹರಳು ಕೊಡಲೊಪ್ಪದ ಕೋರ್ಟ್
Team Udayavani, Oct 4, 2018, 11:31 AM IST
ಬೆಂಗಳೂರು: ಕಟ್ಟಡ ನೆಲಸಮಗೊಳಿಸುವಾಗ ಗೋಡೆಯಲ್ಲಿ ಪತ್ತೆಯಾಗಿದ್ದ ಸಾವಿರಾರು ವಜ್ರದ ಹರಳುಗಳನ್ನು ತಮಗೆ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಹೈಕೋರ್ಟ್ ವಜಾಗೊಳಿಸಿತು.
ಸುಮಾರು ಮೂರು ದಶಕಗಳ ಹಿಂದಿನ ಪ್ರಕರಣ ಇದಾಗಿದ್ದು, 1988ರಲ್ಲಿ ಕೆ.ಎಚ್.ರಸ್ತೆಯ ಹಳೆ ಕಟ್ಟಡವೊಂದನ್ನು ನೆಲಸಮಗೊಳಿಸುತ್ತಿದ್ದಾಗ ಗೋಡೆಯೊಂದರಲ್ಲಿ 1,385 ವಜ್ರದ ಹರಳುಗಳು ಸಿಕ್ಕಿದ್ದವು. ಅವುಗಳನ್ನು ತಮ್ಮ ವಶಕ್ಕೆ ನೀಡುವಂತೆ ಚಕ್ರವರ್ತಿ ಎಂಬುವವರ ಪತ್ನಿ ಉಮಾ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಸರ್ಕಾರಿ ವಕೀಲರು “ನಿಯಮಗಳ ಪ್ರಕಾರ ನಿಧಿ ದೊರೆತ ಸ್ಥಳದ ಮಾಲೀಕರು ಅಥವಾ ನಿಧಿ ಪತ್ತೆ ಹಚ್ಚಿದವರಿಗೆ ಮಾತ್ರ ಸಿಕ್ಕ ನಿಧಿಯಲ್ಲಿ ಪಾಲು ಕೊಡಬೇಕು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಜಾಗದ ಮಾಲೀಕರೂ ಅಲ್ಲ, ನಿಧಿ ಪತ್ತೆ ಹಚ್ಚಿದವರೂ ಅಲ್ಲ. ಹಾಗಾಗಿ, ಅರ್ಜಿದಾರರಿಗೆ ವಜ್ರದ ಹರಳುಗಳನ್ನು ನೀಡಲು ಅವಕಾಶವಿಲ್ಲ ಎಂದು ವಾದಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿತು.
ಏನಿದು ಪ್ರಕರಣ?: ನಗರದ ಕೆ.ಎಚ್.ರಸ್ತೆಯಲ್ಲಿ 1988ರಲ್ಲಿ ಹಳೆಯ ಕಟ್ಟಡವೊಂದನ್ನು ನೆಲಸಮಗೊಳಿಸಲಾಗಿತ್ತು. ಆಗ ಕಟ್ಟಡದ ಗೋಡೆಯನ್ನು ಕಡೆವಿದಾಗ ಕೂಲಿಕಾರ ರಾಜು ಎಂಬುವರಿಗೆ 1,385 ವಜ್ರದ ಹರಳುಗಳು ಸಿಕ್ಕಿದ್ದವು. ಆತ ಅದನ್ನು ಚಕ್ರವರ್ತಿ ಎಂಬುವರಿಗೆ ಮಾರಿದ್ದ. ಈ ಸಂಬಂಧ ಕಟ್ಟಡ ನೆಲಸಮ ಗುತ್ತಿಗೆದಾರ ಮೊಹಮ್ಮದ್ ವಾಸಿಂ ಪೊಲೀಸರಿಗೆ ದೂರು ಕೊಟ್ಟಿದ್ದ. ಇದನ್ನು ಆಧರಿಸಿ ಪೊಲೀಸರು ಚಕ್ರವರ್ತಿಯಿಂದ ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದರು. ಈ ಮಧ್ಯೆ ಕೆಲ ವರ್ಷಗಳ ಬಳಿಕ ಚಕ್ರವರ್ತಿ ಸಾವನ್ನಪ್ಪಿದ್ದರು.
ಆನಂತರ ಚಕ್ರವರ್ತಿಯ ಪತ್ನಿ ಉಮಾ “ಪೊಲೀಸರು ವಶಕ್ಕೆ ಪಡೆದಿರುವ ವಜ್ರದ ಹರಳುಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು 2009ರ ಡಿ.5ರಂದು ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದರು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಉಮಾ “ಕರ್ನಾಟಕ ಟ್ರೆಸರ್ ಟ್ರೋ ಕಾಯ್ದೆ-1962′ ಪ್ರಕಾರ ಹರಳುಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿದ್ದರು. ಆದರೆ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ