ವಿಲಾಸಿ ಜೀವನಕ್ಕಾಗಿ ಮನೆ ದೋಚುತ್ತಿದ್ದವರ ಸೆರೆ


Team Udayavani, Oct 17, 2018, 12:54 PM IST

vilasakkagi.jpg

ಬೆಂಗಳೂರು: ವಿಲಾಸಿ ಜೀವನಕ್ಕಾಗಿ ಮನೆಗಳ್ಳತನ ಮಾಡುತ್ತಿದ್ದ ಐವರು ಆರೋಪಿಗಳು ದಕ್ಷಿಣ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಾಲ್ಮೀಕಿನಗರದ ಇಮ್ರಾನ್‌ ಖಾನ್‌ ಅಲಿಯಾಸ್‌ ಚೋರ್‌ ಇಮ್ರಾನ್‌, ನಾಯಂಡಹಳ್ಳಿಯ ಖದೀರ್‌ ಅಹಮ್ಮದ್‌, ಯಶವಂತಪುರದ ಪ್ರಕಾಶ್‌ ಅಲಿಯಾಸ್‌ ಜಂಗ್ಲಿ, ನಾಗಸಂದ್ರದ ಮಹೇಶ್‌ ಮತ್ತು ಅಂದ್ರಳ್ಳಿ ಮುಖ್ಯ ರಸ್ತೆ ನಿವಾಸಿ ದಯಾನಂದ್‌ ಬಂಧಿತರು.

ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 31 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, 84 ಲಕ್ಷ ರೂ. ಮೌಲ್ಯದ 2.62 ಕೆ.ಜಿ. ಬಂಗಾರ, 4.20 ಕೆ.ಜಿ. ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು  ದ್ವಿಚಕ್ರ ವಾಹನಗಳ ಮೂಲಕ ಕೆಲ ಪ್ರದೇಶಗಳಲ್ಲಿ ಹಗಲು ಮತ್ತು ರಾತ್ರಿ ಸುತ್ತಾಡುತ್ತಾ ಮನೆ ಗೇಟ್‌ಗಳಿಗೆ ಬೀಗ ಹಾಕಿರುವುದು, ಪೇಪರ್‌ ಬಿದ್ದಿರುವುದನ್ನು ಗಮನಿಸುತ್ತಿದ್ದರು.

ಬಳಿಕ ರಾತ್ರಿ ವೇಳೆ ಬಂದು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಮುಂಬಾಗಿಲು ಅಥವಾ ಹಿಂಬಾಗಿಲು ಮುರಿದು ಚಿನ್ನಾಭರಣ ದೋಚುತ್ತಿದ್ದರು. ಕೆಲವೊಮ್ಮೆ ಒಂಟಿ ಮಹಿಳೆಯರ ಮನೆಗಳ ಬಾಗಿಲು ಬಡಿದು ಕಾರದ ಪುಡಿ ಎರಚಿ ದರೋಡೆ ಕೂಡ ಮಾಡುತ್ತಿದ್ದರು.

ವಿವಿಪುರ ಉಪ ವಿಭಾಗದಲ್ಲಿ ಹೆಚ್ಚು ಮನೆಗಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಡಿಸಿಪಿ ಶರಣಪ್ಪ, ಹನುಮಂತನಗರ, ಗಿರಿನಗರ ಮತ್ತು ಸಿ.ಕೆ.ಅಚ್ಚುಕಟ್ಟು ಠಾಣಾಧಿಕಾರಗಳ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಜ್ಮೇರ್‌ದಲ್ಲಿ ಚಿನ್ನಾಭರಣ ಮಾರಾಟ: ಹನುಮಂತನಗರ ಠಾಣೆ ಪೊಲೀಸರು ಬಂಧಿಸಿರುವ ಇಮ್ರಾನ್‌ ಖಾನ್‌ ಅಲಿಯಾಸ್‌ ಚೋರ್‌ ಇಮ್ರಾನ್‌ ಹಾಗೂ ಈತನ ಭಾಮೈದನ ಖದೀರ್‌ ಅಹಮ್ಮದ್‌ ವಿಲಾಸಿ ಜೀವನಕ್ಕಾಗಿ ಕೃತ್ಯವೆಸಗುತ್ತಿದ್ದರು. ಇತ್ತೀಚೆಗೆ ಪತ್ನಿ ಜತೆ ರಾಜಸ್ಥಾನದ ಅಜ್ಮೇರ್‌ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ.

ಈ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದಾಗ ಸ್ನೇಹಿತರೊಬ್ಬರ ಹರ‌ಕೆಯಂತೆ ಅಜ್ಮೇರ್‌ದಲ್ಲಿ ಕಡಿಮೆ ಬೆಲೆಗೆ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣವನ್ನು ಆತನಿಗೆ ಹಿಂದಿರುಗಿಸಬೇಕಿದೆ ಎಂದು ಸುಳ್ಳು ಹೇಳಿದ್ದ. ಇದಕ್ಕೆ ಬಾಮೈದನ ಸಹಕಾರವಿತ್ತು. ಇದು ನನಗೆ ತಿಳಿದಿರಲಿಲ್ಲ ಎಂದು ಪತ್ನಿ ತಿಳಿಸಿದ್ದಾರೆ. 

ಇಮ್ರಾನ್‌ ಖಾನ್‌ ಮನೆಗಳ ಬಾಗಿಲು ಮುರಿದು ಕೃತ್ಯವೆಸಗುತ್ತಿದ್ದರೆ, ಖದೀರ್‌ ಹೊರಗಡೆ ನಿಂತು ಗಮನಿಸುತ್ತಿದ್ದ. ಆರೋಪಿಗಳು ಅಜ್ಮೇರ್‌ಗೆ ಚಿನ್ನಾಭರಣ ಕೊಂಡೊಯ್ದ ಬಗ್ಗೆ ಮಾಹಿತಿ ಸಂಗ್ರಹಿಸಲು ಹೋದಾಗ, ಅಲ್ಲಿನ ಸ್ಥಳೀಯ ವ್ಯಾಪಾರಿಗಳು ರಾಜ್ಯ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು.

ಬಳಿಕ ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಯಿತು. ಇವರ ಬಂಧನದಿಂದ 8 ಪ್ರಕರಣಗಳು ಪತ್ತೆಯಾಗಿವೆ. 24 ಲಕ್ಷ ರೂ. ಮೌಲ್ಯದ 801 ಗ್ರಾಂ ಬಂಗಾರ, 2 ಕೆ.ಜಿ. 200 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ವಿಲಾಸಿ ಜೀವನಕ್ಕಾಗಿ ಕೃತ್ಯ: ಸಿ.ಕೆ.ಅಚ್ಚುಕಟ್ಟು ಪೊಲೀಸರು ಮಹೇಶ್‌ ಮತ್ತು ದಯಾನಂದ್‌ರನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನಿಂದ 7 ಮನೆಗಳ್ಳತನ, 2 ದ್ವಿಚಕ್ರ ವಾಹನ ಕಳವು ಸೇರಿ 10ಕ್ಕೂ ಹೆಚ್ಚು  ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಗಳಿಂದ 41,70 ಲಕ್ಷ ರೂ. ಮೌಲ್ಯದ 1,200 ಗ್ರಾಂ ಚಿನ್ನಾಭರಣ, 20 ಗ್ರಾಂ ವಜ್ರದ ಬಳೆ, 2 ಕೆ.ಜಿ. ಬೆಳ್ಳಿಯ ವಸ್ತುಗಳು, 2 ಪಲ್ಸರ್‌ ಬೈಕ್‌ಗಳು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹಗಲು ಮತ್ತು ರಾತ್ರಿ ವೇಳೆ ಪಲ್ಸರ್‌ ಬೈಕ್‌ಗಳಲ್ಲಿ ಪ್ರಮುಖ ಪ್ರದೇಶಗಳಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದರು.

ರಾತ್ರಿ ಹೊತ್ತು ಆ ಮನೆಗಳ ಬಾಗಿಲನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೃತ್ಯವೆಸಗುತ್ತಿದ್ದರು. ಬಳಿಕ ಕಳವು ವಸ್ತುಗಳನ್ನು ಮಾರಾಟ ಮಾಡಿ ಮೋಜು-ಮಸ್ತಿ, ಪ್ರವಾಸ ಎಂದು ವಿಲಾಸಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಡಾ ಎಸ್‌.ಡಿ.ಶರಣಪ್ಪ, ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಎಸಿಪಿ ವಲಿ ಬಾಷಾ ಹಾಗೂ ಠಾಣಾಧಿಕಾರಿಗಳು ಇದ್ದರು.

ಕ್ಯಾಸಿನೋ ಜೂಜಿನ ಮೋಹ: ಗಿರಿನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿರುವ ಪ್ರಕಾಶ್‌ ಅಲಿಯಾಸ್‌ ಜಂಗ್ಲಿ ಕಾರು ಚಾಲಕನಾಗಿದ್ದಾನೆ. ಕೃತ್ಯದ ಹಣದಲ್ಲಿ  ವಿಲಾಸಿ ಜೀವನದ ಜತೆಗೆ ಕ್ಯಾಸಿನೋ ಎಂಬ ಜೂಜಿಗೆ ಹಣ ಹೂಡಿಕೆ ಮಾಡುತ್ತಿದ್ದ.

ಆರೋಪಿ ರಾತ್ರಿ 10 ಗಂಟೆ ಸುಮಾರಿಗೆ ನಿಗದಿ ಮಾಡಿದ ಪ್ರದೇಶಗಳಲ್ಲಿ ಪಲ್ಸರ್‌ ಬೈಕ್‌ಗಳಲ್ಲಿ ಸಂಚರಿಸುತ್ತಿದ್ದ. ಗೇಟ್‌ ಹಾಗೂ ಮನೆ ಬಾಗಿಲು ಬೀಗ ಹಾಕಿದ ಮನೆಗಳನ್ನು ಗುರುತಿಸಿ, ತಡರಾತ್ರಿ  1 ಗಂಟೆ ಸುಮಾರಿಗೆ ನಿರ್ದಿಷ್ಟ ಮನೆ ಬಳಿ ಬಂದು, ಕಿಟಕಿ ಮೂಲಕ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಕೃತ್ಯವೆಸಗುತ್ತಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿ ಒಮ್ಮೆ ಕಳವು ಮಾಡಿದ ವಸ್ತುಗಳನ್ನು ಪತ್ನಿ ಜತೆ ಮಾರಾಟ ಮಾಡಲು ಯತ್ನಿಸಿದ್ದ. ಈ ವೇಳೆ ವಿಚಾರ ತಿಳಿದ ಪತ್ನಿ ಮತ್ತೂಮ್ಮೆ ಈ ರೀತಿ ಮಾಡದ್ದಂತೆ ಪ್ರಮಾಣ ಮಾಡಿಸಿಕೊಂಡಿದ್ದರು. ಆದರೂ ಆರೋಪಿ ಆಕೆಗೆ ತಿಳಿಯದ್ದಂತೆ ಕೃತ್ಯವೆಸಗುತ್ತಿದ್ದ. ಬಂದ ಹಣದಲ್ಲಿ ಕ್ಯಾಸಿನೋ ಜೂಜಿಗೆ ಸಾವಿರಾರು ರೂ. ಹೂಡಿಕೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.