60 ಕೋಟಿ ಆಸೆ ತೋರಿಸಿ 28 ಲಕ್ಷ ವಂಚನೆ
Team Udayavani, Oct 23, 2018, 12:36 PM IST
ಬೆಂಗಳೂರು: ಖಾಸಗಿ ಬ್ಯಾಂಕ್ಗಳಿಂದ ಸಾಲ ಕೊಡಿಸುವ ನೆಪದಲ್ಲಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿ ಯುಬಿ ಸಿಟಿಯಲ್ಲಿನ ಕಚೇರಿ ಬಂದ್ ಮಾಡಿರುವ ಜೆ.ಎಂ ಗ್ರೂಪ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೂಂದು ದೂರು ದಾಖಲಾಗಿದೆ.
60 ಕೋಟಿ ರೂ. ಪ್ರಾಜೆಕ್ಟ್ ಲೋನ್ ಕೊಡಿಸುವುದಾಗಿ ನಂಬಿಸಿ, 2017ರಿಂದ ಹಂತ ಹಂತವಾಗಿ 28 ಲಕ್ಷ ರೂ. ಪಡೆದು ಜೆ.ಎಂ ಗ್ರೂಪ್ನ ಸಿಇಒ ಎನ್ನಲಾದ ಜೋಸೆಫ್ ಮ್ಯಾಥ್ಯೂ ಸೇರಿ ಮೂವರು ವಂಚಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿ ಕೆ. ಶ್ರೀನಿವಾಸುಲು ರೆಡ್ಡಿ ಎಂಬುವವರು ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಜೋಸೆಫ್ ಮ್ಯಾಥ್ಯೂ, ಮ್ಯಾನೇಜರ್ ಸೆಂಥಿಲ್ ಕುಮಾರ್ ಹಾಗೂ ಅಕೌಂಟೆಂಟ್ ಪ್ರಿಯಾ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
2017ರಲ್ಲಿ ಪ್ರಾಜೆಕ್ಟ್ ಲೋನ್ ಆಗಿ 60 ಕೋಟಿ ರೂ. ಕೊಡಿಸುವುದಾಗಿ ಹೇಳಿದ್ದ ಜೋಸೆಫ್ ಮ್ಯಾಥ್ಯೂ, ಅದಕ್ಕೆ ಪ್ರತಿಯಾಗಿ ರೀ ಫಂಡಮೆಂಟಲ್ ಶುಲ್ಕವಾಗಿ 20 ಲಕ್ಷ ರೂ. ನೀಡುವಂತೆ ಹೇಳಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ್ದೆ. ಆದರಂತೆ, ಸಾಲ ಕೊಡಿಸುವ ತಾಂತ್ರಿಕ ಪ್ರಕ್ರಿಯೆಗಳ ಶುಲ್ಕವಾಗಿ 2017ರ ನವೆಂಬರ್ನಲ್ಲಿ 2 ಲಕ್ಷ ರೂ.ಗಳನ್ನು ಕಂಪನಿಯ ಅಕೌಂಟ್ಗೆ ಹಾಕಿಸಿಕೊಂಡಿದ್ದರು.
ಬಳಿಕ ಡಿಸೆಂಬರ್ನಲ್ಲಿ ಒಮ್ಮೆ 9 ಲಕ್ಷ ರೂ. ಮತ್ತೂಂದು ಬಾರಿ 11 ಲಕ್ಷ ರೂ.ಗಳನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದರು. ಕಡೆಯದಾಗಿ ಸಾಲ ಮಂಜೂರಾಗಿದೆ ಎಂದು ಲೆಟರ್ ನೀಡಿ ಇದೇ ವರ್ಷದ ಜನವರಿ 19ರಂದು 6 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಸಾಲ ಪಡೆಯುವ ಸಂಬಂಧ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಅನುಮಾನ ಬಂದು ಯುಬಿಸಿಟಿಗೆ ಹೋಗಿ ನೋಡಿದಾಗ ಆಫೀಸ್ ಮುಚ್ಚಿಕೊಂಡು ಹೋಗಿರುವುದು ಗೊತ್ತಾಯಿತು ಎಂದು ದೂರುದಾರ ಶ್ರೀನಿವಾಸುಲು ರೆಡ್ಡಿ ಆರೋಪಿಸಿದ್ದಾರೆ.
ನಿವೃತ್ತ ಅರಣ್ಯಾಧಿಕಾರಿಗೆ 33 ಲಕ್ಷ ರೂ. ವಂಚನೆ!: ಯಾವುದೇ ದಾಖಲೆಗಳಿಲ್ಲದೆ ಕಡಿಮೆ ಬಡ್ಡಿಗೆ 30 ಕೋಟಿ ರೂ. ಸಾಲ ನೀಡುವುದಾಗಿ ನಂಬಿಸಿದ್ದ ಜೆ.ಎಂ ಗ್ರೂಪ್ ಸಿಬ್ಬಂದಿ, 33 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ಕೇರಳದ ಕಣ್ಣೂರಿನ ನಿವೃತ್ತ ಅರಣ್ಯ ಅಧಿಕಾರಿ ಚಂದ್ರನ್ ಎಂಬುವವರು ಕೂಡ ಕೆಲ ದಿನಗಳ ಹಿಂದೆ ದೂರು ನೀಡಿದ್ದರು. ಎರಡೂ ಪ್ರಕರಣಗಳ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು