ಭಾನುವಾರವೇ ಖರೀದಿ ಭರಾಟೆ
Team Udayavani, Nov 5, 2018, 12:20 PM IST
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ನಗರದ ಮಾರುಕಟ್ಟೆಗಳಲ್ಲಿ ರಜಾ ದಿನವಾದ ಭಾನುವಾರದಿಂದಲೇ ಖರೀದಿ ಭರಾಟೆ ಜೋರಾಗಿದೆ.
ದೀಪಾವಳಿ ಹಬ್ಬದ ವಿಶೇಷವಾದ ಕಜ್ಜಾಯ ತಯಾರಿಕೆಗೆ ಬೇಕಾದ ಬೆಲ್ಲ, ಅಕ್ಕಿ, ಎಣ್ಣೆ, ತುಪ್ಪ, ದೇವರ ಪೂಜೆ-ಪುನಸ್ಕಾರಕ್ಕೆ ಹೂವು-ಹಣ್ಣು, ಮೊರ, ಕನ್ನಡಿ, ಬಾಚಣಿಗೆ, ಬಳೆ-ಬಿಚ್ಚೊಲೆ, ಕಾಡಿಗೆ, ಅರಿಶಿಣ-ಕುಂಕುಮ, ಶ್ರೀಗಂಧ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮತ್ತೂಂದಡೆ ದೀಪಾವಳಿ ವಿಶೇಷವಾದ ಪಟಾಕಿ ಖರೀದಿಯೂ ಸಾಗಿತ್ತು.
ಒಟ್ಟಾರೆ, ಮಾರುಕಟ್ಟೆಗಳಲ್ಲಿ ದೀಪಾವಳಿ ಹಬ್ಬದ ಕಳೆಕಟ್ಟಿತ್ತು. ಹಬ್ಬದ ಪ್ರಯುಕ್ತ ಹಾಪ್ಕಾಮ್ಸ್ ಮಳಿಗೆಗಳು ಹಾಗೂ ಮಾರುಕಟ್ಟೆಗಳಲ್ಲಿ ಹೂವು ಹಣ್ಣು ತರಕಾರಿಗಳ ಬೆಲೆಗಳಲ್ಲಿ ಏರಿಕೆಯಾಗದಿರುವುದು ಸಾರ್ವಜನಿಕರಿಗೆ ಸ್ವಲ ಸಮಾಧಾನ ತಂದಿದೆ.
ಆಕರ್ಷಣೆ: ಈ ವರ್ಷ ದೀಪಗಳು ಮಾರುಕಟ್ಟೆಗೆ ಬಂದಿದ್ದು, ಅಲಂಕಾರಿಕ ದೀಪಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ತೇಲುವ ದೀಪಗಳು, ಸಿನ್ಟೆಡ್ ದೀಪಗಳು, ಲ್ಯಾಂಪ್ ದೀಪಗಳಿಗೆ ಬೇಡಿಕೆ ಹೆಚ್ಚಿವೆ. ತುಳಸಿಕಟ್ಟೆ ದೀಪಗಳು, ಕೃಷ್ಣನ ದೀಪಗಳು, ಕಾರಂಜಿ ದೀಪಗಳು, ಗಣಪತಿ ವಿಗ್ರಹವಿರುವ ದೀಪಗಳು, ಕಲಂಕಾರಿ ದೀಪಗಳು, ಮಣ್ಣಿನ ಹಣತೆಗಳು ಹೆಂಗೆಳೆಯರ ಮನ ಸೆಳೆಯುತ್ತಿವೆ.
ಮಾರುಕಟ್ಟೆಗಳಲ್ಲಿರುವ ತರಹೇವಾರಿ ಆಕಾಶಬುಟ್ಟಿಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. 150 ರಿಂದ 600 ರೂ.ಗಳವರೆಗೂ ಆಕಾಶಬುಟ್ಟಿಗಳು ಲಭ್ಯವಿದ್ದು, ಬಂಗಾರದ ಬಣ್ಣದಲ್ಲಿ ವಜ್ರ, ಗೋಳಾಕರದಲ್ಲಿರುವುದೇ ವಿಶೇಷ.
ಹಣ್ಣು-ಕಾಯಿ ದರ (ಕೆಜಿಗೆ)
-ಏಲಕ್ಕಿಬಾಳೆ 70ರಿಂದ 80 ರೂ.
-ಪಚ್ಚಾಬಾಳೆ 25ರಿಂದ 30 ರೂ.
-ಸೇಬು 75ರಿಂದ 90 ರೂ.
-ಸಪೋಟ 80 ರೂ.
-ಮೂಸಂಬಿ 60 ರೂ.
-ದ್ರಾಕ್ಷಿ 100 ರೂ.
-ಕಿತ್ತಳೆ 50 ರೂ.
-ತೆಂಗಿನಕಾಯಿ ಜೋಡಿಗೆ 25ರಿಂದ 30 ರೂ.
ಹೂವುಗಳ ದರ (ಕೆಜಿಗೆ)
-ಮಲ್ಲೆಮೊಗ್ಗು 1 ಸಾವಿರ ರೂ.
-ಮಲ್ಲೆ 800 ರೂ.
-ಮಲ್ಲಿಗೆ 400 ರೂ.
-ಕಾಕಡ 300 ರೂ.
-ಸೇವಂತಿಗೆ 200 ರೂ.
-ಗುಲಾಬಿ 150 ರೂ.
ತರಕಾರಿ ಬೆಲೆ (ಕೆಜಿಗೆ)
-ಹುರುಳಿಕಾಯಿ 30 ರೂ.
-ಅವರೇಕಾಯಿ 60 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ