ದಾನದಲ್ಲಿ ಧೀಮಂತ ಸಾಹಿತಿಗಳ ಕೃತಿಗಳು


Team Udayavani, Nov 12, 2018, 11:55 AM IST

danadalli.jpg

ಬೆಂಗಳೂರು: ಓದುಗರಲ್ಲಿ ಸಾಹಿತ್ಯಭಿರುಚಿ ಹುಟ್ಟಿಸುವ ಜತೆಗೆ ಸಾರ್ವಜನಿಕ ಗ್ರಂಥಾಲಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ರೂಪಿಸಿರುವ “ಪುಸ್ತಕ ದಾನ ಅಭಿಯಾನ’ಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ, ಶೂದ್ರ ಶ್ರೀನಿವಾಸ್‌, ಡಾ.ಎಸ್‌.ಎಸ್‌.ಅಂಗಡಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಸೇರಿದಂತೆ ಸಾಹಿತ್ಯ ಲೋಕದ ಹಲವರು ಪುಸ್ತಕಗಳನ್ನು ದಾನವಾಗಿ ನೀಡಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಜತಗೆ ನಗರದ ಗರುಡ ಮಾಲ್‌ ಮತ್ತು ರಾಜರಾಜೇಶ್ವರಿ ನಗರದ ಗೋಪಾಲನ್‌ ಅರ್ಕೇಡ್‌ ಮಾಲ್‌ನಲ್ಲಿ ನಡೆದ ಪುಸ್ತಕ ದಾನ ಅಭಿಯಾನದಲ್ಲಿ ಸುಮಾರು ಏಳು ನೂರು ಪುಸ್ತಕಗಳನ್ನು ದಾನ ರೂಪದಲ್ಲಿ ಸಾರ್ವಜನಿಕರು ಗ್ರಂಥಾಲಯ ಇಲಾಖೆಗೆ ನೀಡಿದ್ದಾರೆ.

ಕಾದಂಬರಿಕಾರ ಡಾ.ಯು.ಆರ್‌.ಅನಂತಮೂರ್ತಿ ಅವರ “ಯುಗಪಲ್ಲಟ, ದೇವನೂರು ಮಹಾದೇವರ “ಎದೆಗೆ ಬಿದ್ದ ಅಕ್ಷರ, ಜಿ.ಪಿ.ರಾಜರತ್ನಂ ಅವರ “ರಾಬಿನ್‌ ಹುಡ್‌, ಬೆಳೆಗೆರೆ ಕೃಷ್ಣಶಾಸಿಗಳ “ಸಾಹಿತಿಗಳ ಸ್ಮತಿ, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ “ಕುವೆಂಪು ನಾಟಕಗಳ ಅಧ್ಯಯನ’ ಕೆ.ವಿ.ತಿರುಮಲೇಶ್‌ ಅವರ “ಜ್ಞಾನ-ವಿಜ್ಞಾನ ತತ್ವಜ್ಞಾನ’ ಸೇರಿದಂತೆ ನಾಡಿನ ಖ್ಯಾತ ಕಾದಂಬರಿಕಾರರ ಮತ್ತು ಸಾಹಿತಿಗಳ ಕೃತಿಗಳು ದಾನ ರೂಪದಲ್ಲಿ ಕೇಂದ್ರ ಗ್ರಂಥಾಲಯ ಶಾಖೆ ಸೇರಿವೆ.

ಸ್ಪರ್ಧಾತ್ಮಕ ಪುಸ್ತಕಗಳ ದಾನ:  ನ.5 ರಂದು ಗರುಡ ಮಾಲ್‌ನಲ್ಲಿ ನಡೆದ ಪುಸ್ತಕದಾನದ ಅಭಿಯಾನದಲ್ಲಿ ಮೂರು ನೂರು ಕೃತಿಗಳು ಮತ್ತು ನ. 13 ರಂದು ರಾಜರಾಜೇಶ್ವರಿ ನಗರ ವ್ಯಾಪ್ತಿಯ ಗೋಪಾಲನ್‌ ಮಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿಯಾನದಲ್ಲಿ ವಿವಿಧ ಲೇಖಕರ ಮತ್ತು ಕವಿಗಳ ಸುಮಾರು ನಾಲ್ಕು ನೂರು ಕೃತಿಗಳನ್ನು ಸಾರ್ವಜನಿಕರು ನೀಡಿದ್ದಾರೆ. ಇದರಲ್ಲಿ ಕೆಎಎಸ್‌, ಐಎಎಸ್‌, ರೈಲ್ವೆ, ಎಫ್ಡಿಎ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪುಸ್ತಕಗಳ ಜತೆಗೆ ವಿಜ್ಞಾನ- ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳು ಕೂಡ ಸೇರಿವೆ.  

ಪ್ರಕಾಶಕರಿಂದಲೂ ದಾನ: ಸಾರ್ವಜನಿಕ ಗ್ರಂಥಾಲಯ ಇಲಾಖೆ ರೂಪಿಸಿರುವ ಪುಸ್ತಕದಾನ ಅಭಿಯಾನಕ್ಕೆ ನಾಡಿನ ಪುಸ್ತಕ ಪ್ರಕಾಶಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಪ್ನ ಬುಕ್‌ ಹೌಸ್‌ನ, ಅಂಕಿತ ಪ್ರಕಾಶ, ಅಕ್ಷರ ಪ್ರಕಾಶನ, ನವಪುಸ್ತಕ ಪ್ರಕಾಶನ ಸೇರಿದಂತೆ ಹಲವು ಪುಸ್ತಕ ಪ್ರಕಾಶಕರು ನೂರಕ್ಕೂ ಅಧಿಕ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ನೀಡಿದ್ದಾರೆ.

ಸಾಹಿತ್ಯವಲಯ ಕೂಡ ಪುಸ್ತಕದಾನ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ಹಲವು ಸಾಹಿತಿಗಳು ತಮ್ಮಲ್ಲಿರುವ ಪುಸ್ತಕಗಳನ್ನು ದಾನವಾಗಿ ನೀಡಲು ಮುಂದೆ ಬಂದಿದ್ದಾರೆ ಎಂದು ಗ್ರಂಥಾಲಯ ಇಲಾಖೆಯ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ನಾನೂ ಪುಸ್ತಕ ದಾನ ಮಾಡುತ್ತೇನೆ: ಗ್ರಂಥಾಲಯ ಇಲಾಖೆ ರೂಪಿಸಿರುವ ಈ ಕಾರ್ಯಕ್ರಮ ಹೆಮ್ಮಪಡುವಂತಹದ್ದಾಗಿದೆ. ಇದಕ್ಕೆ ಇಡೀ ಸಾಹಿತ್ಯ ಲೋಕವೆ  ಕೈಜೋಡಿಸಬೇಕು. ಹಲವರು ಪುಸ್ತಕಗಳನ್ನು ಓದಿ ಮನೆಯಲ್ಲಿ ಹಾಗೇ ಇಟ್ಟಿರುತ್ತಾರೆ. ಇನ್ನೂ ಕೆಲವರು ರದ್ದಿಗೆ ಹಾಕುತ್ತಾರೆ. ಇಂತವರು ಪುಸ್ತಕಗಳನ್ನು ಮಾರಾಟಮಾಡದೇ ದಾನ ರೂಪದಲ್ಲಿ ನೀಡಬೇಕು ಎಂದು ದಲಿತ ಕವಿ ಸಿದ್ಧಲಿಂಗಯ್ಯ ಹೇಳುತ್ತಾರೆ. 

ಒಂದು ಲಕ್ಷ ಪುಸ್ತಕ ದಾನ: ಕನ್ನಡ ಮತ್ತು ಸಂಸ್ಕತಿ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಬರುವ ಪ್ರಾಧಿಕಾರಗಳು ಪ್ರಕಟಿಸಿರುವ ಸುಮಾರು ಒಂದು ಲಕ್ಷ ಪುಸ್ತಕಗಳನ್ನು ಈಗಾಗಲೇ ಗ್ರಂಥಾಲಯ ಇಲಾಖೆಗೆ ನೀಡಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ವಸುಂಧರಾ ಭೂಪತಿ ಅವರು ಕೂಡ ಪ್ರಾಧಿಕಾರ ಪ್ರಕಟಿಸಿದ ನಲವತ್ತೈದು ಸಾವಿರ ಪುಸ್ತಕಗಳನ್ನು ನೀಡಿದ್ದಾರೆ.

ಜತಗೆ ಕುವೆಂಪು ಭಾಷಾ ಪ್ರಾಧಿಕಾರ ಕೂಡ ತಾನು ಪ್ರಕಟಿಸಿದ ಮೂವತೈದು ಸಾವಿರ ಪುಸ್ತಕಗಳನ್ನು ಸಚಿವೆ ಜಯಮಾಲ ಅವರ ಸಮ್ಮುಖದಲ್ಲಿಯೇ ಗ್ರಂಥಾಲಯಕ್ಕೆ ನೀಡಲು ಸಮ್ಮತಿಸಿದೆ. ಇದೇ ಹಾದಿಯಲ್ಲಿ ಕಸಾಪ ಕೂಡ ಸಾಗಿದ್ದು, ಕಸಾಪ ಪ್ರಕಟಿಸಿರುವ ಸುಮಾರು ಐದು ಸಾವಿರ ಪುಸ್ತಕಗಳನ್ನು ದಾನ ಮಾಡುವುದಾಗಿ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಹೇಳಿದ್ದಾರೆ.

ಗ್ರಂಥಾಲಯ ಇಲಾಖೆ ರೂಪಿಸಿರುವ ಪುಸ್ತಕ ದಾನ ಅಭಿಯಾನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಅಲ್ಲದೆ ಸಾವಿರಾರು ಪುಸ್ತಕಗಳು ದಾನ ರೂಪದಲ್ಲಿ ಬಂದಿವೆ. ಹೀಗಾಗಿ ಈ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ವಿಸ್ತರಣೆ ಮಾಡಲಾಗುವುದು.
-ಡಾ.ಸತೀಶ್‌ ಎಸ್‌.ಹೊಸಮನಿ, ಗ್ರಂಥಾಲಯ ಇಲಾಖೆ ನಿರ್ದೇಶಕ

ನಾನು ಕೂಡ ನನ್ನಲ್ಲಿರುವ ಅನೇಕ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ದಾನ ರೂಪದಲ್ಲಿ ನೀಡಿ ಓದುಗರನ್ನು ಪ್ರೋತ್ಸಾಹಿಸಿದ್ದೇನೆ
-ಸಿದ್ದಲಿಂಗಯ್ಯ, ಕವಿ, ಸಾಹಿತಿ

* ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.