ವಿಪತ್ತು ನಿರ್ವಹಣೆಗೆ ವಿಮಾನ ನಿಲ್ದಾಣದಲ್ಲಿ ಅಣಕು ಪ್ರದರ್ಶನ
Team Udayavani, Nov 18, 2018, 12:26 PM IST
ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಶನಿವಾರ ವಿಷಪೂರಿತ ಪರಮಾಣು ಹಾಗೂ ರಸಾಯನಿಕ ಸೋರಿಕೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು! ಮಾಹಿತಿ ತಿಳಿದ ಕೆಲಹೊತ್ತಿನಲ್ಲಿ ಸ್ಥಳಕ್ಕೆ ಧಾವಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಸಾಯನಿಕ ಸೋರಿಕೆ ವಿಫಲಗೊಳಿಸಿ ಸಂಕಷ್ಟಕ್ಕೀಡಾದವರನ್ನು ಪಾರು ಮಾಡಿತು. ಹೌದಾ? ಎಂದು ಹುಬ್ಬೇರಿಸಬೇಡಿ!
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಚಾನಕ್ ಆಗಿ ವಿಷಪೂರಿತ ರಸಾಯನಿಕ, ಪರಮಾಣು, ಜೈವಿಕ ಇಂಧನಗಳು ಸೋರಿಕೆ ಆದರೆ ಅಥವಾ ದಾಳಿ ನಡೆದರೆ ಯಾವ ರೀತಿ ಸಾರ್ವಜನಿಕರು ಸ್ಪಂದಿಸಬೇಕು, ರಕ್ಷಣಾ ಕಾರ್ಯ ಹೇಗೆ ನಡೆಯಲಿದೆ ಎಂದು ಎನ್ಡಿಆರ್ಎಫ್ ತಂಡ ಅಣಕು ಪ್ರದರ್ಶನ ನೀಡಿದ ಬಗೆ ಇದು.
ವಿಮಾನ ನಿಲ್ದಾಣದ ಆವರಣದಲ್ಲಿ ನಡೆದ ಅಣಕು ಪ್ರದರ್ಶನದಲ್ಲಿ, ರಸಾಯನಿಕ ವಸ್ತುಗಳ ಸೋರಿಕೆ ಹಾಗೂ ದಾಳಿ ನಡೆದರೆ ಪರಿಸ್ಥಿತಿ ಹೇಗಿರಲಿದೆ? ಸಾರ್ವಜನಿಕರು ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿ ಹೇಗೆ ಪ್ರತಿಕ್ರಿಯಿಸಬೇಕು. ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಲಿದೆ ಎಂಬುದರ ಬಗ್ಗೆ ಎನ್ಡಿಆರ್ಎಫ್ ತಂಡ ಕಣ್ಣಿಗೆ ಕಟ್ಟಿದಂತೆ ಅಣಕು ಪ್ರಯೋಗ ತೋರಿಸಿಕೊಟ್ಟಿತು.
ಈ ರೀತಿಯ ದಾಳಿಗಳು ನಡೆದರೆ ಮೊದಲು ಗಮನಿಸಿದರೆ ಸಹಾಯಕ್ಕೆ ಕಿರುಚಿಕೊಳ್ಳಬೇಕು. ಬಳಿಕ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಆಗಮಿಸುವ ಎನ್ಡಿಆರ್ಎಫ್ ಸಿಬ್ಬಂದಿ 4 ತಂಡಗಳಲ್ಲಿ ಕಾರ್ಯನಿರ್ವಹಿಸಲಿದೆ. ರಕ್ಷಣಾ ತಂಡ, ರಸಾಯನಿಕ ಸೋರಿಕೆ ವಿಫಲಗೊಳಿಸುವ ತಂಡ, ವೈದ್ಯಕೀಯ ತಂಡ, ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ವಿಕಿರಣ ಸೋಂಕದಂತೆ ಅವರ ರಕ್ಷಣೆಗೆ ಒಂದು ಪ್ರತ್ಯೇಕ ತಂಡ ಕಾರ್ಯನಿರ್ವಹಿಸಲಿದೆ.
50 ಮಂದಿಗೆ ತರಬೇತಿ: ಕೇಂದ್ರ ಗೃಹ ಇಲಾಖೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸನ್ ಆ್ಯಂಡ್ ಅಲೈಡ್ ಸೈನ್ಸ್ ( ಐಎನ್ಎಂಎಸ್) ಜಂಟಿ ಸಹಯೋಗದಲ್ಲಿ ಕಳೆದ ಒಂದು ವಾರದಿಂದ ರಸಾಯನಿಕ ಸೋರಿಕೆ ಹಾಗೂ ದಾಳಿ ಘಟನೆಗಳು ನಡೆದಾಗ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ವಿಮಾನನಿಲ್ದಾಣ ಸಿಬ್ಬಂದಿ ಹಾಗೂ ಎಸ್ಡಿಆರ್ಎಫ್ನ 50 ಕ್ಕೂ ಅಧಿಕ ಮಂದಿಗೆ ತರಬೇತಿ ಕಾರ್ಯಾಗಾರ ನೀಡಲಾಗಿದೆ ಎಂದು ಎಸ್ಡಿಆರ್ಎಫ್ನ ಕಮಾಡೆಂಟ್ ಆಫೀಸರ್ ಡಾ. ಚೇತನ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?